ಭಟ್ಕಳ: ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕೋತ್ಸವವು (Anual day) ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾದ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಗಣೇಶ ಭಟ್ಟ, ಶ್ರದ್ಧೆಯಿಂದ ಸತತವಾಗಿ ಪ್ರಯತ್ನಿಸಿದಾಗ ಯಾವುದೇ ಗುರಿಯನ್ನು ತಲುಪಬಹುದು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಿ ಯಶಸ್ಸನ್ನು ಪಡೆಯಲಿ ಎಂದು ಕರೆ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಯಕ್ಷಗಾನ ಕಲಾವಿದ (Yakshagana Artist) ಹಾಗೂ ವೀರ ಚಂದ್ರಹಾಸ (Veera Chandrahasa) ಚಲನಚಿತ್ರದ ನಟ, ಪ್ರಸನ್ನ ಶೆಟ್ಟಿಗಾರ ಮಾತನಾಡಿ, ಬದುಕಿನಲ್ಲಿ ಚಿಂತಿಸದೇ, ಬಂದ ಅವಕಾಶಗಳನ್ನು ಸ್ವೀಕರಿಸಿ ಹಾಗೂ ಆ ಕುರಿತು ಚಿಂತಿಸಿದಾಗ ಮಾತ್ರ ಆಗಲೇ ಅತ್ಯುತ್ತಮ ಸಾಧನೆಗೈಯಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕುಮಟಾದ (Kumta) ಕಂದಾಯ ಅಧಿಕಾರಿ, ಕಾಲೇಜಿನ ಬಿಎ ವಿಭಾಗದ ಪೂರ್ವ ವಿದ್ಯಾರ್ಥಿ ವೆಂಕಟೇಶ ಮಾತನಾಡಿ, ಕಾಲೇಜಿನಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸಿದರು. ತನ್ನ ಯಶಸ್ಸಿನಲ್ಲಿ ಕಾಲೇಜಿನ ಪಾತ್ರ ಬಹುಮುಖ್ಯ, ಕಾಲೇಜಿಗೆ ಸದಾ ಋಣಿಯಾಗಿರುವೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : rain update / ಭಟ್ಕಳದಲ್ಲಿ ೨೬೦.೪ ಮಿಮೀ ಮಳೆ ದಾಖಲು
ಕಾರ್ಯಕ್ರಮದ (Anual day) ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ ಅಧ್ಯಕ್ಷ ಡಾ. ಸುರೇಶ ನಾಯಕ, ಮೂರು ವರ್ಷದ ಪದವಿಯಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಂಡು ಉದ್ಯೋಗವಂತರಾಗಬೇಕು ಎಂದು ಹೇಳಿದರು. ಟ್ರಸ್ಟಿ ನಾಗೇಶ ಭಟ್ಟ, ಬಿಎ ಪತ್ರಿಕೋದ್ಯಮ ವಿಭಾಗದವರು ರಚಿಸಿದ ಎಸ್.ಜಿ.ಎಸ್. ಸಮೃದ್ಧಿ ಪತ್ರಿಕೆಯ ೩ನೇ ಸಂಚಿಕೆಯನ್ನು ಆನಾವರಣಗೊಳಿಸಿದರು.
ಇದನ್ನೂ ಓದಿ : Elderly woman dies/ ಕಣ್ಣು ಕಾಣದೆ ನದಿಯಲ್ಲಿ ಬಿದ್ದು ವೃದ್ಧೆ ದುರ್ಮರಣ
೨೦೨೪-೨೫ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿ.ಬಿ.ಎ.-ಬಿ.ಎ. ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ದಿಕ್ಸಿತಾ ಹಾಗೂ ನೇಹಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ : Road block/ ಭಟ್ಕಳ ಮಾವಿನಕುರ್ವೆಯಲ್ಲಿ ಸಂಚಾರ ನಿಷೇಧ