ಬೆಳಗಾವಿ (Belagavi) : ಇಲ್ಲಿನ ಕೋಟೆ ಆವರಣದ ರಾಮಕೃಷ್ಣ ಮಿಷನ್ ನ (Ramakrishna Mission) ವಾರ್ಷಿಕೋತ್ಸವ ಪ್ರಯುಕ್ತ ಫೆಬ್ರವರಿ ೯ರಂದು ಯಕ್ಷಗಾನ (Yakshagana) ಪ್ರದರ್ಶನ ಏರ್ಪಡಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಾರ್ಷಿಕೋತ್ಸವದ ನಿಮಿತ್ತ ಅಂದು ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದೆ. ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧.೩೦ರವರೆಗೆ ಭಜನೆ ಮತ್ತು ಪ್ರವಚನ ಏರ್ಪಡಿಸಲಾಗಿದೆ. ಜೀವನ ಎಂದರೇನು ವಿಷಯವಾಗಿ ತಮಿಳುನಾಡು (Tamilnadu) ಊಟಿಯ (Ooty) ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ ಮಹಾರಾಜ ಅವರು ಮಾತನಾಡುವರು. ಗುಜರಾತಿನ (Gujarat) ರಾಜಕೋಟ್ ರಾಮಕೃಷ್ಣ ಮಠದ ಸ್ವಾಮಿ ಗುಣೇಶಾನಂದಜೀ ಅವರು ಭಾಗವತದಲ್ಲಿರುವ ಮಾನವ ಧರ್ಮ, ಮದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮಂಗಳನಾಥ ನಂದಜೀ ಮಹಾರಾಜ ಅವರು ಉಪಯುಕ್ತ ಸಲಹೆಗಳು ವಿಷಯವಾಗಿ ಮಾತನಾಡುವರು.
ವಿಡಿಯೋ ಸಹಿತ ಇದನ್ನೂ ಓದಿ : BJP Celebration/ ಭಟ್ಕಳದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ನಂತರ ಸಂವಾದ, ಪ್ರಶ್ನೋತ್ತರ ಏರ್ಪಡಿಸಲಾಗಿದೆ. ಸಂಜೆ ೬ಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಕೆರೆಮನೆಯ ಶ್ರೀ ಇಡಗುಂಜಿ (Idagunji) ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಕೆರೆಮನೆ ಶಿವಾನಂದ ಹೆಗಡೆ ನಿರ್ದೇಶನದಲ್ಲಿ ಪಂಚವಟಿ ಎಂಬ ಯಕ್ಷಗಾನ (Yakshagana) ಪ್ರದರ್ಶನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : boat sink/ ಬೋಟ್ ಮುಳುಗಿ ೬೦ ಲಕ್ಷ ರೂಪಾಯಿ ನಷ್ಟ