ಭಟ್ಕಳ (Bhatkal) : ಪ್ಯಾಸೆಂಜರ್‌ ಆಟೋ ರಿಕ್ಷಾ ಮತ್ತು ವಾಕರಸಾ ಸಂಸ್ಥೆಯ (NWKRTC) ಬಸ್‌ ನಡುವೆ ಡಿಕ್ಕಿ ಸಂಭವಿಸಿ, ಗಾಯಗೊಂಡ ಆಟೋ ರಿಕ್ಷಾ ಚಾಲಕನ ವಿರುದ್ಧ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (Complaint Filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಳ್ವೆಕೋಡಿಯ ಸಣಭಾವಿ ನಿವಾಸಿ, ಪ್ಯಾಸೆಂಜರ್‌ ಆಟೋ ರಿಕ್ಷಾ ಚಾಲಕ ಸದಾನಂದ ಮಾಸ್ತಿ ಮೊಗೇರ ಗಾಯಗೊಂಡವರು. ಇವರ ವಿರುದ್ಧ ಭಟ್ಕಳ ಘಟಕದ ಬಸ್‌ ಚಾಲಕ, ಕುಮಟಾ ತಾಲೂಕಿನ ಮಿರ್ಜಾನ ಖೈರೆ ನಿವಾಸಿ ಜನಾರ್ಧನ ಅನಂತ ನಾಯ್ಕ (೫೨) ದೂರು ದಾಖಲಿಸಿದವರು. ಜೂ.೨ರಂದು ಮಧ್ಯಾಹ್ನ ೧೧.೪೫ರ ಸುಮಾರಿಗೆ ಬೆಂಗ್ರೆಯ ಕಾಮತ ಕ್ಯಾಂಟೀನ್‌ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ : missing/ ಅಳ್ವೆಕೋಡಿ ಬಂದರಿನಲ್ಲಿ ಕಾರು ಪತ್ತೆ; ವ್ಯಕ್ತಿ ನಾಪತ್ತೆ

ಹೊನ್ನಾವರ (Honnavar) ಕಡೆಯಿಂದ ಭಟ್ಕಳ ಕಡೆಗೆ ವೇಗವಾಗಿ ಬಂದ ಆಟೋ ರಿಕ್ಷಾ ಅಳ್ವೆಕೋಡಿಗೆ ಹೋಗಲು ಒಮ್ಮೇಲೆ ಬಲಕ್ಕೆ ತಿರುಗಿಸಿದ್ದರಿಂದ ಅಪಘಾತ ನಡೆದಿದೆ. ವಾಕರಸಾ ಸಂಸ್ಥೆಯ ಬಸ್ಸಿನ ಎಡ ಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದಿಂದ ಪ್ಯಾಸೆಂಟರ್‌ ಆಟೋ ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ. ಮುರ್ಡೇಶ್ವರ (Murdeshwar) ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.