ಭಟ್ಕಳ (Bhatkal) : ಇಲ್ಲಿನ ತಾಲೂಕು ಆಡಳಿತಸೌಧದಲ್ಲಿ ತಾಲೂಕು ಆಡಳಿತ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂದಾಖಲೆಗಳ ಡಿಜಿಟಲೀಕರಣದ ಭೂ ಸುರಕ್ಷಾ ಕಾರ್ಯಕ್ರಮಕ್ಕೆ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಡಿ. ೧೨ರಂದು ಚಾಲನೆ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಲಳಿಕ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಬಳಿಕ ಭೂ ಸುಧಾರಣೆ ಆಪ್ ಅನ್ನು ಸಿದ್ದಪಡಿಸಲಾಗಿದೆ. ಈಗಾಗಲೇ ೨೫ರಿಂದ ೩೦ಶೇ.ದಷ್ಟು ಸ್ಕ್ಯಾನ್ ಮಾಡಲಾಗಿದೆ. ಜೂನ್ ತಿಂಗಳಿನ ಒಳಗಾಗಿ ನಮ್ಮ ಅಧಿಕಾರಿಗಳು ಪೂರ್ತಿ ಕೆಲಸ ಮುಗಿಸುತ್ತಾರೆಂಬ ಭರವಸೆ ಇದೆ. ಆದರೆ ೧೫ ರಿಂದ ೧ ತಿಂಗಳು ಹೆಚ್ಚು ಕಡಿಮೆ ಆಗಬಹುದು. ಈ ಮೊದಲು ಎಂಟ್ರಿ ಉತ್ತರ ಬೇಕೆಂದರೆ ಏಜೆಂಟ್ ಗಳನ್ನು ಕರೆದುಕೊಂಡು ಬರುತ್ತಿದ್ದರು. ಆದರೆ ಈಗ ಕೇಳಿದ ತಕ್ಷಣ ಆ ಕ್ಷಣದಲ್ಲಿ ಎಂಟ್ರಿ ಉತ್ತರ ಹಾಗೂ ಒಂದು ಭೂಮಿಯ ಎಲ್ಲಾ ದಾಖಲೆಗಳನ್ನು ಸಿಗುವ ರೀತಿಯಲ್ಲಿ ರಾಜ್ಯದಲ್ಲಿ ಪ್ರಾರಂಭ ಮಾಡಿದ್ದೇವೆ ಎಂದರು.

ಇದನ್ನೂ ಓದಿ : ಜ.೧೪ರಿಂದ ಭಂಡೂರು ಜಾತ್ರಾ ಮಹೋತ್ಸವ

ಸಾರ್ವಜನಿಕರು ದಾಖಲೆಗಳನ್ನು ಪಡೆದುಕೊಳ್ಳಲು ಈ ಹಿಂದೆ ಅರ್ಜಿ ನೀಡಿ, ದಾಖಲೆಗಳನ್ನು ಪರಿಶೀಲನೆ ಮಾಡಿ ಕೊಡುವ ವ್ಯವಸ್ಥೆ ಇತ್ತು. ಇದರಿಂದ ಕೆಲವರಿಗೆ ಬೇಗ ಸೌಲಭ್ಯ ದೊರೆತು ಇನ್ನು ಕೆಲವರಿಗೆ ವಿಳಂಬವಾಗುತ್ತಿತ್ತು. ಇನ್ನು ಮುಂದೆ ಇಂತಹ ಪರಿಸ್ಥಿತಿ ಇರುವುದಿಲ್ಲ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ , ಶಿರಸ್ತೆದಾರರಾದ ಪ್ರವೀಣ ಹಾಗೂ ಮಣಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ :  ಕಾರು ಪಲ್ಟಿಯಾಗಿ ಭಟ್ಕಳ ದಂಪತಿ ಸಾವು