ಭಟ್ಕಳ (Bhatkal) : ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ರಾಜಾಂಗಣದ (Rajangana) ಮುಖ್ಯ ರಸ್ತೆಯಲ್ಲಿರುವ ನಾಗಬನ (nagabana) ಶ್ರೀ ನಾಗ ಮತ್ತು ಶ್ರೀ ಜೈನ ನಾಗಯಕ್ಷೆ ದೇವರುಗಳ ಪುನರ್ ಪ್ರತಿಷ್ಠೆಯ ದ್ವಿತೀಯ ವರ್ಷದ ವಾರ್ಷಿಕ ವರ್ಧಂತಿ (vardhanthi) ಪೂಜಾ ಮಹೋತ್ಸವ ಸೋಮವಾರ (ಫೆ.೧೭) ಸಾಂಗವಾಗಿ ನೆರವೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೫೦೦ ವರ್ಷಗಳ ಇತಿಹಾಸ ಹೊಂದಿರುವ ನಾಗಬನ ಶ್ರೀ ದೇವರ ವರ್ಧಂತ್ಯೋತ್ಸವಕ್ಕೆ (vardhanthi) ಭಟ್ಕಳ ತಾಲೂಕಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಶ್ರೀ ದೇವರಿಗೆ ಪೂಜೆ, ಹಣ್ಣುಕಾಯಿ ಸೇವೆ ಸಲ್ಲಿಸಿ ಕೃತಾರ್ಥರಾದರು. ಮುಂಡಳ್ಳಿ ಮಹಿಳಾ ಭಜನಾ ಮಂಡಳಿಯವರು ಭಜನಾ ಸೇವೆ ಸಲ್ಲಿಸಿದರು.

ಇದನ್ನು ಓದಿ : Mariyamma/ ಗಂಜಿ ಮಾರಿಯಮ್ಮ ದೇವಿ ಪ್ರತಿಷ್ಠಾಪನೆ

ಮಧ್ಯಾಹ್ನ ಮಹಾಪೂಜೆ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಮುಖ್ಯ ರಸ್ತೆಯಲ್ಲಿ ಭಕ್ತರಿಗೆ ನೂಕು ನುಗ್ಗಲು ಆಗದಂತೆ ಸಮಿತಿ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನು ಓದಿ : Rescue of tourists/ ಅರಣ್ಯದಲ್ಲಿ ಸಿಲುಕಿದ ಪ್ರವಾಸಿಗರ ರಕ್ಷಣೆ

ಈ ಸಂದರ್ಭದಲ್ಲಿ ಸುಮಾರು ₹೭೦ ಸಾವಿರ ವೆಚ್ಚದಲ್ಲಿ ನಿರ್ಮಿಸಿದ 3 ಬೆಳ್ಳಿ ಕವಚವನ್ನು ಮೆರವಣಿಗೆಯಲ್ಲಿ ತಂದು ತೊಡಿಸಲಾಯಿತು. ಪಟ್ಟಣದ ಕರಿಬಂಟ ಹನುಮಂತ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪ್ರಮುಖರಾದ ಕೇಶವ ನಾಯ್ಕ, ಜಗದೀಶ ಮಹಾಲೆ, ರಾಜೇಶ ಮಹಾಲೆ, ಮಂಜುನಾಥ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಗಣಪತಿ ನಾಯ್ಕ ಮತ್ತಿತರರು ಇದ್ದರು.

ಇದನ್ನು ಓದಿ : Music/ ಸಿದ್ದಿವಿನಾಯಕ ದೇವಾಲಯದಲ್ಲಿ ಭಕ್ತಿ ಸಂಗೀತ

ಈ ಕ್ಷೇತ್ರಪಾಲವು ಸುಮಾರು ೫೦೦ ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಕಾಲಾನಂತರದಲ್ಲಿ ಕ್ಷೇತ್ರದ ವೈಭವವನ್ನೇ ಕಳೆದುಕೊಂಡಂತಾಗಿತ್ತು. ತದನಂತರ ಕ್ಷೇತ್ರದ ಗತಸ್ಥಿತಿಯನ್ನು  ನೋಡಿ ಭಕ್ತರು ಶ್ರೀ ರಾಜಾಂಗಣ ನಾಗಬನ ಅಭಿವೃದ್ಧಿ ಸಮಿತಿ ರಚಿಸಿ ಜೀರ್ಣೋದ್ಧಾರಕ್ಕೆ ಮುನ್ನುಡಿ ಬರೆದರು. ಶ್ರೀ ಕ್ಷೇತ್ರದ ಕಳೆ ಬರಹಗಳನ್ನು ಕಲೆಹಾಕಿ ಶ್ರೀ ಕ್ಷೇತ್ರಕ್ಕೆ ಕಳೆ ಕೊಟ್ಟು, ೨೦೨೩ರಲ್ಲಿ ಶ್ರೀ ದೇವರುಗಳ ಪುನರ್ ಪ್ರತಿಷ್ಠೆ ಮಾಡಲಾಗಿದೆ.

 

 

 

ಇದನ್ನು ಓದಿ : ಹಳ್ಳಕ್ಕೆ ಬಿದ್ದು ಮೂರು ವರ್ಷದ ಮಗು ನಿಧನ