ಭಟ್ಕಳ (Bhatkal): ತಾಲೂಕಿನ ಬೈಲೂರಿನ ಮಡಿಕೇರಿಯ ಎರಡು ಕುಟುಂಬಗಳ ಸಹೋದರರು ಪರಸ್ಪರ ಹೊಡೆದಾಡಿಕೊಂಡ ಘಟನೆ (Brothers’ challenge) ಮುರುಡೇಶ್ವರ (Murudeshwar) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಲೂರಿನ ಮಡಿಕೇರಿ ನಿವಾಸಿಗಳಾದ ಮೋಹನ ಮತ್ತು ವಾಸು ತಿಮ್ಮಪ್ಪ ನಾಯ್ಕ ಎಂಬ ಸಹೋದರರು ಹಾಗೂ ಸಚಿನ್ ಮತ್ತು ದರ್ಶನ ನಾಗೇಶ ನಾಯ್ಕ ಎಂಬ ಸಹೋದರರ ನಡುವೆ ಮಡಿಕೇರಿ ರಸ್ತೆಯ ವಿನಾಯಕ ಅಂಗಡಿ ಎದುರು ಜೂನ್ ೨೬ರ ರಾತ್ರಿ ೮.೩೦ಕ್ಕೆ ಗಲಾಟೆ ನಡೆದಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.

ಇದನ್ನು ಓದಿ: Youths in police custody/ ಬೆಂಗಳೂರಿನ ಯುವಕರಿಬ್ಬರು ಮುರುಡೇಶ್ವರ ಪೊಲೀಸ್ ವಶಕ್ಕೆ

ಮೋಹನ ಮತ್ತು ವಾಸು ನಾಯ್ಕ ಸಹೋದರರ ವಿರುದ್ಧ ಸಚಿನ್ ತಾಯಿ ಗಿರಿಜಾ ನಾಗೇಶ ನಾಯ್ಕ ದೂರ ದಾಖಲಿಸಿದ್ದರೆ, ಸಚಿನ್ ಮತ್ತು ದರ್ಶನ್ ಸಹೋದರರ ವಿರುದ್ಧ ಮೋಹನ ನಾಯ್ಕ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: Chain snatching attempt/ ಮನೆಯಲ್ಲಿ ಮಲಗಿದ್ದ ಮಹಿಳೆಯ ಚಿನ್ನದ ಸರ ಎಗರಿಸಲು ಯತ್ನ

ಮೋಹನ ಮತ್ತು ವಾಸು ನಾಯ್ಕ ಇಬ್ಬರೂ ಸೇರಿಕೊಂಡು ಯಾವುದೋ ಹಳೆ ದ್ವೇಷದಿಂದ ತನ್ನ ಮಗ ಸಚಿನ್ ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ, ಅವನಿಗೆ ಕಲ್ಲಿನಿಂದ ಹಾಗೂ ಕೈಯಿಂದ ಕಿವಿಯ ಎಡ ಭಾಗಕ್ಕೆ ಹಾಗೂ ಮುಖ್ಕಕೆ ಹೊಡೆದು ಗಾಯ ಪಡಿಸಿದ್ದಾರೆ. ಅಲ್ಲದೆ, ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗಿರಿಜಾ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Young man arrested/ ಮುರುಡೇಶ್ವರದಲ್ಲಿ ಅಳ್ವೆಕೋಡಿ ಯುವಕ ವಶಕ್ಕೆ

ಇದಕ್ಕೆ ಪ್ರತಿಯಾಗಿ ಮೋಹನ ನಾಯ್ಕ ದೂರು ನೀಡಿದ್ದು, “ಸಚಿನ್ ನಾಯ್ಕ ಕಳೆದ ೪ ವರ್ಷಗಳ ಹಿಂದೆ ಬಸ್ತಿಯ ಗುರುಕೃಪಾ ಬ್ಯಾಂಕಿನಲ್ಲಿ ನನ್ನ ಕಡೆಯಿಂದ ಸಾಲ ಮಾಡಿಸಿ, ಹಣ ಪಡೆದುಕೊಂಡವನು ಈ ವರೆಗೂ ಹಣ ವಾಪಸ್ ಕೊಟ್ಟಿಲ್ಲ. ಹಣ ವಾಪಸ್ ಕೊಡುವದಾಗಿ ನನ್ನನ್ನು ಕರೆದು ರಸ್ತೆಯಲ್ಲಿ ಏಕಾಏಕಿ ನನಗೆ ಕೈಯಿಂದ ಮುಖಕ್ಕೆ ಹಾಗೂ ಕಲ್ಲಿನಿಂದ ಹಣೆಗೆ ಬೀಸಿ ಹೊಡೆದಿದ್ದಲ್ಲದೇ, ಅವನ ಅಣ್ಣ ದರ್ಶನ ಕೂಡ ನನಗೆ ಕೈಯಿಂದ ಹೊಡೆದಿದ್ದಾನೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.Brothers challenge

ಇದನ್ನು ಓದಿ: Police raid in lodge/ ಮುರುಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸರ ದಾಳಿ