ಭಟ್ಕಳ (Bhatkal): ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ (cricket tournament) ಭಟ್ಕಳ ಪತ್ರಕರ್ತರ ತಂಡವು ಅಂಕೋಲಾ ಪತ್ರಕರ್ತರ ತಂಡವನ್ನು ೨೮ ರನ್ ಗಳಿಂದ ಸೋಲಿಸಿ ಮೀಡಿಯಾ ಕಪ್ (Media cup) ೨೦೨೫ಯನ್ನು ತನ್ನದಾಗಿಸಿಕೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂತಿಮ ಪಂದ್ಯದಲ್ಲಿ ಅಂಕೋಲಾ (Ankola) ಕಿಂಗ್ಸ್ ತಂಡವು ಟಾಸ್ ಗೆದ್ದು ಬಾಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಟ್ಕಳ ಪ್ಯಾಂಥರ್ಸ್ ತಂಡ ೬ ಓವರ್ ಮುಕ್ತಾಯಕ್ಕೆ ೮೦ ರನ್ ಕಲೆಹಾಕಿತು. ಇದನ್ನು ಬೆನ್ನಟ್ಟಿದ ಅಂಕೋಲಾ ತಂಡವು ೬ ಓವರುಗಳಲ್ಲಿ ಕೇವಲ ೫೨ ರನ್‌ ಗಳಿಸುವುದರ ಮೂಲಕ ೨೮ ರನ್ ಗಳಿಂದ ಸೋತು  ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಭಟ್ಕಳ ತಂಡದಲ್ಲಿ ರಾಘು ನಾಯ್ಕ ೩೭ ರನ್ ಹಾಗೂ ಇಲಿಯಾಸ್‌ ಮೊಟಿಯಾ ೧೮ ರನ್ ಗಳಿಸಿದರು. ಅಂಕೋಲಾ ತಂಡದಲ್ಲಿದ್ದ ರಾಜು ಗೌಡ ೧೩ ರನ್ನು ಗಳಿಸಿದರು.

ಇದನ್ನೂ ಓದಿ : media cup/ ಭಟ್ಕಳ ಮೀಡಿಯಾ ಕಪ್‌ಗೆ ಚಾಲನೆ

ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಳ ತಂಡ ಶಿರಸಿ (Sirsi) ತಂಡವನ್ನು, ಅಂಕೋಲಾ ತಂಡ ಕಾರವಾರ (Karwar) ತಂಡವನ್ನು ಸೋಲಿಸಿ ಪೈನಲ್ ಗೆ ಪ್ರವೇಶಿಸಿದ್ದವು. ಪ್ರಥಮ ಬಹುಮಾನದ ಮೊತ್ತ ೩೩೩೩೩ ರೂ ನಗದು ಬಹುಮಾನ ಮತ್ತು ಟ್ರೋಫಿ ಭಟ್ಕಳ ತಂಡ ಪಡೆದುಕೊಂಡಿತು. ಅಂಕೋಲಾ ತಂಡ ೨೨೨೨೨ ರೂ ನಗದು ಬಹುಮಾನ ಮತ್ತುಟ್ರೋಫಿ ಪಡೆಯಿತು. ಪೈನಲ್ ಪಂದ್ಯದಲ್ಲಿ ಮ್ಯಾನ್ ಅಪ್ ದಿ ಮ್ಯಾಚ್ ಪ್ರಶಸ್ತಿಯನ್ನು ಭಟ್ಕಳದ ರಾಘು ನಾಯ್ಕ ಪಡೆದರು. ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದ ಸಿರೀಸ್‌ ಪ್ರಶಸ್ತಿಯನ್ನು ಅಂಕೋಲಾದ ಕಾರ್ತಿಕ ಗೌಡ ಪಡೆದರು. ಬೆಸ್ಟ್‌ ಬ್ಯಾಟ್ಸಮನ್ ಪ್ರಶಸ್ತಿಯನ್ನು ಕಾರವಾರ ತಂಡದ ಸಂಕೇತ ಪಡೆದರು. ಪಂದ್ಯಾವಳಿಯ ಬೆಸ್ಟ ಬೌಲರ್ ಪ್ರಶಸ್ತಿಯನ್ನು ಭಟ್ಕಳದ ಸುಹೇಲ್ ಇಸ್ಬು, ಬೆಸ್ಟ್‌ ಫೀಲ್ಡರ್ ಪ್ರಶಸ್ತಿಯನ್ನು ಅಂಕೋಲಾದ ರಾಜು ಗೌಡ ಪಡೆದರು.

ಇದನ್ನೂ ಓದಿ : assaulted/ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಹಲ್ಲೆ

೨ ದಿನಗಳ ಕಾಲ ನಡೆದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡಿದ ಇರ್ಫಾನ್ ಸರ್ಪನಕಟ್ಟೆ ಗಮನ ಸೆಳೆದರು.  ಪಂದ್ಯಾವಳಿಯ ತೀರ್ಪುಗಾರರಾಗಿ ಅನುಭವಿ ತಿರುಮಲ ನಾಯ್ಕ, ನಾಗರಾಜ ಹಾಗೂ ಭುವಿ ಮೊಗೇರ ಇದ್ದರು. ವಿಶೇಷವಾಗಿ ಅಂಕೋಲಾ ತಂಡದ ಪತ್ರಕರ್ತರು ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ೨ ದಿನಗಳ ಕಾಲ ನೀಡಿದ ಆತಿಥ್ಯಕ್ಕೆ ಸಂಘದ ಅಧ್ಯಕ್ಷರಿಗೆ ಸನ್ಮಾನಿಸಿ, ಎಲ್ಲಾ ಸದಸ್ಯರಿಗೆ ಗುಲಾಗಿ ಹೂವು ನೀಡಿ ಗೌರವಿಸಿದರು.

ಇದನ್ನೂ ಓದಿ : cricket tournament/ ಮೀಡಿಯಾ ಕಪ್‌ ಆಮಂತ್ರಣ ಪತ್ರಿಕೆ ಬಿಡುಗಡೆ

ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಟ್ಕಳ ನಗರ ಠಾಣೆಯ ಪಿ.ಎಸ್.ಐ. ನವೀನ ನಾಯ್ಕ ಆಗಮಿಸಿದ್ದರು. ಬಹುಮಾನ ವಿತರಿಸಿ ಮಾತನಾಡಿದ ಅವರು, ಸದಾ ಒತ್ತಡದ ಬದುಕಿನಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಭಟ್ಕಳದಲ್ಲಿ ಅಂತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ಎಲ್ಲರ ಮನ ಗೆದ್ದು ಭಟ್ಕಳದಲ್ಲಿ ಕ್ರಿಕೆಟ್ ಕ್ರೀಡೆಗೆ ವಿಶೇಷ ಮಹತ್ವ ನೀಡಿದ್ದಾರೆ ಎಂದರು.

ಇದನ್ನೂ ಓದಿ : Honesty/ ರಸ್ತೆಯಲ್ಲಿ ಸಿಕ್ಕ ೨೦ ಲಕ್ಷ ರೂ. ಚಿನ್ನಾಭರಣ ಮರಳಿಸಿದ ಭಟ್ಕಳಿಗ

ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ, ಭಟ್ಕಳ ಪತ್ರಕರ್ತ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷ ವಿಷ್ಣು ದೇವಾಡಿಗ, ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಪತ್ರಕರ್ತರಾದ ಸತೀಶ ನಾಯ್ಕ, ಮನಮೋಹನ ನಾಯ್ಕ, ಮೋಹನ ನಾಯ್ಕ, ಭಾಸ್ಕರ ನಾಯ್ಕ, ನಸೀಮುಲ್ಲಾ ಘನಿ, ಫಯಾಜ್ ಮುಲ್ಲಾ, ರಿಝ್ವಾನ್ ಗಂಗಾವಳಿ, ಶೈಲೇಶ ವೈದ್ಯ, ಉದಯ ನಾಯ್ಕ, ಪ್ರಸನ್ನ ಭಟ್, ಮಂಜು ನಾಯ್ಕ, ರಾಘವೇಂದ್ರ ಮಲ್ಯ, ಈಶ್ವರ ನಾಯ್ಕ, ಮಾರುತಿ ನಾಯ್ಕ, ಮುಬಾಷಿರ್ ಹಲ್ಲಾರೆ, ದತ್ತ ಮೊಗೇರ ಮತ್ತಿತರರು ಇದ್ದರು.

ಇದನ್ನೂ ಓದಿ : car collision/ ಕಾರು ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರಿಗೆ ಗಾಯ