ಭಟ್ಕಳ (Bhatkal): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಾವ ಕವಿ ಉಮೇಶ ಮುಂಡಳ್ಳಿ ಅವರ “ತಿಂಗಳ ಬೆಳಕು” ಮರುಮುದ್ರಣದ ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ (Veerendra Heggade) ಬಿಡುಗಡೆಗೊಳಿಸಿದರು (Book Release).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎಪ್ಪತ್ತಾರನೇ ಗಣರಾಜ್ಯೋತ್ಸವದಂದು ರವಿವಾರ ಶ್ರೀ ಕ್ಷೇತ್ರದಲ್ಲಿ ಹೆಗ್ಗಡೆಯವರು “ತಿಂಗಳ ಬೆಳಕು” ಲೋಕಾರ್ಪಣೆ ಗೊಳಿಸಿದರು (Book Release). ಸಾಹಿತ್ಯ ಕ್ಷೇತ್ರ ಮನಸ್ಸಿಗೆ ಮುದ ನೀಡುವಂತಹದ್ದು. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತಹ ಉದ್ದೇಶ ಇರುವಂತಹದ್ದು. ಈ ಹನಿ ಕವನಗಳು ಹಿರಿದಾದ ಅರ್ಥವನ್ನು ನೀಡುವ ಮೂಲಕ ಬದುಕಿಗೆ ಸಾರ್ಥಕ ಸಂದೇಶ ನೀಡುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಲಭಿಸಲಿ ಎಂದು ಅವರು ಮುಂಡಳ್ಳಿ ಅವರಿಗೆ ಶುಭಾಶೀರ್ವಾದ ನೀಡಿದರು.

ಇದನ್ನೂ ಓದಿ : Namadhari/ ಫೆ.೨ರಿಂದ ೫ರವರೆಗೆ ನಾಮಧಾರಿ ಗುರುಮಠದಲ್ಲಿ ವರ್ಧಂತಿ ಮಹೋತ್ಸವ

ಚಂದಿರನನ್ನು ಸಂಕೇತವಾಗಿ ಇಟ್ಟುಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಮುಂಡಳ್ಳಿ ಅವರು ಪ್ರತಿ ನಿತ್ಯವು ಬರೆದು ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿದ್ದ ನೂರಕ್ಕೂ ಹೆಚ್ಚಿನ ಹನಿ ಕವಿತೆಗಳನ್ನು ಒಳಗೊಂಡ ಸಂಕಲನ ತಿಂಗಳ ಬೆಳಕು. ಇದು  ಶರಣು ದುರ್ಗಾ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಹನ್ನೊಂದನೇ ಕೃತಿಯಾಗಿದೆ.

ಇದನ್ನೂ ಓದಿ : weather forecast / ಕರಾವಳಿ ಸಹಿತ ಹಲವೆಡೆ ಮಳೆ

ನಾಡಿನ ಹಿರಿಯ ಕವಿಗಳು, ಬರಹಗಾರರು, ಪತ್ರಕರ್ತರು ಆದ  ವಿ.ಬಿ.ಅರ್ತಿಕಜೆ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ಉದಯವಾಣಿ ಉಪಸಂಪಾದಕರಾಗಿದ್ದ ದಿವಂಗತ ಸೀತಾಲಕ್ಷ್ಮೀ ಕರ್ಕಿಕೋಡಿಯವರಿಗೆ ಅರ್ಪಣೆ ಮಾಡಲಾದ ಕೃತಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಿಂಗಳ ಬೆಳಕು ಬಿಡುಗಡೆ ಸಂದರ್ಭದಲ್ಲಿ ಕವಿಗಳಾದ ಉಮೇಶ ಮುಂಡಳ್ಳಿ, ವೆಂಕಟಾಪುರದ ಯಕ್ಷ ಚೌಡೇಶ್ವರಿ ದೇವಾಲಯದ ಮುಖ್ಯಸ್ಥ ಶ್ರೀಧರ ನಾಯ್ಕ, ಮಾರುತಿ ನಾಯ್ಕ ಹಾಜರಿದ್ದರು.

ಇದನ್ನೂ ಓದಿ : Blood Donation/ ಭಟ್ಕಳದಲ್ಲಿ ರಕ್ತದಾನ ಶಿಬಿರ ಉದ್ಘಾಟನೆ