ಭಟ್ಕಳ (Bhatkal) : ಇಲ್ಲಿನ ಮುಟ್ಟಳ್ಳಿ ಮೂಡಭಟ್ಕಳ ಅಂಡರಪಾಸ್ (Under Pass) ಕುರಿತು ಜನರ ಮನವೊಲಿಸಲು ಬಂದ ಸಂಸದ ಕಾಗೇರಿಯವರನ್ನು (MP Kageri) ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಗಳವಾರ ಪಟ್ಟಣದ ಕೇತಪೈ ನಾರಾಯಣ ದೇವಸ್ಥಾನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅಂಡರ್ ಪಾಸ್ (Under Pass) ಕುರಿತು ಸಂಸದರು ಪ್ರಸ್ತಾವಿಸಿದರು. ಈಗ ನಮ್ಮ ಬಳಿ ಕೇವಲ ೨ ಅವಕಾಶ ಇದೆ. ಒಂದು ಈಗಾಗಲೇ ಮಂಜೂರಿಯಾಗಿರುವ ನಕ್ಷೆಯನ್ನು ಮುಂದುವರೆಸುವದು. ಬಳಿಕ ಕೇಂದ್ರ ಸರ್ಕಾರದ ಅನುದಾನ ತಂದು ಮುಂದಿನ ಅಭಿವೃದ್ಧಿ ಮಾಡುವದು. ಇನ್ನೊಂದು ಹೊಸ ಅನುದಾನಕ್ಕಾಗಿ ಮನವಿ ಸಲ್ಲಿಸಿ ಅದು ಬರುವವರೆಗೂ ಕಾಯುವದು. ಆದರೆ ಅದು ಎಷ್ಟು ವಿಳಂಬವಾಗುತ್ತದೊ ತಿಳಿಯದು. ಹಾಗಾಗಿ ನಾವು ಮೊದಲ ಅವಕಾಶವನ್ನು ಉಪಯೋಗಿಸಿಕೊಂಡು ಮಂಜೂರಿಯಾಗಿದ್ದ ನಕ್ಷೆಯಂತೆಯೇ ಹೆದ್ದಾರಿ ವಿಸ್ತರಣೆ ಮುಗಿಸುವದು ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : Mari Jathre/ ಮನೆಯ ಹಬ್ಬವಾಗಿಸುವ ಮಾರಿ ಜಾತ್ರೆ
ಸಂಸದರ ಮಾತು ಕೇಳುತ್ತಿರುವಂತೆ ಆಕ್ರೋಶಗೊಂಡ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಅಂಡರ್ಪಾಸ್ ಇಲ್ಲದೆ ಹೆದ್ದಾರಿ (National Highway) ವಿಸ್ತರಣೆ ಮಾಡಲು ಅವಕಾಶ ನೀಡುವುದಿಲ್ಲ. ಕಳೆದ ಐದು ವರ್ಷಗಳಿಂದ ಕೇವಲ ಭರವಸೆಗಳನ್ನು ಮಾತ್ರ ಕೇಳುತ್ತಿದ್ದೇವೆ. ಮೊದಲು ನಕ್ಷೆ ತಯಾರಿಸುವಾಗ ಸ್ಥಳೀಯರನ್ನು ಗಣನೆಗೆ ತೆಗೆದುಕೊಂಡಿಲ್ಲ. ಈಗಾಗಲೇ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ನಮ್ಮ ಜಿಲ್ಲೆಯ ಎಲ್ಲಾ ಸೇತುವೆಗಳನ್ನು ಈಗಾಗಲೇ ಬಂದ್ ಮಾಡಿ ಒಂದೇ ಸೇತುವೆಯಲ್ಲಿ ಸಂಚಾರ ಮಾಡುವಂತಾಗಿದೆ. ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು ಸಾವು ನೋವುಗಳು ಸಂಭವಿಸುತ್ತಿವೆ. ಇದಕ್ಕೆಲ್ಲಾ ನೀವು ಯಾವ ಕ್ರಮ ಕೈಗೊಂಡಿದ್ದಿರಿ ಎಂದು ತಮ್ಮ ಅಸಮಾಧಾನ ತೊಡಿಕೊಂಡರು.
ವಿಡಿಯೋ ಸಹಿತ ಇದನ್ನೂ ಓದಿ : Mari Jathre/ ಅಳಿವೆಕೋಡಿಯಲ್ಲಿ ಮಾರಿ ಜಾತ್ರೆ ವೈಭವ
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ನಾನು ಸಂಸದನಾಗಿ ಕೇವಲ ಆರು ತಿಂಗಳಾಯ್ತು. ಈ ನಿಟ್ಟಿನಲ್ಲಿ ನಾನು ಈಗಾಗಲೇ ಕಾರ್ಯಪ್ರವರ್ತನಾಗಿದ್ದೇನೆ ಎಂದರೂ ಸಮಾಧಾನಗೊಳ್ಳದ ಗ್ರಾಮಸ್ಥರು, ತಮ್ಮ ಸಮಸ್ಯೆಗಳ ಸುರಿಮಳೆಗೈದರು. ಅಳಿವೆಕೋಡಿಯಲ್ಲಿ ಗುರುಗಳು ಬಂದಿದ್ದಾರೆ ಎಂದು ಸಂಸದರು ತೆರಳುತ್ತಿದ್ದಂತೆ ಗ್ರಾಮಸ್ಥರು ಅಸಮಾಧಾನಗೊಂಡರು. ಹೋದ ಪುಟ್ಟ ಬಂದ ಪುಟ್ಟ ಮಾಡುವದಾದರೆ ಇಲ್ಲಿ ಬರುವ ಅವಶ್ಯಕತೆ ಎನಿತ್ತು ಎಂದು ಎನ್ಎಚ್ಎಐ ಪಿಡಿ ಅವರ ಮೇಲೆಯೂ ರೊಚ್ಚಿಗೆದ್ದರು.
ವಿಡಿಯೋ ಸಹಿತ ಇದನ್ನೂ ಓದಿ : Kannada cinema/ ಭಟ್ಕಳ, ಮುರುಡೇಶ್ವರದಲ್ಲಿ ಕೋಣ ಚಿತ್ರೀಕರಣ
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ (BJP) ಮಂಡಲಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಕೇತಪೈ ದೇವಸ್ಥಾನದ ಮುಖ್ಯಸ್ಥ ವೆಂಕಟೇಶ ನಾಯ್ಕ, ಮಹಿಳಾ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಸೇರಿದಂತೆ ಇತರರು ಇದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಮುರುಡೇಶ್ವರಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ನಿಧನ