ಭಟ್ಕಳ (Bhatkal) : ವಿಶೇಷ ಕಾರ್ಯಾಚರಣೆ ನಡೆಸಿದ ಭಟ್ಕಳ ಶಹರ ಠಾಣೆ ಪೊಲೀಸರು (police operation), ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆ ಐವರನ್ನು ಐವರನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಶಹರ ಪೊಲೀಸ್‌ ಠಾಣೆಯ ನಾಲ್ವರು ಉಪ ನಿರೀಕ್ಷಕರು ಈ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಐದು ಪ್ರಕರಣಗಳನ್ನು (case filed) ದಾಖಲಿಸಿಕೊಳ್ಳಲಾಗಿದೆ. ಪೊಲೀಸ್‌ ಉಪ ನಿರೀಕ್ಷಕರಾದ ಶಾಂತಿನಾಥ ಪಾಸಾನೆ, ತಿಮ್ಮಪ್ಪ ಎಸ್‌., ಸೋಮರಾಜ ಟಿ. ರಾಠೋಡ ತಲಾ ಒಂದು ಪ್ರಕರಣ ದಾಖಲಿಸಿದ್ದರೆ, ಪೊಲೀಸ್‌ ಉಪ ನಿರೀಕ್ಷಕ ನವೀನ್‌ ಎಸ್‌. ನಾಯ್ಕ ಇಬ್ಬರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಎರಡು ಕಡೆ ಈ ಕಾರ್ಯಾಚರಣೆ ನಡೆದಿದ್ದು (police operation), ಆರೋಪಿಗಳೆಲ್ಲರೂ ಮೀನುಗಾರಿಕೆ ವೃತ್ತಿಯಲ್ಲಿದ್ದವರು.

ಇದನ್ನೂ ಓದಿ : Complaint filed/ ಕಾರವಾರಿಗನ ವಿರುದ್ಧ ಕಾಣಕೋಣದಲ್ಲಿ ದೂರು ದಾಖಲು

ಭಟ್ಕಳ ತಾಲೂಕಿನ ಹೆಬಳೆ ಹೆರ್ತಾರ ನಿವಾಸಿ ಕಿರಣ ಗೋಪಾಲ ಮೊಗೇರ (೨೧) ಎಂಬಾತನನ್ನು ಜಾಲಿ ದೇವಿ ನಗರದ ಪ್ರಥಮ ದರ್ಜೆ ಕಾಲೇಜು ಹತ್ತಿರ ಮಾದಕ ವಸ್ತುವನ್ನು ಸೇವನೆ ಮಾಡಿದ ಹಾಗೆ ಕಂಡು ಬಂದಿದ್ದರಿಂದ ಪಿಎಸೈ ಶಾಂತಿನಾಥ ಪಾಸಾನೆ ವಶಕ್ಕೆ ಪಡೆದಿದ್ದರು. ಆತ ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರಿಂದ ಆತನನ್ನು ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿತ್ತು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : bus crash/ ಸೂಚನಾ ಫಲಕಕ್ಕೆ ಬಸ್‌ ಡಿಕ್ಕಿಯಾಗಿ ೯ ಜನರಿಗೆ ಗಾಯ

ಇನ್ನೊಂದು ಪ್ರಕರಣದಲ್ಲಿ, ಭಟ್ಕಳ ಶಹರದ ದೇವಿನಗರ ಕರಿಕಲ್‌ ರಸ್ತೆಯ ಹಾಡಿ ಜಾಗದಲ್ಲಿ ಹೆಬಳೆ ಹೆರ್ತಾರ ನಿವಾಸಿ ಕಿರಣ ಲಂಬೋದರ ಮೊಗೇರ (೨೩) ಎಂಬಾತನನ್ನು ಪಿಎಸೈ ತಿಮ್ಮಪ್ಪ ಎಸ್‌. ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಪಿಎಸೈ ಸೋಮರಾಜ ಟಿ. ರಾಠೋಡರವರು ಹೆಬಳೆ ಹೆರ್ತಾರ ದೇವುಮನೆ ನಿವಾಸಿ ಕಾರ್ತಿಕ ಗೋಪಾಲ ಮೊಗೇರ (೨೪) ಎಂಬಾತನನ್ನು ದೇವಿ ನಗರ ಪ್ರಥಮ ದರ್ಜೆ ಕಾಲೇಜು ಹತ್ತಿರ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Police raid/ ಅರಣ್ಯದಲ್ಲಿ ಮೂವರು ಸಿಕ್ಕಿಬಿದ್ದರು; ಆರು ಜನ ಪರಾರಿ

ಪಿಎಸ್‌ಐ ನವೀನ ಎಸ್‌. ನಾಯ್ಕರವರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ದೇವಿ ನಗರ ಕರಿಕಲ್‌ ರಸ್ತೆಯ ಹಾಡಿ ಜಾಗದಲ್ಲಿ ಹೆಬಳೆ ಹೆರ್ತಾರ ದೇವುಮನೆಯ ಚೇತನ ಅಣ್ಣಪ್ಪ ಮೊಗೇರ (೨೩) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ದೇವಿ ನಗರ ಪ್ರಥಮ ದರ್ಜೆ ಕಾಲೇಜು ಬಳಿ ಹೆಬಳೆ ಹೆರ್ತಾರ ಬೈದರಮನೆಯ ಪುನೀತ ಅನಂತ ಮೊಗೇರ (೨೨) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : No Tobacco/ ಖೈನಿ ಇಟ್ಟುಕೊಂಡು ಮಲಗುವ ಅಭ್ಯಾಸ ಇದೆಯೇ? ಎಚ್ಚರ…!