ಕಾರವಾರ (Karwar) : ಪ್ರಸಕ್ತ ಸಾಲಿನ ಯುಗಾದಿ (Ugadi) ಮತ್ತು ರಂಜಾನ (Ramadan) ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾಕರಸಾ ಸಂಸ್ಥೆಯ (NWKRTC) ವ್ಯಾಪ್ತಿಯ ಹುಬ್ಬಳ್ಳಿ (Hubballi), ಧಾರವಾಡ (Dharwad), ಗದಗ (Gadag), ಬೆಳಗಾವಿ (Belagavi), ಉತ್ತರ ಕನ್ನಡ (Uttara Kannada), ಹಾವೇರಿ(Haveri), ಚಿಕ್ಕೋಡಿ (Chikkodi) ಮತ್ತು ಬಾಗಲಕೋಟೆ (Bagalkot) ವಿಭಾಗಗಳಿಂದ ಸುಮಾರು ೧೩೭ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು (Special Buses) ಕಾರ್ಯಾಚರಣೆ ಮಾಲಾಗುತ್ತಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾ. ೨೮ ಶುಕ್ರವಾರ ಮತ್ತು ಮಾ. ೨೯ ಶನಿವಾರ ವಾರಾಂತ್ಯ ದಿನಗಳ ಹಾಗೂ ಮಾ.೩೦ ರಂದು ಯುಗಾದಿ ಮತ್ತು ಮಾ.೩೧ ರಂದು ರಂಜಾನ್ ಹಬ್ಬವಿದೆ. ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಬೆಂಗಳೂರಿನಿಂದ ರಾಜ್ಯ/ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಮಾ.೨೮ ರಿಂದ ಮಾ.೩೦ರವರೆಗೆ ಹೆಚ್ಚುವರಿ ವಿಶೇಷ ಸಾರಿಗೆ (Special Buses) ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : recruitment Exam/ ಕಾರವಾರದ ಪ್ರಾಧ್ಯಾಪಕನ ವಿರುದ್ಧ ಮೈಸೂರಿನಲ್ಲಿ ದೂರು