ಕಾರವಾರ (Karwar) : ತಾಲೂಕಿನ ಬಿಣಗಾದಲ್ಲಿ ನಡೆದ ಕ್ಲೋರಿನ್ ಸೋರಿಕೆ (Chlorine leakage) ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಅಧಿಕಾರಿಗಳ ವಿರುದ್ಧ ದೂರು (Complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಣಗಾದ (Binaga) ಗ್ರಾಸಿಮ್ ಇಂಡಸ್ಟ್ರೀಸ್ನ (Grasim Industries) ಕ್ಲೋರಿನ್ ಪ್ಲಾಂಟ್ (Chlorine plant) ಇನ್ಚಾರ್ಜ್ ರತೀಶ ನಾಯರ, ಟೆಕ್ನಿಕಲ್ ಹೆಡ್ ಆಧಿರಾಜ ಸಹಿತ ಇತರೇ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಅನಿಲ ಸೋರಿಕೆ ವೇಳೆ ಅಸ್ವಸ್ಥಗೊಂಡವರಲ್ಲಿ ಒಬ್ಬರಾದ ಇನ್ಸ್ಟ್ರೂಮೆಂಟ್ ಹೆಲ್ಪರ್ ಆಗಿರುವ ಬಿಣಗಾ ಮಾಳಸಾವಾಡಾದ ನಿವಾಸಿ ರಾಹುಲ ಗಣೇಶ ಶೆಟ್ಟಿ (೨೦) ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಮೀನುಗಾರ ದುರ್ಮರಣ
ನಡೆದಿದ್ದೇನು ? : ಜ.೧೧ರಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಕಾರ್ಮಿಕರು ಕೆಲಸದಲ್ಲಿದ್ದಾಗ ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್ನ ಕ್ಲೋರಿನ್ ಪ್ಲಾಂಟ್ದಲ್ಲಿ ಒಂದೇ ಸಮನೆ ಕ್ಲೋರಿನ್ ಸೋರಿಕೆಯಾಗಿತ್ತು (Chlorine leakage). ಆಗ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಓಡಲು ಆರಂಭಿಸಿದರು. ಆದರೆ ಸೋರಿಕೆಯಾದ ಅನಿಲ ಸೇವನೆಯಿಂದ ೧೪ ಕಾರ್ಮಿಕರು ಅಸ್ವಸ್ಥಗೊಂಡು ಅಲ್ಲಿಯೇ ಕುಸಿದು ಬಿದ್ದರು. ಅಲ್ಲಿ ಸೇರಿದ ಇತರೆ ಕಾರ್ಮಿಕರು ಅಸ್ವಸ್ಥಗೊಂಡವರನ್ನು ಗ್ರಾಸಿಮ್ ಇಂಡಸ್ಟ್ರೀಸ್ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅಂಬುಲೆನ್ಸ್ನಲ್ಲಿ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ : ಪೊಲೀಸರ ಮೇಲೆ ದುಷ್ಕರ್ಮಿಗಳ ದಾಳಿ
ಅಸ್ವಸ್ಥಗೊಂಡವರು : ರಾಹುಲ ಗಣೇಶ ಶೆಟ್ಟಿ, ಕಮಲೇಶ ರಾಮಜಿ ವರ್ಮಾ, ಬೆಚನ್ ಕುಮಾರ ರಾಮಚಂದ್ರ ರಾಮ್, ಕೃಷ್ಣಕುಮಾರ ರಜಿತರಾಮ, ಮೋಹಿತ್ ಭರ್ಮನ್, ಜಹಾನೂರ ಖಾನ, ಮಜಿದೂಲ್ ಹಕ್, ಠಾಕೂರ ಜನರಲ್ ಸಿಂಗ್, ನಂದಕಿಶೋರ ಕಾಶಿರಾಮ ಯಾದವ, ಅಜಿತ ವಿನೋದ ಕೋರಿ, ದೀಪು ಬಗುನಿ ಪಾಸವಾನ, ಕಲ್ಲು ಮೊತಿ ಪಾಸವಾನ, ಸಿಕಂದರ ಅಲಿ ಮತ್ತು ಸುಜನ ವರ್ಮಾ ಅಸ್ವಸ್ಥಗೊಂಡವರು. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಅನಧಿಕೃತ ಹೋಂ ಸ್ಟೇ ಮೇಲೆ ಜಿಲ್ಲಾಡಳಿತ ಕಣ್ಣು