ಭಟ್ಕಳ (Bhatkal) : ಎರಡು ಬೈಕ್‌ಗಳ ನಡುವೆ ಡಿಕ್ಕಿ (Bike collision) ಸಂಭವಿಸಿ ಓರ್ವ ಗಾಯಗೊಂಡ ಘಟನೆ ಭಟ್ಕಳ ಪಟ್ಟಣದಲ್ಲಿ ಶನಿವಾರ ರಾತ್ರಿ ೧೦.೧೫ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಹಡೀಲ ಗ್ರಾಮದ ಹದ್ಲೂರು ಮಂಜುಗೊಂಡರ ಮನೆ ನಿವಾಸಿ ಗಣಪತಿ ಸೋಮಯ್ಯ ಗೊಂಡ ಗಾಯಗೊಂಡವರು. ಇವರು ತಮ್ಮ ಸಹೋದರ ಗೋವಿಂದ ಸೋಮಯ್ಯ ಗೊಂಡ ಚಲಾಯಿಸುತ್ತಿದ್ದ ಬೈಕಿನಲ್ಲಿ ಕುಳಿತು ಬರುತ್ತಿದ್ದಾಗ ತಪ್ಪಾದ ಮಾರ್ಗದಲ್ಲಿ ಬಂದ ಇನ್ನೊಂದು ಬೈಕ್‌ ಡಿಕ್ಕಿ (Bike collision) ಹೊಡೆದಿದೆ. ಈ ಕುರಿತು ಬೈಕ್‌ ಸವಾರ ಗೋವಿಂದ ಗೊಂಡ ಭಟ್ಕಳದ ಸೋನಾರಕೇರಿಯ ಕೃಷ್ಣ ಮಂಜುನಾಥ ನಾಯ್ಕ (೨೬) ವಿರುದ್ಧ ಶಹರ ಪೊಲೀಸ್‌ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.

ಇದನ್ನೂ ಓದಿ : Kadambotsav/ ನಿಗದಿ ಆಯ್ತು ಕದಂಬೋತ್ಸವ ದಿನ

ಗೋವಿಂದ ಗೊಂಡ ಅವರು ಕಾಮಾಕ್ಷಿ ಪೆಟ್ರೋಲ್‌ ಬಂಕ್‌ ಕಡೆಗೆ ಪೆಟ್ರೋಲ್‌ ಹಾಕಿಸಲು ರಾಷ್ಟ್ರೀಯ ಹೆದ್ದಾರಿ (National Highway) ದಾಟುತ್ತಿದ್ದಾಗ ಇನ್ನೊಂದು ಬೈಕ್‌ ಡಿಕ್ಕಿ ಹೊಡೆದಿದೆ. ತಪ್ಪಾದ ಮಾರ್ಗದಲ್ಲಿ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಬೈಕ್‌ ಚಲಾಯಿಸಿಕೊಂಡು ಬಂದ ಕೃಷ್ಣ ನಾಯ್ಕ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Micro Finance/ ಮೈಕ್ರೋ ಫೈನಾನ್ಸ್‌ಗೆ ಮತ್ತೊಂದು ಬಲಿ