ಭಟ್ಕಳ (Bhatkal): ಪ್ರತಿನಿತ್ಯ ಗಣಪತಿಯನ್ನು ಆರಾಧಿಸಿ ನಾಮಜಪ ಮಾಡಿದರೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದು ಚಿತ್ರಾಪುರ ಸಂಸ್ಥಾನದ ಮಠಾಧೀಶ (Chitrapura Shree) ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು. ಅವರು ಸಾಲೆಮನೆಯ ಮಠದ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪುನರ್ ನಿರ್ಮಾಣ, ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನೆರೆದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡುತ್ತಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಾವುದೇ ಕಾರ್ಯವನ್ನು ಮಾಡುವಾಗ ಗಣಪತಿ ಉಪಾಸನೆ, ಪ್ರಾರ್ಥನೆಯನ್ನು ಮಾಡಿ ಮುಂದುವರೆಯಿರಿ. ಗಣಪತಿ ಅನುಗ್ರಹದಿಂದ ಬುದ್ದಿಗೆ ಪ್ರಚೋದನೆ ದೊರೆತರೆ ವಿದ್ಯೆಗೆ ಬಲ ದೊರೆಯುತ್ತದೆ. ಪ್ರತಿ ನಿತ್ಯ ಮನೆಯಲ್ಲಿ ದೇವರ ಆರಾಧನೆ, ಭಜನೆ, ಸ್ಥರಣೆ ಮಾಡುವಂತೆ ಕರೆ ನೀಡಿದ ಶ್ರೀಗಳು (Chitrapura Shree), ದೇವಾಲಯ ನಿರ್ಮಾಣ ಕಾರ್ಯ ಅತ್ಯಂತ ಸುಂದರವಾಗಿ ಆಗಿದೆ. ಇದಕ್ಕೆ ಜನರ ಪ್ರಾಮಾಜಿಕತೆ, ದೇವರ ಮೇಲಿನ ಭಕ್ತಿ ಹಾಗೂ ನಿರ್ಮಾಣ ಮಾಡಬೇಕೆನ್ನುವ ಛಲವೇ ಕಾರಣವಾಗಿದೆ. ಕ್ಷೇತ್ರದಲ್ಲಿ ನಡೆಯುವ ಗಣಹೋಮ, ನವರಾತ್ರಿಯಾದಿ ಇತರ ಉತ್ಸವಗಳು, ಭಜನೆ ಇತ್ಯಾದಿಗಳಿಂದ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗುವುದು ಎಂದರು.
ಇದನ್ನೂ ಓದಿ : Heart checkup/ ೨೬೩ ಜನರ ಉಚಿತ ಹೃದಯ ತಪಾಸಣೆ
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಎನ್ ನಾಯ್ಕ, ಸುಮಾರು ೧.೭೫ ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಭಕ್ತರ ಹಾಗೂ ಊರಿನವರ ಸಹಕಾರ ಅತ್ಯಂತ ಸ್ಮರಣೀಯವಾಗಿದೆ ಎಂದ ಅವರು, ದೇವಾಲಯದ ನಿರ್ಮಾಣ ಕಾರ್ಯ ಆರಂಭಮಾಡಿದಾಗಿನಿಂದ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : Aviation/ ಸರ್ಕಾರಿ ಶಾಲೆ ಮಕ್ಕಳ ವಿಮಾನಯಾನ
ಮುಖ್ಯ ಅತಿಥಿ ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಆಸ್ತಿಕ ಮಹಾಜನತೆ ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ಉದಾಹರಣೆಯಾಗಿ ದೇವಾಸ್ಥಾನ ಕಂಗೋಳಿಸುತ್ತ ನಿಂತಿದೆ. ಇಲ್ಲಿನ ಜನರ ಶ್ರಮ, ಶ್ರದ್ಧೆ, ದೈವಬಲವೇ ದೇವಸ್ಥಾನವು ಅದ್ಭುತವಾಗಿ ಮೂಡಿ ಬರಲು ಕಾರಣವಾಗಿದೆ. ಈ ಭಾಗದ ಜನರ ಇಚ್ಛೆ ಸಿದ್ದಿಸುವ ಸಿದ್ದಿವಿನಾಯಕನ ಕೀರ್ತಿ ಇನ್ನಷ್ಟು ಬೆಳಗಲಿ ಎಂದು ಆಶಿದರು.
ಇದನ್ನೂ ಓದಿ : NIA team/ ಮತ್ತೊಮ್ಮೆ ಯುವಕರಿಬ್ಬರ ವಶಕ್ಕೆ ಪಡೆದ ಎನ್ಐಎ
ದೇವಸ್ಥಾನದ ಅರ್ಚಕರ ಕುಟುಂಬಿಕರು, ದೇವಾಲಯದ ಗರ್ಭಗೃಹ ನಿರ್ಮಾಣ ಮಾಡಿಸಿಕೊಟ್ಟ ಪ್ರಕಾಶ ಎನ್. ಭಟ್ಟ ಮಾತನಾಡಿ, ದೇವಸ್ಥಾನಕ್ಕೆ ಈ ಹಿಂದೆ ಶ್ರೀಧರ ಸ್ವಾಮಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಈ ದೇವಾಲಯವು ಜೀರ್ಣೋದ್ದಾರಗೊಂಡು ಭಕ್ತರ ಮನಕಾಮನೆಗಳನ್ನು ಸಿದ್ದಿಸುವ ಕ್ಷೇತ್ರವಾಗಲಿದೆ ಎಂದು ಹೇಳಿದ್ದು ಈಗ ನಿಜವಾಗಿದೆ. ಭಕ್ತರ ಸಹಾಯದಿಂದ ಭವ್ಯ ದೇವಾಲಯ ನಿರ್ಮಾಣ ಆಗಿದೆ. ಗರ್ಭಗೃಹ ನಿರ್ಮಾಣ ಕಾರ್ಯದಲ್ಲಿ ನಮ್ಮ ಕುಟುಂಬಿಕರು ಹಾಗೂ ಇತರರ ಸಹಾಯ ಪಡೆದು ನಿರ್ಮಿಸಿಕೊಟ್ಟಿದ್ದೇನೆ ಎಂದರು.
ಇದನ್ನೂ ಓದಿ : Vardhanthi / ನಾಗಬನ ದೇವರ ದ್ವಿತೀಯ ವರ್ಧಂತಿ ಸಂಪನ್ನ
ವೇದಿಕೆಯಲ್ಲಿ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಎನ್., ಗೌರವ ಕಾರ್ಯದರ್ಶಿ ನಾಗೇಶ ದೇವಡಿಗ, ಗ್ರಾ.ಪಂ. ಅಧ್ಯಕ್ಷ ಭಾಸ್ಕರ ದೈಮನೆ, ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ನಾಗೇಶ ದೇವಾಡಿಗ, ದೇವಾಸ್ಥಾನ ಕಮಿಟಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ಶೋಭಾ ಕಾಮತ ಹಾಗೂ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಶಿವಾನಂದ ಎನ್. ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಸೀಮಾ ನಾಯ್ಕ ವರದಿ ವಾಚಿಸಿದರು. ಸಮಿತಿಯ ಕಾರ್ಯದರ್ಶಿ ರಾಜೇಶ ಎನ್. ಮೊಗೇರ ವಂದಿಸಿದರು.
ಕಾರ್ಯಕ್ರಮದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Rescue of tourists/ ಅರಣ್ಯದಲ್ಲಿ ಸಿಲುಕಿದ ಪ್ರವಾಸಿಗರ ರಕ್ಷಣೆ