ಹೊನ್ನಾವರದ (honnavar) ಸಾಲ್ಕೋಡು, ಕೊಂಡದಕುಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ ನಡೆಯುತ್ತಿತ್ತು. ಜನ ಆ ಭಾಗದ ಚಿರತೆ ಮೇಲೆ ಸಾಕಷ್ಟು ಅನುಮಾನ ಪಟ್ಟಿದ್ದರು. ಆದರೆ, ಜನವರಿ ೧೯ರಂದು ಗರ್ಭಿಣಿ ಹಸು ತುಂಡು ತುಂಡಾಗಿ ಬಿದ್ದಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಾದ ನಂತರ ೪೦೦ಕ್ಕೂ ಅಧಿಕ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್ನಷ್ಟು ಗೋ ಮಾಂಸ ಭಕ್ಷಣೆಯ ಪ್ರಕರಣಗಳು ಹೊರ ಬಂದಿದ್ದು, ಅಕ್ರಮ ಜಾನುವಾರು ಸಾಗಾಟಗಳನ್ನು ಪೊಲೀಸರು ತಡೆದಿದ್ದರು.
ಇದನ್ನೂ ಓದಿ : Women’s Day/ ಸೋನಾರಕೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ
ಮೂಲ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹೊನ್ನಾವರದ ಸಾಲ್ಕೊಡದಲ್ಲಿ ಮೇವಿಗೆ ತೆರಳಿದ್ದ ಗರ್ಭಿಣಿ ಗೋವು ಕೊಂದ ತೌಫಿಕ್ ಹಾಗೂ ಫೈಜಾನ್ ಸಿಕ್ಕಿ ಬಿದ್ದರು. ಅವರೊಡನೆ ಭಟ್ಕಳದ ವಾಸೀಂ ಹಾಗೂ ಮುಜಾಮಿಲ್ ಸಹ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಅರಿವಿಗೆ ಬಂದಿತು. ಆದರೆ, ಎಷ್ಟು ಹುಡುಕಾಟ ನಡೆಸಿದರೂ ವಾಸೀಂ ಹಾಗೂ ಮುಜಾಮಿಲ್ ಸಿಕ್ಕಿರಲಿಲ್ಲ. ಹೀಗಾಗಿ ಅವರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ 50 ಸಾವಿರ ರೂ ಬಹುಮಾನ ನೀಡುವುದಾಗಿಯೂ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಘೋಷಿಸಿದ್ದರು.
ಇದನ್ನೂ ಓದಿ : Car-auto accident/ ಕಾರು-ಆಟೋ ಜಖಂ; ಮೂವರಿಗೆ ಗಾಯ
ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ ಜಗದೀಶ, ಮಹೇಶ ಕೆ ನೇತ್ರತ್ವದಲ್ಲಿ ದುಷ್ಟರ ಹುಡುಕಾಟಕ್ಕೆ ತಂಡ ರಚನೆಯಾಯಿತು. ಸಿಪಿಐ ಸಂತೋಷ ಕಾಯ್ಕಿಣಿ, ಸಿದ್ದರಾಮೇಶ್ವರ ಎಸ್, ಪಿಎಸ್ಐ ರಾಜಶೇಖರ, ಮಮತಾ ನಾಯ್ಕ ಜೊತೆ ಹೊನ್ನಾವರದ ಪಿಎಸ್ಐ ಮಂಜುನಾಥ ತಂಡದವರು ಕಳ್ಳರ ಹುಡುಕಾಟ ನಡೆಸಿದರು. ಭಟ್ಕಳ, ಮುರುಡೇಶ್ವರ (Murudeshwar), ಹೊನ್ನಾವರ ಪೊಲೀಸ್ ಠಾಣೆಯ ಸಿಬ್ಬಂದಿ ಪೈಕಿ ಅಬ್ದುಲ್ ಹಮೀದ್, ಕೃಷ್ಣೆಗೌಡ, ನಾಗರಾಜ ಮೋಗೇರ, ದಿನೇಶ ನಾಯ್ಕ, ಲೋಕೇಶ ಕತ್ತಿ, ಮಂಜುನಾಥ ಲಕ್ಮಾಪುರಿ, ಮೈನುದ್ದೀನ್ ಘಾಟ್ನೀ, ಆನಂದ ಲಮಾಣಿ, ವಿಠ್ಠಲ್ ಹಳಿ, ಮಲ್ಲಿಕಾರ್ಜುನ ಸರದಾರ ಸೇರಿ ಈ ಪ್ರಕರಣಕ್ಕಾಗಿ ಓಡಾಟ ನಡೆಸಿದರು. ಸಿಡಿಆರ್ ವಿಭಾಗದ ಉದಯ ಗುಣಗಾ ಹಾಗೂ ಬಬನ ಗೋ ಕಳ್ಳರ ತಾಂತ್ರಿಕ ಚಲನ-ವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಇದನ್ನೂ ಓದಿ : Hit and Run/ ಮುರ್ಡೇಶ್ವರದಲ್ಲಿ ಹಿಟ್ ಎಂಡ್ ರನ್ ಪ್ರಕರಣ
ಅದರ ಪ್ರಕಾರ ಜನವರಿ 23ರಂದು ಧಾರವಾಡ (Dharwad) ಕಡೆಯಿಂದ ಆರೋಪಿತರು ತಪ್ಪಿಸಿಕೊಂಡು ಹೋಗಿರುವ ಅನುಮಾನ ಕಾಡಿತು. ಈ ಹಿನ್ನಲೆ ೧೩೦ ಪ್ರದೇಶದಲ್ಲಿಸಿ ಸಿಸಿ ಕ್ಯಾಮರಾಗಳನ್ನು ಪೊಲೀಸರು ತಪಾಸಣೆ ಮಾಡಿದರು. ಹಾವೇರಿ(Haveri), ದಾವಣಗೆರೆ(Davanagere), ವಿಜಯಪುರ(Vijayapura), ಗೋವಾ (Goa)-ಮಹಾರಾಷ್ಟ್ರದಲ್ಲಿ(Maharashtra) ಸಹ ಆ ಇಬ್ಬರಿಗಾಗಿ ಹುಡುಕಾಟ ನಡೆಸಿದರು. ಈ ನಡುವೆ ಮಾರ್ಚ ೮ರಂದು ಪಿಎಸ್ಐ ಮಂಜುನಾಥ ಅವರಿಗೆ ಆರೋಪಿ ಮಜಮಿಲ್ ಭಟ್ಕಳದ ಮನೆಗೆ ಬಂದ ಮಾಹಿತಿ ಸಿಕ್ಕಿತು. ಪೊಲೀಸ್ ಸಿಬ್ಬಂದಿ ಕೃಷ್ಣೆಗೌಡ, ನಾಗರಾಜ ಮೊಗೇರ್, ಲೋಕೇಶ ಕತ್ತಿ, ದಿನೇಶ ನಾಯಕ ಅವರನ್ನು ಅಲ್ಲಿಗೆ ಕಳುಹಿಸಿ, ಮಜಮಿಲ್’ನನ್ನು ವಶಕ್ಕೆ ಪಡೆದರು.
ಇದನ್ನೂ ಓದಿ : KFD/ ಉತ್ತರ ಕನ್ನಡದಲ್ಲಿ ೧೮ ಮಂಗಗಳ ಸಾವು
ನಂತರ ಉಳಿದ ಸಿಬ್ಬಂದಿ ಅಬ್ದುಲ್ ಹಮೀದ್, ವಿಠ್ಠಲ ಹಳ್ಳಿ, ಮಲ್ಲಿಖಾರ್ಜುನ ಸೇರಿ ಮುಂಬೈ ಪ್ರಯಾಣ ಬೆಳಸಿದರು. ಅಲ್ಲಿನ ಪಕೀರ ಬಜಾರಿನಲ್ಲಿ ಗುಲ್ವಾಡಿ ಸರ್ಕಲ್ ಬಳಿ ಅಡಗಿದ್ದ ವಾಸಿಂ’ನನ್ನು ಅವರೆಲ್ಲರೂ ಸೇರಿ ಬಂಧಿಸಿದರು. ಇನ್ನೂ ಈ ಪ್ರಕರಣ ಬೇದಿಸಲು ಸಾರ್ವಜನಿಕರು ಪೊಲೀಸರಿಗೆ ನೆರವಾಗಿದ್ದರು. ದುಷ್ಟರ ಸುಳಿವು ನೀಡಿದ ಇಬ್ಬರಿಗೆ ಪೊಲೀಸರು 50 ಸಾವಿರ ರೂ ಬಹುಮಾನವನ್ನು ನೀಡಿದರು.
ವಿಡಿಯೋ ಸಹಿತ ಇದನ್ನೂ ಓದಿ : cattle protect/ ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳ ರಕ್ಷಣೆ