ಭಟ್ಕಳ (Bhatkal) : ಅಳ್ವೆಕೋಡಿಯಲ್ಲಿ ಕ್ರಿಯಾಶೀಲ ಸ್ವಯಂ ಸೇವಕರ ಬಳಗವೇ ಇದೆ. ಇಲ್ಲಿನ ನಿವಾಸಿಗಳು ಮಾರಿ ಜಾತ್ರೆಯನ್ನು (Mari Jathre) ಮನೆಯ ಹಬ್ಬವನ್ನಾಗಿ ಆಚರಿಸುತ್ತಾರೆ. ಹಾಗಾಗಿ ಇಲ್ಲಿ ಎಷ್ಟು ಸಹಸ್ರಾರು ಜನರು ಬಂದರೂ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಇದಕ್ಕೆಲ್ಲಾ ಹಿರಿಯ ಟ್ರಸ್ಟಿಗಳು ಹಾಗೂ ಊರ ಜನರ ಸಹಕಾರವೆ ಕಾರಣ ಎಂದು ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಎಮ್. ಮೊಗೇರ ಹೇಳಿದರು. ಅವರು ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ (Mankal Vaidya) ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅನುದಾನ ಇಲ್ಲದೆ, ಸ್ವ ಇಚ್ಚೆಯಿಂದ ಭಕ್ತರ ಸಹಕಾರದಿಂದ ನಡೆಯುವ ಅತಿ ದೊಡ ಜಾತ್ರೆ ಈ ಮಾರಿಜಾತ್ರೆ (Mari Jathre). ಈ ಕ್ಷೇತ್ರದಲ್ಲಿ ಕೇವಲ ಧಾರ್ಮಿಕ ಕಾರ್ಯಗಳು ಮಾತ್ರವಲ್ಲ, ಇಲ್ಲಿ ಶಿಕ್ಷಣ, ವೈದ್ಯಕೀಯ, ಸಾಮಾಜಿಕ, ಅನ್ನ ದಾಸೋಹದಂತಹ ಕಾರ್ಯಗಳು ನಿತ್ಯನಿರಂತರ ನಡೆಯುತ್ತಿದೆ. ಅಮ್ಮನನ್ನೇ ನಂಬಿ ಸಾವಿರಾರು ಮೀನುಗಾರರು ಇಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಜಾತಿಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಕಾಣುತ್ತಿರುವದು ಈ ಕ್ಷೇತ್ರದ ಹೆಗ್ಗಳಿಕೆ. ಸ್ವತಃ ತಾನು ಈ ಮಟ್ಟಕ್ಕೆ ಬೆಳೆಯಲು ಅಮ್ಮನ ಆಶಿರ್ವಾದವೇ ಕಾರಣ. ಅಮ್ಮನ ಆಶೀರ್ವಾದದೊಂದಿಗೆ ಈ ಕ್ಷೇತ್ರಕ್ಕೆ ಗುರುಗಳ ರಕ್ಷೆಯೂ ಇರುವದರಿಂದ ಈ ಸ್ಥಳದಲ್ಲಿ ಹೇಳಿದ್ದೆಲ್ಲ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : ಅಳಿವೆಕೋಡಿಯಲ್ಲಿ ಮಾರಿ ಜಾತ್ರೆ ವೈಭವ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತಿಮ್ಮಪ್ಪ ನಾರಾಯಣ ಹೊನ್ನಿಮನೆ, ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಮೀನುಗಾರಿಕಾ ಸಹಕಾರಿ ಸಂಘ, ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರು ಹಾಗೂ ಜಿ.ಎಸ್.ಬಿ. ಸಮಾಜದ ಮುಖಂಡ ಅಶೋಕ ಪೈ, ನಾರಾಯಣ ದೈಮನೆ ಮಾತನಾಡಿದರು. ಅಳ್ವೆಕೋಡಿಯ ಅಧ್ಯಕ್ಷ ವಿಠಲ ಎಸ್. ದೈಮನೆ,  ಅಳ್ವೆಕೋಡಿ ಶ್ರೀ ದುರ್ಗಾ ಮೊಗೇರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಯಾದವ ವಿ. ಮೊಗೇರ, ಗುತ್ತಿಗೆದಾರ ಬಾಬು ಎಸ್. ಅಳುಕುಸನಮನೆ, ಜಿ.ಪಂ. ಮಾಜಿ ಸದಸ್ಯ ಅಲ್ಟಾರ್ಟ್ ಡಿಕೋಸ್ತಾ, ಪ್ರಧಾನ ಅರ್ಚಕ ಗಜಾನನ ಪುರಾಣಿಕ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ  ಮತ್ತು ಫೇಸ್‌ಬುಕ್‌ ನಲ್ಲಿ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ : Kannada cinema/ ಭಟ್ಕಳ, ಮುರುಡೇಶ್ವರದಲ್ಲಿ ಕೋಣ ಚಿತ್ರೀಕರಣ