ಬೆಂಗಳೂರು (Bengaluru) : “ಚಿತ್ರಸಂತೆ” (Chitrasanthe) ಸಿನಿಮಾ ಪತ್ರಿಕೆ ೨೦೨೫ ರ “ವರ್ಷದ ಕನ್ನಡಿಗ” ಪ್ರಶಸ್ತಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಪ್ರತಿಭಾನ್ವಿತ ಬರಹಗಾರ, ಲೇಖಕ, ಸ್ವರ ಸಂಯೋಜಕ, ಗಾಯಕ ಉಮೇಶ ಮುಂಡಳ್ಳಿ ಅವರನ್ನು ಆಯ್ಕೆ ಮಾಡಿದೆ. ಕನ್ನಡ ಚಿತ್ರರಂಗದ ಅನೇಕ ಗಣ್ಯರ ಉಪಸ್ಥಿತಿ ಯಲ್ಲಿ ಮೇ ೩೧ರಂದು ಬೆಂಗಳೂರು ಅರಮನೆ ನಗರದಲ್ಲಿರುವ ಹೈಡ್ ಪಾರ್ಕ್ ಹೋಟೆಲಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
“ಚಿತ್ರಸಂತೆ” (Chitrasanthe) ಕಳೆದ ಹದಿಮೂರು ವರ್ಷಗಳಿಂದ ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಸ್ಟಾರ್ ಗಳು ಚಿತ್ರರಂಗದ ಅನೇಕ ಗಣ್ಯರು ನಟ ನಟಿ ಸಂಗೀತ ರಂಗದ ಪ್ರತಿಭಾನ್ವಿತರನ್ನು ಗುರುತಿಸಿ ಉತ್ತಮ ನಟ-ನಟಿ, ಪೋಷಕ ನಟ ಹೀಗೆ ಅನೇಕ ವಿಧಗಳಲ್ಲಿ ಅವರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿಕೊಂಡು ಬರುತ್ತಿದ್ದು, ಜೊತೆಗೆ ರಾಜ್ಯದಲ್ಲಿ ಬೇರೆ ಬೇರೆ ರಂಗಗಳಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತರನ್ನು ಗುರುತಿಸಿ ಇದೇ ವೇದಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡುತ್ತಾ ಬರುತ್ತಿದೆ.
ಇದನ್ನೂ ಓದಿ : Murdeshwar/ ಸಮುದ್ರ ತೀರದಲ್ಲಿ ಪ್ರವಾಸಿಗರ ಹುಚ್ಚಾಟ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನವರಾದ ಉಮೇಶ ಮುಂಡಳ್ಳಿ ಅವರು ಕಳೆದ ಇಪ್ಪತೈದು ವರ್ಷಗಳಿಂದ ಸಾಹಿತ್ಯ ಸಂಗೀತ ಸೇವೆಯನ್ನು ಜೊತೆಜೊತೆ ನಡೆಸಿಕೊಂಡು ಬರುತ್ತಿದ್ದಾರೆ. ಮೌನಗೀತೆ, ಭಾವಸುಮ, ಕರುನಾಡ ಕುಡಿಗಳು, ನಾನೂ ಶಿಲ್ಪವಾಗಬೇಕು ಹಾಗೂ ತಿಂಗಳ ಬೆಳಕು ( ಹನಿಕವನ) ಎನ್ನುವ ಕವನ ಸಂಕಲನಗಳನ್ನು ರಚಿಸಿದ್ದಾರೆ. ಬೆಂಕಿ ಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, ಉತ್ತರ ಕನ್ನಡಕ್ಕೆ ಒಂದು ಸುತ್ತು ಪ್ರವಾಸಿ ಲೇಖನ, ಮಾತಾ ಮಹಿಮಾ ಹಾಗೂ ಹನುಮಾಮೃತ ಎನ್ನುವ ಭಕ್ತಿ ಪ್ರಧಾನ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅನೇಕ ಮೌಲ್ಯಭರಿತ ಲೇಖನಗಳನ್ನು ಬರೆಯುತ್ತಾ ಬರುತ್ತಿದ್ಸಾರೆ.
ಇದನ್ನೂ ಓದಿ : Three Arrest/ ಭಟ್ಕಳದಲ್ಲಿ ಜಾನುವಾರು ಸಾಗಾಟ; ಮೂವರ ಬಂಧನ
ಸಂಗೀತ ಕ್ಷೇತ್ರದಲ್ಲಿಯೂ ಇವರ ಸಾಧನೆ ವಿಶಿಷ್ಟವಾದದ್ದು. ತಮ್ಮದೇ ಸ್ವರಚಿತ ಭಾವಗೀತೆ, ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಗಳ ಜೊತೆ ರಾಜ್ಯದ ಅನೇಕ ಹಿರಿ ಹಿರಿಯರ ಕವಿತೆಗಳನ್ನು ಇವರು ಸ್ವತಃ ಸ್ವರ ಸಂಯೋಜನೆ ಮಾಡಿ ಹಾಡಿದ್ದಾರೆ. ಇವರ ಮೊದಲ ಧ್ವನಿಸುರುಳಿ “ಭರವಸೆಯ ಛಾಯೆ” ೨೦೧೧ ರಲ್ಲಿ ಹಿರಿಯ ಸಾಹಿತಿ ಪಾಟಿಲ ಪುಟ್ಟಪ್ಪನರು ಲೋಕಾರ್ಪಣೆ ಮಾಡಿದ್ದರು.
ಇದನ್ನೂ ಓದಿ : Red Alert/ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ ೨೭ರವರೆಗೆ ರೆಡ್ ಅಲರ್ಟ್ !
ಇದುವರೆಗೆ ಉಮೇಶ ಮುಂಡಳ್ಳಿ ಅವರು ಸುಮಾರು ಮೂವತ್ತೈದಕ್ಕೂ ಹೆಚ್ಚಿನ ಗೀತೆಗಳಿಗೆ ಸ್ವರ ಸಙಯೋಜನೆ ಮಾಡಿ ತಾವು ಮತ್ತು ಇತರೆ ಗಾಯಕರಿಂದ ಹಾಡಿಸಿದ್ದಾರೆ. ನಿನಾದ ಯೂಟ್ಯೂಬ್ ಚಾನೆಲ್ ನಲ್ಲಿ ಅವುಗಳನ್ನು ನೋಡಬಹುದಾಗಿದೆ. ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಸಂಗೀತ ಸಾಹಿತ್ಯ ಒಟ್ಟಿಗೆ ಮೇಳೈಸಿರುವ ಜಿಲ್ಲೆಯ ಅಪ್ಪಟ ಗ್ರಾಮೀಣ ಪ್ರತಿಭೆ ಉಮೇಶ ಮುಂಡಳ್ಳಿಯವರನ್ನು ಬೆಂಗಳೂರಿನ ಸ್ಯಾಂಡಲ್ ವುಡ್ ಪತ್ರಿಕೆ ಚಿತ್ರಸಂತೆ ಗುರುತಿಸಿ ವರ್ಷದ ಕನ್ನಡಿಗ ಪ್ರಶಸ್ತಿ ನೀಡುತ್ತಿದೆ.
ಇದನ್ನೂ ಓದಿ : Kattalan/ ಪ್ಯಾನ್ ಇಂಡಿಯಾ ಮಟ್ಟದಲ್ಲಿ “ಕಾಟ್ಟಾಲನ್” ಸಿದ್ಧತೆ