ಭಟ್ಕಳ (Bhatkal) : ಭಟಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ (Urban Bank) ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕ (Ex-soldier) ತೆಂಕಬೆಟ್ಟು ರಾಮಚಂದ್ರ ನಾವಡ ಅವರಿಗೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು (Farewell ceremony). ಬ್ಯಾಂಕಿನ ಆಡಳಿತ ಮಂಡಳಿ ವತಿಯಿಂದ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೀಳ್ಕೊಡುಗೆ ಸಮಾರಂಭದಲ್ಲಿ (Farewell ceremony) ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಆರ್. ನಾವಡ, ನನ್ನ ಜೀವನದಲ್ಲಿ ಇದು ಎರಡನೇ ಸೇವಾ ನಿವೃತ್ತಿಯಾಗಿದೆ. ಹಿಂದೆ ಸೇನೆಯಿಂದ ನಿವೃತ್ತಿಯಾಗಿದ್ದೆ. ಬೇರೆ ಬೇರೆ ಕಡೆಗಳಲ್ಲಿ ಅವಕಾಶವಿದ್ದರೂ ಈ ಬ್ಯಾಂಕಿನಲ್ಲಿ ಸೇವೆಗೆ ಸೇರಿದ್ದರಿಂದ ಮನಃ ತೃಪ್ತಿ ಇದೆ. ಇದೊಂದು ಅತ್ಯುತ್ತಮ ಬ್ಯಾಂಕ್. ನಾನು ಈ ಬ್ಯಾಂಕಿನಲ್ಲಿ ಸಂತೋಷದಿಂದ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ ಎಂದರು.

ಇದನ್ನೂ ಓದಿ : helping hand/ ಹುತಾತ್ಮ ಯೋಧನ ಕುಟುಂಬಕ್ಕೆ ಧನಸಹಾಯ

ಬ್ಯಾಂಕಿನ ಉಪಾಧ್ಯಕ್ಷ ತುಳಸೀದಾಸ ಮೊಗೇರ ಮಾತನಾಡಿ, ಸುಮಾರು ೨೩ ವರ್ಷಗಳ ಕಾಲ ನಮ್ಮ ಬ್ಯಾಂಕಿಗೆ ರಕ್ಷಣೆಯನ್ನು ಕೊಟ್ಟ ರಾಮಚಂದ್ರ ನಾವಡ ಅವರ ನಿವೃತ್ತಿ ಬೇಸರ ತರಿಸಿದೆ. ಸೈನಿಕರಾದವರು ತಮ್ಮ ಸ್ವಂತ ಊರನ್ನು, ತಮ್ಮ ಕುಟುಂಬವನ್ನು ಬಿಟ್ಟು ದೇಶ ಕಾಯುವ ಕಾರ್ಯ ಮಾಡುತ್ತಾರೆ. ಅವರಿಂದ ನಾವು ಸುರಕ್ಷಿತ ಭಾವನೆಯಿಂದ ಜೀವನ ನಡೆಸುತ್ತಿದ್ದೇವೆ. ರಾಮಚಂದ್ರ ನಾವಡ ಅವರು ೧೮ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ನಮ್ಮ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿರುವುದು ನಮಗೆ ಹೆಮ್ಮೆಯ ಸಂಗತಿ. ಬ್ಯಾಂಕಿನ ಕುರಿತು ಅವರು ಅಭಿಮಾನ ಪೂರ್ವಕವಾಗಿ ಮಾತನಾಡಿರುವುದು ಅವರು ತಾವು ಸೇವೆ ಸಲ್ಲಿಸಿದ ಬ್ಯಾಂಕಿನಲ್ಲಿ ಇಟ್ಟಿರುವ ವಿಶ್ವಾಸದ ದ್ಯೋತಕ ಎಂದರು.

ಇದನ್ನೂ ಓದಿ : CM Medal/ ಭಟ್ಕಳ ಮೂಲದ ಪಿಎಸೈಗೆ ಸಿಎಂ ಪದಕ

ಬ್ಯಾಂಕಿನ ನಿರ್ದೇಶಕರಾದ ಎಂ.ಎ. ಲೀಮಾ, ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ಶಂಭು ಹೆಗಡೆ, ಪ್ರಧಾನ ವ್ಯವಸ್ಥಾಪಕ ವಸಂತ ಶಾಸ್ತ್ರಿ ಮುಂತಾದವರು ಅವರ ನಿವೃತ್ತಿ ಜೀವನಕ್ಕೆ ಶುಭಕೋರಿ ಮಾತನಾಡಿದರು.  ಬ್ಯಾಂಕಿನ ನಿರ್ದೇಶಕರಾದ ಅಯೂಬ್ ಒಟ್ಟುಪಾರ, ವಸಂತ ದೇವಾಡಿಗ, ಗಣಪತಿ ಮೊಗೇರ, ಸಂತೋಷ ಗೊಂಡ, ರಾಮಾ ನಾಯ್ಕ ಉಪಸ್ಥಿತರಿದ್ದರು.  ಬ್ಯಾಂಕಿನ ಉಪ ಪ್ರಧಾನ ವ್ಯಸ್ಥಾಪಕ ಪ್ರಶಾಂತ ಮುರ್ಡೇಶ್ವರ ಸ್ವಾಗತಿಸಿದರು. ಅಧಿಕಾರಿ ಬಾಲಕೃಷ್ಣ ಕಾಮತ ನಿರೂಪಿಸಿದರು. ಅಧಿಕಾರಿ ಕುಮಾರ ವೈ.ಎಂ. ವಂದಿಸಿದರು.

ಇದನ್ನೂ ಓದಿ : Eid ul Fitr/ ಭಟ್ಕಳದಲ್ಲಿ ಈದ್ ಉಲ್ ಫಿತ್ರ್ ಸಂಭ್ರಮದ ಆಚರಣೆ