ಕಾರವಾರ (Karwar): ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಯತ್ನಿಸಿದ ಇಬ್ಬರಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ (District court) ಕಠಿಣ ಜೈಲು ಶಿಕ್ಷೆ (Imprisonment) ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ(Court Order).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಸಿಯ (Sirsi) ಹುಲೇಕಲ್ನ ನವೀನ್ ರಾಮಚಂದ್ರ ಚೌಹಾಣ ಹಾಗೂ ಗಣೇಶ ನಗರದ ನಿಖಿಲ ನಾಗೇಶ ಗೌಡ ಶಿಕ್ಷೆಗೆ ಒಳಪಟ್ಟ ಅಪರಾಧಿಗಳು. ಇವರಿಗೆ ನಾಲ್ಕು ವರ್ಷ ಕಠಿಣ ಸಜೆ (imprisonment) ಹಾಗೂ ತಲಾ ₹೨೦ ಸಾವಿರ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ (District Judge) ಡಿ.ಎಸ್.ವಿಜಯಕುಮಾರ ಮಾ.೫ರಂದು ಬುಧವಾರ ತೀರ್ಪು ನೀಡಿದ್ದಾರೆ (Court Order).
ಇದನ್ನೂ ಓದಿ : Rotaract/ ರೋಟರಾಕ್ಟ್ ಬಹು ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಯಶಸ್ವಿ
೨೦೨೨ರ ಜುಲೈ ೨೮ರಂದು ಶಿರಸಿಯ ಆನೆಹೊಂಡ ಸಮೀಪದ ಅರಣ್ಯ ಪ್ರದೇಶದ ಮಣ್ಣಿನ ರಸ್ತೆಯಲ್ಲಿ ₹೨೫೦೦೦ ಮೌಲ್ಯದ ೧.೫೪ ಕೆಜಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪಿಎಸ್ಐ ರಾಜಕುಮಾರ ಎಸ್.ಉಕ್ಕಲಿ ಎಂಬುವವರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿತ್ತು. ನೀಲಿ, ಹೂವಿನ ವಿನ್ಯಾಸದ ಕೈಚೀಲದಲ್ಲಿ ಗಾಂಜಾ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಅವರ ಬಳಿ ಇರಲಿಲ್ಲ.
ಇದನ್ನೂ ಓದಿ : pre-monsoon / ಅವಧಿಗಿಂತ ಮುನ್ನ ಪೂರ್ವ ಮುಂಗಾರು ಮಳೆ !
ತಾಲೂಕು ದಂಡಾಧಿಕಾರಿ ಶ್ರೀಧರ ಮುಂಡಲಮನಿ, ಉಪವಲಯ ಅರಣ್ಯಾಧಿಕಾರಿ ನೂರಾ ಅಹಮ್ಮದ್, ಉಪವಲಯ ಅರಣ್ಯಾಧಿಕಾರಿ ಹನುಮಂತ ಬಸವಂತಪ್ಪ ಎರಗೇರಿ ಸೇರಿದಂತೆ ಅಧಿಕಾರಿಗಳ ಸಮೇತ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿದ್ದರು. ನಂತರ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿತ್ತು. ಪ್ರಕರಣವನ್ನು ಪಿಎಸ್ಐ ರತ್ನಾ ಎಸ್.ಕೆ ಅವರು ಕೂಲಂಕುಷವಾಗಿ ತನಿಖೆ ನಡೆಸಿದ್ದರು. ಸರ್ಕಾರಿ ಅಭಿಯೋಜಕಿ ತನುಜಾ ಬಿ.ಹೊಸಪಟ್ಟಣ ಸರ್ಕಾರದ ಪರವಾಗಿ ಯಶಸ್ವಿಯಾಗಿ ವಾದಿಸಿದ್ದರು.
ಇದನ್ನೂ ಓದಿ : Auction/ ಕಾರು, ೨ ಆಟೋ ರಿಕ್ಷಾ ಹರಾಜಿಗೆ