ಭಟ್ಕಳ (Bhatkal): ತಾಲೂಕಿನಲ್ಲಿ ರವಿವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧೆಡೆ ಮನೆಗಳ ಮೇಲೆ ಮರ ಬಿದ್ದ ಪರಿಣಾಮ ಅಪಾರ ಹಾನಿ (rain damage) ಉಂಟಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸೋನಾರಕೇರಿಯಲ್ಲಿನ ರಾಮ ಈರಪ್ಪ ನಾಯ್ಕರವರ ಮನೆಯ ಮೇಲೆ ತೆಂಗಿನ ಮರ ಬಿದ್ದು, ಮೇಲ್ಛಾವಣಿ ಮತ್ತು ಗೋಡೆ ಹಾನಿಗೊಂಡಿದೆ. ದನಗಳ ಕೊಟ್ಟಿಗೆಯ ಮೇಲ್ಛಾವಣಿ ಕೂಡ ಹಾರಿ ಹೋಗಿದೆ. ಪಡುಶಿರಾಲಿ ಬೇಂಗ್ರೆ ೨ರ ನಾರಾಯಣಿ ದುರ್ಗಪ್ಪ ನಾಯ್ಕರ ವಾಸ್ತವ್ಯದ ಮನೆ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೊಪ್ಪಕೊಳ್ಕಿಯಲ್ಲಿನ ಶಾಂತಿ ಈಶ್ವರ ಮರಾಠಿರವರ ಮಣ್ಣಿನ ಮನೆಯ ಗೋಡೆ ಕುಸಿದು ಬಿದ್ದು ತೀವ್ರ ಹಾನಿಯಾಗಿದೆ.

ಇದನ್ನೂ ಓದಿ : tragic incident/ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ

ಬೇಂಗ್ರೆ ೨ರ ಹೆದ್ದಾರಿಮನೆಯ ಮಂಜಮ್ಮ ಸುಬ್ರಾಯ ದೇವಾಡಿಗರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮೂಡಭಟ್ಕಳದ ರಘುರಾಮ ಪಾಂಡುರಂಗ ಭಟ್ಟರ ವಾಸ್ತವ್ಯದ ಮನೆ ಮೇಲೆ ಅಶ್ವಥ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುರವರ್ಗ ಗ್ರಾಮದ ಕೀರ್ತಿನಗರ ಮಜಿರೆಯ ವೀರ ಜಟಗೇಶ್ವರ ದೇವಸ್ತಾನದ ಮೇಲೆ ದೊಡ್ಡ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.

ಇದನ್ನೂ ಓದಿ : landslide/ ಮೂರನೇ ಬಾರಿ ಗುಡ್ಡ ಕುಸಿತ; ಲಘು ವಾಹನ ಸಂಚಾರಕ್ಕೂ ಸಂಚಕಾರ

ಭಟ್ಕಳದ ವಿ ವಿ ರಸ್ತೆಯ ಸತೀಶ ಕಾಮತ ಹಾಗೂ ಲತಾ ಕಾಮತ ಭಟ್‌ರ ಮನೆಯ ಮೇಲೆ ಕಾಡು ಜಾತಿಯ ಮರ ಬಿದ್ದು ಮನೆಯ ಮೇಲ್ಛಾವಣಿ ಹಾನಿಯಾಗಿದೆ. ಸಮೀಪದ ಗೋವಿಂದ ಹೊನ್ನಯ್ಯ ದೇವಡಿಗರ ಮನೆ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು, ಮನೆಯ ಅಕ್ಕ-ಪಕ್ಕದ ಒಟ್ಟು ನಾಲ್ಕು ಮನೆಗಳಿಗೆ ಹಾನಿ ಆಗಿದೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿ ಜಂಟಿಯಾಗಿ ಪರಿಶೀಲನೆ ಮಾಡಿದ್ದಾರೆ. ವಿ ವಿ ರಸ್ತೆಯ ಮಾರುತಿ ನಗರದ ವಿನೋದ ಪ್ರಭುರವರ ಮನೆಯ ಮೇಲೆ ಹಲಸಿನ ಮರ ಬಿದ್ದು, ಮನೆಯ ಮೇಲಿನ ನೀರಿನ ಟ್ಯಾಂಕ್ ಹಾಗೂ ಮನೆಯ ಮೇಲಿನ ಶೀಟ್ ಹಾನಿಯಾಗಿದೆ.

ಇದನ್ನೂ ಓದಿ : fake call/ ಹುಸಿ ಕರೆಗೆ ಬೆಸ್ತು ಬಿದ್ದ ತಹಸೀಲ್ದಾರ

ಮುಂಡಳ್ಳಿ ಗ್ರಾಮದ ಪಾವನಾಹಿತ್ಲುವಿನ ಲಕ್ಷ್ಮೀ ಮಂಜಪ್ಪ ಕಾಳುಮನೆಯವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರ ಬಿದ್ದು, ಮನೆಯ ಮೇಲ್ಛಾವಣಿಯ ಹಂಚು ಮತ್ತು ಶೀಟಗೆ ಭಾಗಶಃ ಹಾನಿಯಾಗಿದೆ. ಬೆಳ್ನಿ ಗ್ರಾಮದ ಹೆಬಲೆಮನೆ ಮಜಿರೆಯ ಮಂಜನಾಥ ಸುಕ್ರಯ ನಾಯ್ಕರವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಅದೃಷ್ಟವಶಾತ್‌, ವಾಸ್ತವ್ಯದ ಮನೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಮುಟ್ಟಳ್ಳಿಯ ಲಕ್ಷ್ಮಿ ಮಂಜಯ್ಯ ನಾಯ್ಕರ ಮನೆಯ ಮೇಲ್ಛಾವಣಿಯ ಹಂಚು ಹಾಗೂ ಸಿಮೆಂಟ್ ಸೀಟ್‌ಗಳು ಹಾರಿ ಹೋಗಿ ಹಾನಿಯಾಗಿವೆ.

ವಿಡಿಯೋ ಸಹಿತ ಇದನ್ನೂ ಓದಿ : tragic/ ಕಾಲುವೆಗೆ ಬಿದ್ದು ೨ ವರ್ಷದ ಬಾಲಕಿ ದುರ್ಮರಣ

ಹದ್ಲೂರ ಗ್ರಾಮದ ನಾಗಯ್ಯ ಗೊಯ್ದ ಗೊಂಡ, ಮಂಜುನಾಥ ಸಣ್ಣು ಗೊಂಡ, ಸುಕ್ರ ಮಂಗಳ ಗೊಂಡರವರ ಮನೆಗಳ ಮೇಲ್ಚಾವಣಿ ಭಾಗಶಃ ಹಾನಿಯಾಗಿದೆ. ಮಗ್ದುಂ ಕಾಲೊನಿಯ ಮುಮ್ತಾಜ್ ಬೇಗಂ ಇಬ್ರಾಹಿಂ ಸೈಯದ್ ಅವರ ಮನೆ ಮೇಲ್ಛಾವಣಿ ಹಾರಿ ಹೋಗಿದೆ. ಹಡೀಲ ಗ್ರಾಮದ ದುರ್ಗಯ್ಯ ನಾಗಪ್ಪ ಶೇರುಗಾರ ಹಾಗೂ ಶಶಿಕಲಾ ಕೃಷ್ಣ ಶೇರುಗಾರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ರವಿವಾರ ಸುರಿದ ಭಾರಿ ಗಾಳಿ ಮಳೆಗೆ ಇಷ್ಟು ಮನೆಗಳಿಗೆ ಹಾನಿಯಾಗಿದ್ದು, ಇನ್ನಷ್ಟು ಹಾನಿಯ ವಿವರಗಳು (rain damage) ತಿಳಿದು ಬರಬೇಕಿದೆ.

ಇದನ್ನೂ ಓದಿ : Elderly woman dies/ ಕಣ್ಣು ಕಾಣದೆ ನದಿಯಲ್ಲಿ ಬಿದ್ದು ವೃದ್ಧೆ ದುರ್ಮರಣ