ಭಟ್ಕಳ (Bhatkal): ಇಲ್ಲಿನ ಮೂಡಭಟ್ಕಳದ ಪುರಾತನ ಶಿಲ್ಪಕಲೆ ಸೌಂದರ್ಯಕ್ಕೆ ಹೆಸರಾದ ಶ್ರೀ ಖೇತಪೈ ನಾರಾಯಣ (Khethapai Narayan) ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು (Brahmakalashotsav) ಮಾ. ೨ ರವಿವಾರದಿಂದ ಮಾ. ೪ ಮಂಗಳವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೇವಸ್ಥಾನದ ಆವರಣದಲ್ಲಿ ದೇವಸ್ಥಾನ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ವೆಂಕಟೇಶ ತಿಮ್ಮಯ್ಯ ನಾಯ್ಕ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ೧೫೪೫ರಲ್ಲಿ ಗೋವಾದ (Goa) ಕುಡತಿರಿಯಿಂದ ಭಟ್ಕಳಕ್ಕೆ (Bhatkal) ಬಂದಿದ್ದ ಚಿನ್ನದ ವ್ಯಾಪಾರಿ ಸಾರಸ್ವತ (Saraswat) ಖೇತಪೈ ಎಂಬುವರು ಈ ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿದರು. ಈ ಸಂದರ್ಭದಲ್ಲಿ ರಾಣಿ ಚೆನ್ನಭೈರಾದೇವಿ (chennabhairadevi) ಈ ದೇವಾಲಯಕ್ಕೆ ಅನುದಾನ ನೀಡಿದ್ದಾಳೆ ಎಂಬ ಶಾಸನ ಇದೆ. ಈ ದೇವಾಲಯದ ಬಗ್ಗೆ ಆರು ಶಾಸನಗಳ ದಾಖಲೆ ಇದೆ. ಈ ಭಾಗದಲ್ಲಿ ಸಾರಸ್ವತರು ಈ ದೇವಸ್ಥಾನವಲ್ಲದೇ ಒಟ್ಟು ೧೨ ದೇವಸ್ಥಾನ ನಿರ್ಮಿಸಿದ್ದಾರೆ ಎಂದರು.

ಇದನ್ನೂ ಓದಿ: Cancer Day/ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೇಷನ್ ಅಕಾಲಜಿಯ ಪಾತ್ರ

ಪುರಾತನವಾದ ದೇವಸ್ಥಾನವನ್ನು ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿದ್ದೇವೆ. ಮಾ. ೩ರಂದು ೧೧.೪೪ ಕ್ಕೆ ಸಲ್ಲುವ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ನಾರಾಯಣ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಗುರುಪುರದ ಶ್ರೀ (Gurupura shree) ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು ಎಂದರು.

ಇದನ್ನು ಓದಿ : Album release / ಭಕ್ತಿಗೀತೆಗಳ ಅಲ್ಬಮ್ ಬಿಡುಗಡೆ

ಅಂದು ಮಧ್ಯಾಹ್ನ ೧ ಗಂಟೆಯಿಂದ ೩ರ ತನಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳಿಂದ ಧಾರ್ಮಿಕ ಪ್ರವಚನ ಹಾಗೂ ಆಶೀರ್ವಚನ ನಡೆಯಲಿದೆ. ಶ್ರೀ ದೇವರಿಗೆ ಬೆಳ್ಳಿ ಕವಚ ಅರ್ಪಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಇದನ್ನು ಓದಿ : Mankal Vaidya/ ಗೋ ಕಳ್ಳರಿಗೆ ಸಚಿವ ಮಂಕಾಳ ವೈದ್ಯ ಖಡಕ್‌ ಎಚ್ಚರಿಕೆ

ಮಾ. ೨ರಂದು ಮತ್ತು ಮಾ.೩ ರಂದು ಸಂಜೆ ಧರ್ಮರಕ್ಷಣೆ ಧರ್ಮಪ್ರಚಾರ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ಸಮಾಜದ ಹಾಗೂ ದೇವಸ್ಥಾನಗಳ ಪ್ರಮುಖರು ಉಪಸ್ಥಿತರಿರುವರು ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟ್ರಮಣ ನಾಯ್ಕ, ಪ್ರಮುಖರಾದ ಶ್ರೀನಿವಾಸ ನಾಯ್ಕ, ಈಶ್ವರ ನಾಯ್ಕ, ರವಿಚಂದ್ರ ನಾಯ್ಕ, ನಾಗರಾಜ ಶೆಟ್ಟಿ, ಕುಮಾರ ನಾಯ್ಕ, ತಿರುಮಲ ನಾಯ್ಕ, ಕೃಷ್ಣ ನಾಯ್ಕ, ಪ್ರಶಾಂತ ಶೆಟ್ಟಿ, ಮೋಹನ ನಾಯ್ಕ ಉಪಸ್ಥಿತರಿದ್ದರು.

ಖೇತಪೈ ನಾರಾಯಣ ದೇವಸ್ಥಾನದ ವಿಡಿಯೋವನ್ನು  ಯೂಟ್ಯೂಬ್ಇನ್ಸ್ಟಾಗ್ರಾಂ  ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನು ಓದಿ : Bike Accident/ ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಸಾವು