ಭಟ್ಕಳ (Bhatkal): ಅರಬ್ಬಿ ಸಮುದ್ರದಲ್ಲಿ (Arabian Sea) ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ (coastal districts) ಮಳೆಯ ಆರ್ಭಟ  ಮುಂದುವರೆದಿದೆ.  ಜನರು ಎಚ್ಚರಿಕೆಯಿಂದ ಇರುವಂತೆ ಕೆಲವೊಂದು ಮುಂಜಾಗ್ರತಾ ಕ್ರಮವನ್ನು ಸಹ ಜಿಲ್ಲಾಡಳಿತದಿಂದ ನೀಡಲಾಗಿದೆ. ಆದರೆ, ಇದ್ಯಾವುದೂ ಸಹ ಮುರುಡೇಶ್ವರಕ್ಕೆ (Murdeshwar) ಅನ್ವಯವಾಗಿಲ್ಲ ಎಂಬಂತೆ ಭಾಸವಾಗುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸತತ ಮಳೆಯ ಹಿನ್ನೆಲೆ  ಭಟ್ಕಳ ತಾಲೂಕು ಸೇರಿದಂತೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆಯ ಅವಾಂತರ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.   ಕರಾವಳಿ ಭಾಗಗಳಿಗೆ ಹೈ ಅಲರ್ಟನ್ನು (High Alert) ಜಿಲ್ಲಾಡಳಿತ ಘೋಷಿಸಿದೆ. ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ (Murdeshwar) ಸಮುದ್ರ ತೀರದಲ್ಲಿ ಮುಂದಿನ ಕೆಲ ದಿನಗಳ ಕಾಲ ಬಿರುಗಾಳಿ ಸಹಿತ ಮಳೆ ಬೀಸುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.  ಸಮುದ್ರದಲ್ಲಿ ೩ ರಿಂದ ೪ ಮೀಟರ್‌ನಷ್ಟು ಎತ್ತರದ ಅಲೆಗಳು ಏಳಲಿವೆ. ಇದರಿಂದ ಪ್ರವಾಸಿಗರು (tourists), ಮೀನುಗಾರರು (fishermen) ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ : Three Arrest/ ಭಟ್ಕಳದಲ್ಲಿ ಜಾನುವಾರು ಸಾಗಾಟ; ಮೂವರ ಬಂಧನ

ಆದರೆ ಜಿಲ್ಲಾಡಳಿತದ ಈ ಮುನ್ನೆಚ್ಚರಿಕೆಯು ಮುರುಡೇಶ್ವರಕ್ಕೆ (Murudeshwar) ಅನ್ವಯಿಸಿಲ್ಲ. ಇಲ್ಲಿಗೆ ಬರುವಂತಹ ಪ್ರವಾಸಿಗರು ಇದ್ಯಾವುದನ್ನೂ ಲೆಕ್ಕಿಸದೆ ಸಮುದ್ರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳು ರೌದ್ರವಾಗಿರುತ್ತವೆ. ನೀರಿಗೆ ಇಳಿದ ತಕ್ಷಣವೇ ಆಳಕ್ಕೆ ಎಳೆದೊಯ್ಯುತ್ತದೆ. ಬೇಸಿಗೆಯಲ್ಲಿರುವಷ್ಟು ಶಾಂತತೆ ಮಳೆಗಾಲದಲ್ಲಿ ಕಡಲತೀರದಲ್ಲಿ ಇರುವುದಿಲ್ಲ. ಸ್ಥಳೀಯರು ಇದನ್ನು ತಿಳಿಹೇಳಿದರೂ ಕೆಲ ಪ್ರವಾಸಿಗರು ಕೇಳುವುದಿಲ್ಲ ಎಂಬುದು ಸ್ಥಳೀಯರ ಚಿಂತೆಯಾಗಿದೆ.

ಇದನ್ನೂ ಓದಿ : Red Alert/ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ ೨೭ರವರೆಗೆ ರೆಡ್‌ ಅಲರ್ಟ್‌ !

ತಾಲೂಕಾಡಳಿತ- ಪೊಲೀಸ್‌ ಇಲಾಖೆ ನಿರ್ಲಕ್ಷ್ಯ : ಮುಖ್ಯವಾಗಿ ಪ್ರವಾಸಿಗರು ಮೋಜು ಮಸ್ತಿಗೆ ಸಮುದ್ರಕ್ಕೆ ಇಳಿಯದಂತೆ ಇಲ್ಲಿನ ತಾಲೂಕಾಡಳಿತ ಗಮನ ಹರಿಸಬೇಕಿತ್ತು. ಮುರುಡೇಶ್ವರ ಠಾಣೆ ಪೊಲೀಸರು ಜಿಲ್ಲಾಡಳಿತದ  ಸೂಚನೆಗೆ ತಕ್ಕಂತೆ ಸಮುದ್ರ ತೀರದಲ್ಲಿ ಸಿಬ್ಬಂದಿ ನೇಮಿಸಬೇಕಿತ್ತು. ಯಾವೊಬ್ಬ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ, ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ : Kattalan/ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ “ಕಾಟ್ಟಾಲನ್‌” ಸಿದ್ಧತೆ

ಲೈಫ್‌ ಗಾರ್ಡ್‌ಗಳಿಗೆ ತಲೆ ನೋವು : ಪದೇ ಪದೇ ಸಮುದ್ರಕ್ಕೆ ಈಜಲು ತೆರಳಬೇಡಿ ಎಂದರೂ ನಮ್ಮ ಮಾತನ್ನು ಕೇಳದೆ ಪ್ರವಾಸಿಗರು ಜೀವ ಕಳೆದುಕೊಳ್ಳುವ ಪರಿಸ್ಥಿತಿ‌ ಮಾಡಿಕೊಳ್ಳುತ್ತಾರೆ. ನಾವು ಈ ಚಂಡಮಾರುತದ ವೇಳೆಯಲ್ಲಿ‌ ಸಮುದ್ರಕ್ಕೆ ಪ್ರವಾಸಿಗರು ಇಳಿಯದಂತೆ ನೋಡಿಕೊಳ್ಳುತ್ತೇವೆ. ಆದರೆ ಬಹುತೇಕರು ಜೀವದ ಭಯವಿಲ್ಲದೆ ನಮ್ಮ ಮಾತಿಗೂ ಬೆಲೆಕೊಡದೆ ಈಜಲು ತೆರಳುತ್ತಾರೆ. ಆಗ ಏನಾದರು ಅವಘಡ ಸಂಭವಿಸಿದರೆ ನಮ್ಮ ಜೀವದ ಹಂಗು ತೊರೆದು ಕಾಪಾಡುತ್ತೇವೆ. ಜಿಲ್ಲಾಢಳಿತ ಸೂಚನೆಗೂ ಪ್ರವಾಸಿಗರು ಬೆಲೆ ಕೊಡುವುದಿಲ್ಲ ಎಂದು ಓರ್ವ ಲೈಫ್‌ ಗಾರ್ಡ್‌ ತಮ್ಮ ಅಸಹಾಯಕತೆಯನ್ನು ತೊಡಿಕೊಂಡಿದ್ದಾರೆ.

ಇದನ್ನೂ ಓದಿ : alcohol addiction/ ಭಟ್ಕಳದಲ್ಲಿ ಸಾರಾಯಿ ಚಟಕ್ಕೆ ಇಬ್ಬರ ಸಾವು