ಭಟ್ಕಳ (Bhatkal): ಇಲ್ಲಿನ ವಿಶ್ವಕರ್ಮ (Vishwakarma) ಗೆಳೆಯರ ಬಳಗದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ೯ನೇ ಹಂತದ ಮನೆಗೊಂದು ಗಿಡ ಅಭಿಯಾನದ ವನಮಹೋತ್ಸವ (plantation) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರತಿ ವರ್ಷವೂ ೨೦೦ ಮನೆಗಳಿಗೆ ತೆರಳಿ ಗಿಡಗಳನ್ನು ನೀಡಿ ಬೆಳೆಸುವ ಜವಾಬ್ದಾರಿ ನೀಡುವುದು ಸಂಘದ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ಭಟ್ಕಳದ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ನೀರೀಕ್ಷಕ ಕುಸುಮಾಧರ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು.

ಇದನ್ನು ಓದಿ: house theft/ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಚಾರ್ಯ ಶ್ರೀನಾಥ ಪೈ ಮಾತನಾಡಿ, ಗಿಡ ನೆಡುವುದರ (plantation) ಮಹತ್ವವನ್ನು ಮನನ ಮಾಡಿಕೊಂಡು ಮನೆಗೊಂದು ಗಿಡ ಅಭಿಯಾನಕ್ಕೆ (plantation)ಪ್ರತಿಯೊಬ್ಬರೂ ಕೈ ಜೋಡಿಸಲಿ ಎಂದು ಹಾರೈಸಿದರು.

ಇದನ್ನು ಓದಿ: cyber crime/ ಅತಿಯಾಸೆ ಮಾಡಿದವಗೆ ೯.೨೩ ಲಕ್ಷ ರೂ. ಟೋಪಿ

ಅತಿಥಿಗಳಾಗಿ ಭಟ್ಕಳದ ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೋಕ್ತೇಸರ ಗಜಾನನ ಎನ್ ಆಚಾರ್ಯ, ಭಟ್ಕಳದ ಶಿರಾಲಿಯ ಶ್ರೀವಲ್ಲಿ ಪ್ರೌಢಶಾಲೆ ಶಿಕ್ಷಕ ಸಂಜಯ ಗುಡಿಗಾರ, ಭಟ್ಕಳ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್ ಗೌರವಾಧ್ಯಕ್ಷ ಗುಂಡು ಆಚಾರ್ಯ, ಉಪ ವಲಯ ಅರಣ್ಯಾಧಿಕಾರಿ ಮಾರುತಿ ಸರ್ಗಾವಿ, ಕರ್ನಾಟಕ ವಿಶ್ವಕರ್ಮ ನಿಗಮ ಮಂಡಳಿಯ ಮಾಜಿ ಸದಸ್ಯ ಗಜಾನನ ಎಸ್ ಆಚಾರ್ಯ ವೆಂಕಟಾಪುರ ಭಾಗವಹಿಸಿ ಮಾತನಾಡಿದರು.

ಇದನ್ನು ಓದಿ: no holiday/ ಶಾಲೆಗಳಿಗಿಲ್ಲ ರಜೆ; ಪಾಲಕರ ಆಕ್ರೋಶ

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಗೆಳೆಯರ ಬಳಗದ ಅಧ್ಯಕ್ಷ ಗಜಾನನ ಕೆ ಆಚಾರ್ಯ ಮಾತನಾಡಿ, ಮರ ಕಡಿಯುವವರಿಗಿಂತ ಮರ ನೆಡುವವರ ಸಂಖ್ಯೆ ಹೆಚ್ಚಾದಾಗ ಮಾತ್ರ ಮರಗಳ ಸಂಖ್ಯೆ ಹೆಚ್ಚಾಗಲು ಸಾಧ್ಯ ಎಂದು ಹೇಳಿದರು. ರವಿ ಆರ್ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುರೇಶ ಆಚಾರ್ಯ ನಿರೂಪಿಸಿ, ವಂದಿಸಿದರು. ನಂತರ ಮನೆಮನೆಗೆ ತೆರಳಿ ಗಿಡಗಳನ್ನು ವಿತರಿಸಲಾಯಿತು.

ಇದನ್ನು ಓದಿ: rain damage/ ಭಟ್ಕಳದಲ್ಲಿ ಭಾರೀ ಮಳೆಗೆ ಅಪಾರ ಹಾನಿ