ಭಟ್ಕಳ : ತಾಲೂಕಿನ ಮಾವಿನಕುರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಗೋಡಿನ ಗೊಂಡರ ಕೇರಿಯಲ್ಲಿ ಭೂಕುಸಿತದಿಂದಾಗಿ (landslide) ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ಗೋಡೆ ಕುಸಿದಿದೆ. ಇದರಿಂದಾಗಿ ಬೆಟ್ಟದ ಇನ್ನಷ್ಟು ಭಾಗ ಕುಸಿಯುವ ಸಂಭವವಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಟ್ಟದ ಅರ್ಧ ಭಾಗವು ಈಗಾಗಲೇ ಕುಸಿದಿದ್ದು, ಭಾರೀ ಮಳೆಯಾದರೆ ಬೆಟ್ಟದ ಮೇಲ್ಭಾಗದಲ್ಲಿರುವ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಕೆಳಗೆ ಜಾರಿ ಬೀಳುವ ಸಾಧ್ಯತೆ ಇದೆ (landslide). ಇದು ಸಂಭವಿಸಿದರೆ, ಈ ರಸ್ತೆಯಲ್ಲಿ ಸಂಚರಿಸುವ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಇದು ದೊಡ್ಡ ಅಪಾಯವನ್ನುಂಟು ಮಾಡಬಹುದು. ಜೊತೆಗೆ, ರಸ್ತೆಯ ಕೆಳಭಾಗದಲ್ಲಿ ಇರುವ ಮನೆಗಳಿಗೆ ಭಾರೀ ಹಾನಿಯಾಗುವ ಸಂಭವವಿದೆ.

ಇದನ್ನೂ ಓದಿ : planting/ ನಾಟಿ ಕಾರ್ಯಕ್ಕೆ ಚಾಲನೆ

ಈ ಹಿನ್ನೆಲೆಯಲ್ಲಿ ತಹಸೀಲ್ದಾರ ನಾಗೇಂದ್ರ ಕೊಲಶೆಟ್ಟಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ರಕ್ಷಣಾ ಗೋಡೆ ನಿರ್ಮಾಣಕ್ಕಾಗಿ ೨೫ ಲಕ್ಷ ರೂಪಾಯಿಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಧನಸಹಾಯ ಬಿಡುಗಡೆಯಾದ ತಕ್ಷಣ ಗೋಡೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಹಸೀಲ್ದಾರ ತಿಳಿಸಿದ್ದಾರೆ.

ಇದನ್ನೂ ಓದಿ : Duplicate Notes/ ಮುರ್ಡೇಶ್ವರದಲ್ಲಿ ಹುಬ್ಬಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ !

ಆದರೆ, ಆವರೆಗೆ ಈ ರಸ್ತೆಯಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕು. ಜೊತೆಗೆ, ರಸ್ತೆಯ ಕೆಳಭಾಗದಲ್ಲಿ ಮನೆಗಳಿರುವವರು ಭಾರೀ ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಪರಿಹಾರ ಕೇಂದ್ರಕ್ಕೆ ಅಥವಾ ಸಂಬಂಧಿಕರ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ ಎಂದು‌ ಅವರು ಸೂಚಿಸಿದ್ದಾರೆ.

ಇದನ್ನೂ ಓದಿ : School holiday/ ಕರಾವಳಿಯಲ್ಲಿ ಶಾಲೆಗಳಿಗೆ ರಜೆ

ಶಾಲೆಗೂ ಅಪಾಯದ ಛಾಯೆ: ಈ ಸ್ಥಳದಲ್ಲಿ ಬೆಟ್ಟವನ್ನು ಕಡಿದು ನಿರ್ಮಿಸಲಾಗಿರುವ ಶಾಲೆಯೂ ಸಹ ಅಪಾಯದಲ್ಲಿದೆ. ಭಾರೀ ಮಳೆಯಾದರೆ, ಕಡಿದ ಬೆಟ್ಟದ ಉಳಿದ ಭಾಗದಿಂದ ದೊಡ್ಡ ಕಲ್ಲುಗಳು ಶಾಲೆಯ ಕಡೆಗೆ ಜಾರಿಬೀಳುವ ಸಂಭವವಿದೆ. ಸ್ಥಳೀಯರು ಈ ಅಪಾಯದ ಬಗ್ಗೆ ತಹಸೀಲ್ದಾರ ಗಮನಕ್ಕೆ ತಂದಿದ್ದು, ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಅನಾಹುತ ಸಂಭವಿಸುವ ಮೊದಲೇ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾವಿನಕುರ್ವ ಗ್ರಾಮ ಪಂಚಾಯತ ಪಿಡಿಒ ಚಂದ್ರಶೇಖರ ಇಟಗಿ, ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ದೇವಿದಾಸ ನಾಯ್ಕ, ರಾಮ ಗೊಂಡ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : note book distribution / ಹಳೇ ವಿದ್ಯಾರ್ಥಿಯ ಮಾದರಿ ಕಾರ್ಯ !