ಶಿವಮೊಗ್ಗ (Shivamogga): ಮೇ ೩೧ರಂದು ವಿಶ್ವ ತಂಬಾಕು ರಹಿತ ದಿನ (No Tobacco Day)ವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಪ್ರತ್ಯೇಕ ಘಟನೆಗಳಲ್ಲಿ ಎರಡು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಈ ಎರಡು ಘಟನೆಗಳು ತಂಬಾಕು ಸೇವನೆಯ ಅಪಾಯದ ಕುರಿತು ಅರಿವು ಮೂಡಿಸಿದೆ. ಅಲ್ಲದೆ, ಆರಂಭಿಕ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಮಹತ್ವವನ್ನು ತಿಳಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೪೮ ವರ್ಷದ ಅಂಜಲಿ (ಹೆಸರು ಬದಲಾಯಿಸಲಾಗಿದೆ) ಮಲೆನಾಡು ಪ್ರದೇಶದವರು (Malnad region). ೧೫ ವರ್ಷಗಳಿಂದ ತಮ್ಮ ದಿನ ನಿತ್ಯದ ಕೆಲಸದ ಬಳಿಕ ತಮ್ಮ ಕೆಳಗಿನ ಒಸಡಿನ ಒಳಗೆ ಖೈನಿ ಇಟ್ಟುಕೊಂಡು ಮಲಗುವ ಅಭ್ಯಾಸ ರೂಡಿಸಿಕೊಂಡಿದ್ದರು. ಇದು ಕನಿಷ್ಠ ಆರು ತಾಸು ಬಾಯಲ್ಲೇ ಇರುತ್ತಿತ್ತು. ಅವರಿಗೆ ಅದೊಂದು ವ್ಯಸನವೆಂದು ತಿಳಿದಿರಲಿಲ್ಲ. ಬದಲಿಗೆ ಹಲ್ಲು ನೋವಿಗೆ ಮದ್ದು ಎಂದು ಅವರು ಭಾವಿಸಿದ್ದರು.

ಇದನ್ನೂ ಓದಿ : collision of scooters/ ಸ್ಕೂಟರ್‌ಗಳ ಮುಖಾಮುಖಿ ಡಿಕ್ಕಿ

ಒಂದು ದಿನ ಅಂಜಲಿಯವರ ಬಾಯಿಯಲ್ಲಿ ಒಂದು ಚಿಕ್ಕ ಗಾಯ ಕಾಣಿಸಿಕೊಂಡಿತು. ಅದರಿಂದ ರಕ್ತಸ್ರಾವ ಆಗಲಿಲ್ಲ, ಹೆಚ್ಚು ನೋವುಂಟುಮಾಡಲಿಲ್ಲ. ದರೆ ಏನೋ ವಿಭಿನ್ನ ಅನುಭವವಾಗಿತ್ತು. ಅವರು ತಕ್ಷಣ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ತಲೆ ಮತ್ತು ಕುತ್ತಿಗೆಯ ಆಂಕೊ-ಸರ್ಜನ್ ಡಾ. ದೀಪಕ ಸಿ. ಕಿತ್ತೂರ ಅವರನ್ನು ಭೇಟಿಯಾದರು. ಇವರನ್ನು ಪರೀಕ್ಷಿಸಿದ ಡಾ.ಕಿತ್ತೂರ, ತುರ್ತಾಗಿ ಶಸ್ತ್ರಚಿಕಿತ್ಸೆಯ ಮೂಲಕ ಅವರ ಬಾಯಲ್ಲಿ ಉಂಟಾಗಿದ್ದ ಕೆಂಪು-ಬಿಳಿ ತೇಪೆಗಳನ್ನುತೆಗೆದು ಹಾಕಿದ್ದಾರೆ. ಈ ತೇಪೆಗಳು ಕ್ಯಾನ್ಸರ್‌ ಆರಂಭಕ್ಕೂ ಮೊದಲಿನ ಲಕ್ಷಣವಾಗಿತ್ತು.

ಇದನ್ನೂ ಓದಿ : Garuda Gang/ ಗರುಡಾ ಗ್ಯಾಂಗ್‌ ಹೆಡೆಮುರಿ ಕಟ್ಟಿದ ಭಟ್ಕಳ ಪೊಲೀಸರು

“ಅವರು ಸರಿಯಾದ ಸಮಯಕ್ಕೆ ನಮ್ಮ ಬಳಿಗೆ ಬಂದರು. ಇನ್ನೂ ಕೆಲವು ತಿಂಗಳು ತಡ ಮಾಡಿದ್ದರೆ ಅದು ಬಾಯಿಯ ಕ್ಯಾನ್ಸರ್ (oral cancer) ಆಗಿ ಬದಲಾಗಬಹುದಿತ್ತು. ಬಾಯಿಯಲ್ಲಿ ಆರು ಗಂಟೆಗಳ ಕಾಲ ಖೈನಿಯನ್ನು ಇಟ್ಟುಕೊಳ್ಳುವುದು ಅಂದರೆ ಒಂದು ದಿನಕ್ಕೆ ೩೦ ಗುಟ್ಕಾ ಪ್ಯಾಕೆಟ್‌ ಗಳನ್ನು ಜಗಿಯುವದಕ್ಕೆ ಸಮಾನ” ಎಂದು ಡಾ. ಕಿತ್ತೂರ್ ಹೇಳಿದ್ದಾರೆ.  ಅಂಜಲಿಯವರು ಈಗ ತಂಬಾಕಿನ ಚಟವನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ. ಅವರು ಈಗ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಗಾಯಗಳಿಂದ ಮುಕ್ತರಾಗಿದ್ದಾರೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಡಾ.ಕಿತ್ತೂರ ತಿಳಿಸಿದ್ದಾರೆ.

ಇದನ್ನೂ ಓದಿ : High Court/ ಭಟ್ಕಳ, ಅಣ್ಣಿಗೇರಿ ಪುರಸಭೆಯಲ್ಲಿ ಮೀಸಲು ಸದಸ್ಯರು ಇಲ್ಲದಿರುವುದನ್ನು ಗಮನಿಸಿದ ಹೈಕೋರ್ಟ್‌

ಇನ್ನೊಂದು ಪ್ರಕರಣದಲ್ಲಿ, ೨೬ ವರ್ಷದ ಯುವತಿಯೊಬ್ಬರು ಆಸ್ಪತ್ರೆಗೆ ಬಂದಾಗ ದವಡೆಯಲ್ಲಿ ಗಟ್ಟಿತನ ಮತ್ತು ಬಾಯಿ ತೆರೆಯಲು ಕಷ್ಟವಾಗುವ ಲಕ್ಷಣವಿತ್ತು. ಅವರು ಆಗಾಗ ಗುಟ್ಕಾ ಜಗಿಯುತ್ತಿದ್ದರು. ಇವರು ಸಹ ಊಟದ ನಂತರ ಖೈನಿ ಬಾಯಲ್ಲಿ ಇಟ್ಟುಕೊಂಡು ಮಲಗುತ್ತಿದ್ದರು. ಅವರು ಆಸ್ಪತ್ರೆಗೆ ಬಂದಾಗ ಅವರಿಗೆ ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್ (OSMF) ಆಗಿದೆ ಎಂದು ತಿಳಿದುಬಂತು.

ಇದನ್ನೂ ಓದಿ : Bus hit/ ಬಸ್‌ ಡಿಕ್ಕಿಯಾಗಿ ವೃದ್ಧೆ ಗಂಭೀರ

ಓಎಸ್‌ಎಂಎಫ್‌ ಅಂದರೆ ದೀರ್ಘಕಾಲಿಕವಾಗಿ ಹರಡುತ್ತಾ ಹೋಗುವ  ಸ್ಥಿತಿ. ಬಾಯಿಯ ಒಳಗಿನ ಮೃದು ಅಂಗಾಂಶಗಳನ್ನು ದಪ್ಪವಾಗಿಸುತ್ತದೆ. ಬಾಯಿಯ ಚಲನೆಯನ್ನು ಕಡಿಮೆ ಮಾಡುತ್ತದೆ. ಚಿಕಿತ್ಸೆ ನೀಡದಿದ್ದರೆ ಸಾಮಾನ್ಯವಾಗಿ ಬಾಯಿಯ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. ಈಗ ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಈ ಸ್ಥಿತಿ ಗುಟ್ಕಾ ತಿನ್ನುವವರಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ ಎಂದು ಡಾ.ಕಿತ್ತೂರ ಹೇಳಿದ್ದಾರೆ.

ಇದನ್ನೂ ಓದಿ : RNS PU College/ ಕೆಸಿಇಟಿ ಪರೀಕ್ಷೆಯಲ್ಲಿ ಆರ್.ಎನ್.ಎಸ್. ಸಾಧನೆ  

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಎರಡೂ ಪ್ರಕರಣಗಳು ಸಾಮಾನ್ಯವಲ್ಲ. ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಸಂಪ್ರದಾಯದ ಹೆಸರಿನಲ್ಲಿ, ನೋವು ನಿವಾರಣೆಯ ತಪ್ಪು ನಂಬಿಕೆಯಲ್ಲಿ ಮತ್ತು ಧೂಮಪಾನ ಹೊರತಾದ ತಂಬಾಕಿನ ಬಳಕೆ ಸಾಮಾನ್ಯವಾಗಿದೆ ಎನ್ನುತ್ತಾರೆ ಡಾ.ಕಿತ್ತೂರ.

ಇದನ್ನೂ ಓದಿ : arrested / ಗೋವಾದಲ್ಲಿ ಕಾರವಾರದ ವ್ಯಕ್ತಿ ಬಂಧನ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಡಾ. ಕಿತ್ತೂರ ಮತ್ತು ಅವರ ತಂಡವು ಆರಂಭಿಕ ಹಂತದಲ್ಲಿಯೇ ರೋಗನಿರ್ಣಯ ಮಾಡುವ ಮೂಲಕ ಮತ್ತು ಅರಿವನ್ನು (No Tobacco) ಉಂಟು ಮಾಡುವ ಮೂಲಕ ಶ್ರಮಿಸುತ್ತಿದ್ದಾರೆ. “ನಾವು ಇಂತಹ ಪ್ರಕರಣಗಳನ್ನು ನೋಡುತ್ತಲೆ ಇರುತ್ತೇವೆ. ಸಕಾಲಿಕ ಚಿಕಿತ್ಸೆ ಮತ್ತು ಕಟ್ಟುನಿಟ್ಟಾದ ಫಾಲೋಅಪ್‌ ನಿಂದ, ಇಂತಹ ಪ್ರಕರಣಗಳಲ್ಲಿ ನಾವು ಶೇ.೧೦೦ರಷ್ಟು ಜೀವ ಉಳಿಸಿದ ಸಾಧನೆ ಮಾಡಿದ್ದೇವೆ” ಎಂದು ಡಾ. ಕಿತ್ತೂರ ಹೇಳುತ್ತಾರೆ.

ಇದನ್ನೂ ಓದಿ : Chitrasanthe/ ಉಮೇಶ ಮುಂಡಳ್ಳಿಗೆ ಚಿತ್ರಸಂತೆ ವರ್ಷದ ಕನ್ನಡಿಗ ಪ್ರಶಸ್ತಿ