ಭಟ್ಕಳ (Bhatkal): ಹಣವನ್ನು ಡಬ್ಲಿಂಗ್ ಮಾಡಿಕೊಡುತ್ತೇನೆಂದು ಹೆಳಿಕೊಂಡು ಮೋಸ ಮಾಡಿರುವ (money doubling fraud) ಬಗ್ಗೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗುತ್ತಿಗೆದಾರರಾದ ಮುರ್ಡೇಶ್ವರದ (Murudeshwar) ಹಿರೇದೊಮ್ಮಿ ಜೋಗಿಮನೆ ವಾಸಿ ಮಂಜುನಾಥ ಸಂಕಯ್ಯ ನಾಯ್ಕ (೩೫) ಮೋಸ ಹೋದವರು. ಅವರು ಭಟ್ಕಳದ ಗುಳ್ಮಿ ಬಿಲಾಲಖಂಡದ ಮೊಹಮ್ಮದ್ ಶಬ್ಬೀರ ಅಲ್ಲಾವುದ್ದೀನ್ (೫೨) ವಿರುದ್ಧ ದೂರು ದಾಖಲಿಸಿದ್ದಾರೆ (complaint filed). ಪೇಂಟಿಂಗ್ ಕೆಲಸ ಮಾಡುವ ಮೊಹಮ್ಮದ್ ಶಬ್ಬೀರ್ ಹಣವನ್ನು ಡಬ್ಲಿಂಗ್ ಮಾಡಿಕೊಡುತ್ತೇನೆಂದು ಹೇಳಿ ಮೇ ೨೭ರಂದು ಸಂಜೆ ೬ ಗಂಟೆಯ ಸುಮಾರಿಗೆ ೨.೧೦ ಲಕ್ಷ ರೂ. ತೆಗೆದುಕೊಂಡಿದ್ದರು. ಮತ್ತೆ ಮೇ ೨೯ರಂದು ಸಂಜೆ ೭.೩೦ರ ಸುಮಾರಿಗೆ ೧.೧೫ ಲಕ್ಷ ರೂ. ತೆಗೆದುಕೊಂಡಿದ್ದರು. ಒಟ್ಟು ೩.೨೫ ಲಕ್ಷ ರೂ. ತೆಗೆದುಕೊಂಡಿದ್ದರು. ಫೋನ್ ಮಾಡಿ ಕೇಳಿದರೆ ಕೊಡುತ್ತೇನೆ ಎಂದು ಸತಾಯಿಸಿ ಮೋಸ ಮಾಡಿದ್ದಾರೆ (money doubling fraud) ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : police operation/ ಭಟ್ಕಳ ಪೊಲೀಸರ ಕಾರ್ಯಾಚರಣೆ; ಐವರು ವಶಕ್ಕೆ