ಭಟ್ಕಳ (Bhatkal): ಭಾರಿ ಸುರಿಯುತ್ತಿದ್ದ ಮಳೆಯಲ್ಲಿ (heavy rain) ಮನೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಗುಳ್ಮಿ ಬೆಳಲಖಂಡದಲ್ಲಿರುವ ಲಕ್ಕಿ ನೂಡಲ್ ಫ್ಯಾಕ್ಟರಿ ಹಿಂಬದಿಯಲ್ಲಿ ನಡೆದಿದೆ (tragic incident).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ವ್ಯಕ್ತಿಯನ್ನು ಮಾದೇವ ನಾರಾಯಣ ದೇವಾಡಿಗ (೫೦) ಎಂದು ಗುರುತಿಸಲಾಗಿದೆ. ಜೂನ್ ೧೨ರ ಸಂಜೆ ೫ ಗಂಟೆಯಿಂದ ಜೂನ್ ೧೪ರ ಸಂಜೆ 7 ಗಂಟೆಯ ನಡುವಿನ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ವೇಳೆ ದುರ್ಘಟನೆ ನಡೆದಿದೆ (tragic incident). ಇವರು ಭಟ್ಕಳದ ಗುಳ್ಮಿ ಬೆಳಲಖಂಡ ದಲ್ಲಿರುವ ಲಕ್ಕಿ ಫ್ಯಾಕ್ಟರಿ ನೂಡಲ್ ಫ್ಯಾಕ್ಟರಿ ಹಿಂಬದಿಯಿಂದ ತಮ್ಮ ಮನೆಗೆ ನಡೆದುಕೊಂಡು ಹೋಗುವಾಗ ಭಾರಿ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ವ್ಯಕ್ತಿಯ ಪತ್ನಿ ಲಕ್ಷ್ಮೀ ಮಾದೇವ ದೇವಾಡಿಗ ಪ್ರಕರಣ ದಾಖಲಿಸಿದ್ದಾರೆ (complaint filed).

ವಿಡಿಯೋ ಸಹಿತ ಇದನ್ನೂ ಓದಿ : tragic/ ಕಾಲುವೆಗೆ ಬಿದ್ದು ೨ ವರ್ಷದ ಬಾಲಕಿ ದುರ್ಮರಣ