ಮುಂಬೈ (Mumbai): ಮಸ್ಕತ್‌ಗೆ ೧.೧೮ ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ವಜ್ರಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ೪೫ ವರ್ಷದ ವ್ಯಕ್ತಿಯನ್ನು ಏರ್‌ಪೋರ್ಟ್ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯುನಿಟ್ (AIU) ಬಂಧಿಸಿದೆ (Arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತ ವ್ಯಕ್ತಿಯನ್ನು ಭಟ್ಕಳ ನಿವಾಸಿ ಎ.ಆರ್‌.ಖತೀಬ್‌ ಎಂದು ಗುರುತಿಸಲಾಗಿದೆ. ಈತ ಕೆಲವು ವ್ಯಕ್ತಿಗಳನ್ನು ತನ್ನ ಹ್ಯಾಂಡ್ಲರ್‌ಗಳೆಂದು ತಿಳಿಸಿದ್ದಾನೆ ಎಂದು ಏಜೆನ್ಸಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಕಸ್ಟಮ್ಸ್ ಮೂಲಗಳ ಪ್ರಕಾರ, ಖತೀಬ್ ಮುಂಬೈನಿಂದ ಮಸ್ಕತ್‌ಗೆ ತೆರಳುತ್ತಿದ್ದಾಗ ಪೊಲೀಸರರು ವಶಕ್ಕೆ ಪಡೆದಿದ್ದಾರೆ(Arrested).

ಇದನ್ನೂ ಓದಿ : Sodigadde Album/ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆ

ಚೆಕ್‌ಇನ್ ಕೌಂಟರ್‌ನಲ್ಲಿ ಖತೀಬ್ ನನ್ನು ತಡೆದು ಏರ್ ಕಸ್ಟಮ್ಸ್ ಅಧಿಕಾರಿಯೊಬ್ಬರು ವಿಚಾರಿಸಿದಾಗ ಅಕ್ರಮ ಸಾಗಾಟದ ಬಗ್ಗೆ ನಿರಾಕರಿಸಿದ್ದಾನೆ. ಆತನ ಉತ್ತರದಿಂದ  ತೃಪ್ತರಾಗದ ಅಧಿಕಾರಿಗಳು ಆತನ ಬ್ಯಾಗ್‌ಗಳನ್ನು ಪರೀಕ್ಷಿಸಲು  ನಿರ್ಧರಿಸಿದರು. ನಂತರ ಕಸ್ಟಮ್ಸ್ ಅಧಿಕಾರಿ ಲಗೇಜ್ ಅನ್ನು ಪರಿಶೀಲಿಸಿದಾಗ ಬ್ಯಾಗ್‌ನಿಂದ ಸೌದಿ ಅರೇಬಿಯನ್ ರಿಯಾಲ್(SAR) ೫೯,೫೦೦ ಅಂದರೆ ಅಂದಾಜು ರೂ. ೧೩,೩೨,೮೦೦ ವಶಪಡಿಸಿಕೊಂಡಿದ್ದಾರೆ. ಅದಲ್ಲದೆ ಕಸ್ಟಮ್ಸ್ ಅಧಿಕಾರಿಗಳು ಖತೀಬ್‌ನಿಂದ ೧,೦೫,೩೮,೭೦೦ ರೂ.  ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Republic Day/ ಭಟ್ಕಳದಲ್ಲಿ ಗಣರಾಜ್ಯೋತ್ಸವ ಸಂಭ್ರಮ

“ಈ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ, ಮತ್ತಷ್ಟು, ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ದೊಡ್ಡ ನಂಟನ್ನು ಮುರಿಯಲು ತನಿಖೆ ನಡೆಯುತ್ತಿದೆ. ನಾವು ಭಾರತದಲ್ಲಿ ಖತೀಬ್‌ಗೆ ವಿದೇಶಿ ಕರೆನ್ಸಿ ಮತ್ತು ವಜ್ರಗಳನ್ನು ಒದಗಿಸಿದವರು ಮತ್ತು ಸ್ವೀಕರಿಸಬೇಕಿದ್ದವರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ : Three Arrest/ ಭಟ್ಕಳದ ಓರ್ವ ಸಹಿತ ಮೂವರ ಬಂಧನ