ಭಟ್ಕಳ (Bhatkal) : ಶಾಸಕರ ಅನುದಾನದಿಂದ ಭಟ್ಕಳ ಪೊಲೀಸ ಇಲಾಖೆಗೆ ಖರೀದಿಸಿದ ನೂತನ ಕಾರನ್ನು ಉತ್ತರ ಕನ್ನಡ (Uttara Kannada) ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಭಟ್ಕಳ ಡಿ.ವೈ.ಎಸ್ಪಿ. ಮಹೇಶ ಕೆ. ಅವರಿಗೆ ಹಸ್ತಾಂತರ ಮಾಡಿದ್ದಾರೆ. ಭಟ್ಕಳ-ಹೊನ್ನಾವರ (Honnavar) ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅನುದಾನದದಿಂದ ಒಟ್ಟು ೩೫ ಲಕ್ಷ ಮೌಲ್ಯದ ೨ ವಾಹನವನ್ನು ಖರೀದಿಸಲಾಗಿದ್ದು, ಅದರಲ್ಲಿ ಒಂದು ವಾಹನವನ್ನು ಭಟ್ಕಳ ಡಿ.ವೈ.ಎಸ್ಪಿಗೆ ನೀಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಕೇಂದ್ರ ಸರ್ಕಾರ ೧೫ ವರ್ಷದ ಹಳೆಯ ವಾಹನವನ್ನು ತೆಗೆಯುವಂತೆ ಹೇಳಿದ್ದನ್ನು ಬಿಟ್ಟರೆ ಯಾರಿಗೂ ವಾಹನವನ್ನು ನೀಡಿಲ್ಲ. ಆದರೆ ನಮ್ಮ ಸರ್ಕಾರ ಓರ್ವ ಶಾಸಕನಿಗೆ ಶಾಸಕ ನಿಧಿಯಿಂದ ೨ ವಾಹನವನ್ನು ಪೊಲೀಸ್ ಇಲಾಖೆಗೆ ನೀಡಿದೆ. ಅದರಲ್ಲಿ ಒಂದನ್ನು ಇಂದು ಭಟ್ಕಳ ಡಿ.ವೈಎಸ್ಪಿ ಗೆ ಹಸ್ತಾಂತರ ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಮುರುಡೇಶ್ವರ (Murdeshwar) ಠಾಣೆಯ ಪಿ.ಎಸ್.ಐ. ಹನುಮಂತಪ್ಪ ಬಿರಾದಾರ ಉಪಸ್ಥಿತರಿದ್ದರು.
ಇದನ್ನೂ ಓದಿ : Mankal Vaidya/ ಭಟ್ಕಳದಲ್ಲಿ “ಭೂ ಸುರಕ್ಷಾ” ಯೋಜನೆಗೆ ಚಾಲನೆ