ಭಟ್ಕಳ: ವಾಟ್ಸಾಪ್ ಕರೆ ಮಾಡಿದ ಇಬ್ಬರು ವ್ಯಕ್ತಿಗಳ ಮಾತನ್ನು ನಂಬಿದ ವ್ಯಕ್ತಿಯೊಬ್ಬರು ೯.೨೩ ಲಕ್ಷ ರೂ. ಕಳೆದುಕೊಂಡ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (cyber crime).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಕಿದ್ವಾಯಿ ರಸ್ತೆ ನಿವಾಸಿ ಶಮವಿಲ್ ಅಹ್ಮದ್ ಮಹ್ಮದ್ ಜಾಫರ್ (೩೭) ಹಣ ಕಳೆದುಕೊಂಡವರು. ಅಫ್ಜಲಖಾನ್ ಮತ್ತು ಶೇಖರ ಶಶಿಕಾಂತ ಎಂಬಿಬ್ಬರು ಶಮವಿಲ್ಗೆ ವಾಟ್ಸಾಪ್ ಕರೆ ಮಾಡಿ ಷೇರು ಮಾರುಕಟ್ಟೆಯಲ್ಲಿ (share market) ಹಣ ಹೂಡಿಕೆ ಮಾಡಿದರೆ ಲಾಭಾಂಶ ಮಾಡಿಕೊಡುವುದಾಗಿ ನಂಬಿಸಿದ್ದರು. ಅದರಂತೆ ೨೦೨೪ರ ಡಿ.೧೭ರಿಂದ ೨೦೨೫ರ ಫೆ.೧೭ರವರೆಗೆ ಎರಡು ತಿಂಗಳಲ್ಲಿ ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮುಖಾಂತರ ಶಮವಿಲ್ ೯.೨೩ ಲಕ್ಷ ರೂ.ಯನ್ನು ನಿಫ್ಟಿ ಎಕ್ಸಪರ್ಟ್ ಎಂಬ ಹೆಸರಿನ ಕಂಪನಿಗೆ ವರ್ಗಾಯಿಸಿದ್ದರು. ಆದರೆ ಈವರೆಗೆ ಯಾವುದೇ ಲಾಭಾಂಶ ನೀಡದೆ, ಹಣವನ್ನೂ ಹಿಂದುರಿಗಿಸದೆ ಮೋಸ (fraud) ಮಾಡಿರುವುದಾಗಿ (cyber crime) ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: no holiday/ ಶಾಲೆಗಳಿಗಿಲ್ಲ ರಜೆ; ಪಾಲಕರ ಆಕ್ರೋಶ