ಭಟ್ಕಳ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ (heavy rain) ದನದ ಕೊಟ್ಟಿಗೆಗೆ ಸಿಡಿಲು (lightning) ಬಡಿದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬೆಳಕೆ ಕಟಗೇರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳೆಕೆಯ ವೆಂಕಟೇಶ ದುರ್ಗಪ್ಪ ನಾಯ್ಕ (ಪೂಜಾರಿ ಮನೆ) ಎನ್ನುವವರಿಗೆ ಸೇರಿದ ದನದ ಕೊಟ್ಟಿಗೆ ಇದಾಗಿದೆ. ಬುಧವಾರ ರಾತ್ರಿ ಸುರಿದ ಗುಡುಗು ಮಳೆಯಲ್ಲಿ (rain) ದನದ ಕೊಟ್ಟೆಗೆಗೆ ಸಿಡಿಲು (lightning) ಬಡಿದ ಹಿನ್ನೆಲೆಯಲ್ಲಿ ಕೊಟ್ಟಿಗೆಯಲಿ ಸಂಗ್ರಹಿಸಿಟ್ಟ ಹುಲ್ಲಿಗೆ ಬೆಂಕಿ ತಗುಲಿತ್ತು. ಹೆಂಚು, ಪಕಾಶಿ ಸಂಪೂರ್ಣ ಸುಟ್ಟ ಕರಕಲಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಈ ವೇಳೆ ಕೊಟ್ಟಿಗೆಯಲ್ಲಿನ ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ಇದನ್ನು ಓದಿ : complaint/ ಭಟ್ಕಳದ ಹೋಟೆಲ್‌ ಬಳಿ ಹೊಡೆದಾಟ

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೊಟ್ಟಿಗೆಗೆ ತಗುಲಿದ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಮದ ಶಫಿ ಮೊಘಲ, ಸಿಬ್ಬಂದಿ ಉಮೇಶ, ನವೀನ ಕುಮಾರ, ಶಿವಪ್ರಸಾದ, ಮಾನಸ ಸಿಂಹ, ಸೋಮನಾಥ ನಾಯ್ಕ, ಹನುಮಂತ ನವಲಗನ್ನ ಇದ್ದರು.

ಇದನ್ನು ಓದಿ : landslide/ ಭಟ್ಕಳ ಬಂದರಿನಲ್ಲಿ ಭೂಕುಸಿತದ ಆತಂಕ