ಭಟ್ಕಳ: ಕಳ್ಳರು ಮನೆಯೊಂದರ ಬಾಗಿಲು ಮುರಿದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿರುವ ಘಟನೆ (house theft) ತಲಾಂದ ರಸ್ತೆಯ ಮಣ್ಕುಳಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಗದೀಶ ದೇವಯ್ಯ ನಾಯ್ಕ ಎನ್ನುವವರ ಮನೆ ಕಳ್ಳತನವಾಗಿದೆ. ಇವರು ತಮ್ಮ ಸಂಬಂಧಿಕರ ಮನೆಗೆ ಶನಿವಾರ ಸಂಜೆ ೬ ಗಂಟೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ೮ ಗಂಟೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದು (house theft) ಗೊತ್ತಾಗಿದೆ. ಮನೆಯ ಮುಂದಿನ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು ಮನೆಯ ತುಂಬಾ ಖಾರದ ಪುಡಿ ಹರಡಿ ಬಳಿಕ ಮನೆಯಲ್ಲಿದ್ದ ೫ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ೪ ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: cyber crime/ ಅತಿಯಾಸೆ ಮಾಡಿದವಗೆ ೯.೨೩ ಲಕ್ಷ ರೂ. ಟೋಪಿ

ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಗರ ಠಾಣೆಯ ಸಿ ಪಿ ಐ ದಿವಾಕರ ಮತ್ತು ಸ್ಥಳ ಪರಿಶೀಲನಾಧಿಕಾರಿ ರಮೇಶ ಭೇಟಿ ನೀಡಿದ್ದಾರೆ. ಈ ಬಗ್ಗೆ ಶಹರ ಠಾಣೆಯಲ್ಲಿ ಮನೆ ಮಾಲೀಕ ಜಗದೀಶ ದೇವಯ್ಯ ನಾಯ್ಕ ದೂರು ದಾಖಲಿಸಿದ್ದಾರೆ (complaint filed).

ಇದನ್ನೂ ಓದಿ: no holiday/ ಶಾಲೆಗಳಿಗಿಲ್ಲ ರಜೆ; ಪಾಲಕರ ಆಕ್ರೋಶ