ಭಟ್ಕಳ (Bhatkal) : ಪಟ್ಟಣದ ಸೋನಾರಕೇರಿಯಲ್ಲಿ ಇರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಭಜನಾ ಸಪ್ತಾಹ ಫೆ.೮ ರಿಂದ ಆರಂಭಗೊಂಡಿದ್ದು, ೧೮ರ ತನಕ ನಡೆಯಲಿದೆ. ೩೫ನೇ ವರ್ಷದ ‘ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ಬೆಳ್ಳಿ ರಥೋತ್ಸವ (Rathotsava) ಫೆ. ೧೭ರಂದು ಜರುಗಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫೆ. ೧೭ ಸೋಮವಾರ ಬೆಳಿಗ್ಗೆ ೬ ಗಂಟೆಗೆ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಗಣೇಶ ಪೂಜಾ, ಪುಷ್ಪಾಹ ಅಧಿವಾಸ ಪೂಜೆ ಮತ್ತು ಹೋಮ ರಥ ಶುದ್ಧಿ ಸಂಸ್ಕಾರಹವನ, ಮಹಾಪೂಜೆ, ದಂಡಬಲಿ ನಡೆಯಲಿದೆ.
ವಿಡಿಯೋ ಸಹಿತ ಇದನ್ನು ಓದಿ : Ashtabandha/ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ
ಮಧ್ಯಾಹ್ನ ೧೨.೩೦ ರ ಅಭಿಜಿತ್ ಮುಹೂರ್ತದಲ್ಲಿ ಶ್ರೀ ದೇವರ ರಥಾರೋಹಣ, ರಥಕಾಣಿಕೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ ರಥೋತ್ಸವ (Rathotsava), ಮೃಗಯಾತ್ರೆ, ಸಂವಾದ ಪೂಜೆ ಇತ್ಯಾದಿ ನಡೆಯಲಿದೆ. ರಾತ್ರಿ ೭.೩೦ಕ್ಕೆ ಮೃಗಬೇಟೆ ಪ್ರಯುಕ್ತ ಆಷ್ಠಾವಧಾನ ಸೇವೆ ಮತ್ತು ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಇದನ್ನು ಓದಿ : Sukri Gowda/ ಹಾಡು ನಿಲ್ಲಿಸಿದ ಜಾನಪದ ಕೋಗಿಲೆ
ಫೆ. ೧೮ರ ಮಂಗಳವಾರ ಶ್ರೀ ಗಣೇಶ ಪೂಜೆ, ಪುಣ್ಯಾಹ, ಅಧಿವಾಸ ಪೂಜೆ ಹೋಮ, ವಸಂತಪೂಜೆ, ಅವಧೃತ ಸ್ನಾನ, ಅವರೋಹಣ, ಮಹಾಪೂರ್ಣಾಹುತಿ, ಕುಂಭಾಭಿಶೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಇದನ್ನು ಓದಿ : German Bakery / ಜರ್ಮನ್ ಬೇಕರಿ ಸ್ಫೋಟಕ್ಕೆ ೧೫ ವರ್ಷ