ಭಟ್ಕಳ (Bhatkal) : ಕೆಎಸ್ಆರ್ಟಿಸಿ ಬಸ್ (KSRTC bus hit) ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿ (National Highway) ದಾಟುತ್ತಿದ್ದ ವೃದ್ಧೆ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಕಾಯ್ಕಿಣಿ ಪಂಚಾಯತ್ ಕ್ರಾಸ್ ಹತ್ತಿರ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರ್ಡೇಶ್ವರ (Murdeshwar) ಕಾಯ್ಕಿಣಿಯ ಬಸ್ತಿ ಮಾಳುಗದ್ದೆಯ ಅನಿಲನ ಮನೆ ನಿವಾಸಿ ರಾಜೀವಿ ಜನಾರ್ಧನ ನಾಯ್ಕ (೭೫) ಗಾಯಗೊಂಡವರು. ಇವರ ತಲೆ ಹಿಂಭಾಗ ಮತ್ತು ಕೈಗೆ ಭಾರೀ ಗಾಯಗಳಾಗಿವೆ. ಮುರುಡೇಶ್ವರ (Murudeshwar) ಕಡೆಯಿಂದ ಭಟ್ಕಳ ಕಡೆಗೆ ವೇಗವಾಗಿ ಬರುತ್ತಿದ್ದ ಬಸ್ ವೃದ್ಧೆಗೆ ಡಿಕ್ಕಿ ಹೊಡೆದಿದೆ (bus hit). ವಿಜಯಪುರ (Vijayapura) ಜಿಲ್ಲೆಯ ತಿಕೋಟಾ ತಾಲೂಕಿನ ಬಸ್ ಚಾಲಕ ಹಣುಮಂತ ಕೆಂಚಪ್ಪ ಕಡಪಟ್ಟಿ (೩೯) ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered). ಮುರ್ಡೇಶ್ವರದಲ್ಲಿ ವ್ಯವಸಾಯತ ಸೇವಾ ಸಹಕಾರಿ ಸಂಘದಲ್ಲಿ ಅಟೆಂಡರ್ ಆಗಿರುವ ವೃದ್ಧೆಯ ಪುತ್ರ ರಜನೀಕಾಂತ ದೂರು (complaint) ದಾಖಲಿಸಿದ್ದಾರೆ.
ಇದನ್ನೂ ಓದಿ : RNS PU College/ ಕೆಸಿಇಟಿ ಪರೀಕ್ಷೆಯಲ್ಲಿ ಆರ್.ಎನ್.ಎಸ್. ಸಾಧನೆ