ಭಟ್ಕಳ (Bhatkal) : ಇಲ್ಲೋರ್ವ ಹಳೆಯ ವಿದ್ಯಾರ್ಥಿ ತಾನು ಕಲಿತ ಶಾಲೆಯನ್ನು ಮರೆಯದೆ ಪ್ರತಿವರ್ಷ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸುವ (note book distribution ) ಮೂಲಕ ಇನ್ನುಳಿದ ಹಳೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಮಣ್ಕುಳಿ ನಿವಾಸಿಯಾಗಿರುವ ಶ್ರೀಧರ ಆಚಾರ್ಯ ಪ್ರಸ್ತುತ ಮುಂಬೈನಲ್ಲಿ (Mumbai) ಚಾರ್ಟರ್ಡ್ ಅಕೌಂಟೆಂಟ್ (Chartered accountant) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಒಂದರಿಂದ ಏಳನೇ ತರಗತಿಯನ್ನು ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಇವರು ವ್ಯಾಸಂಗ ಮಾಡಿದ್ದರು. ತಾವು ಕಲಿತ ಶಾಲೆಯನ್ನು ಮರೆಯದೆ ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ (note book distribution) ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷ ಕೂಡ ಒಟ್ಟು ೭೭ ವಿದ್ಯಾರ್ಥಿಗಳಿಗೆ ೫೮೩ ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಈ ಹಿಂದೆ ಶಾಲೆಯ ಒಂದು ಕೊಠಡಿಯ ನೆಲಕ್ಕೆ ಟೈಲ್ಸ್ ಅಳವಡಿಸಲು ದೇಣಿಗೆ (donation) ನೀಡಿದ್ದರು.

ಇದನ್ನೂ ಓದಿ : Red Alert / ಮೂರು ದಿನ ರೆಡ್‌ ಅಲರ್ಟ್‌ !

ಪ್ರತಿ ವರ್ಷ ಇವರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ವರ್ಷ ಖುದ್ದು ಶ್ರೀಧರ ಆರ್ಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮಗೆ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿಕೊಟ್ಟ ಶಾಲೆಯನ್ನು ಎಂದಿಗೂ ಮರೆಯಬಾರದು. ಸರ್ಕಾರಿ ಶಾಲೆಯ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು. ಮುಂದೆ ಈ ಶಾಲೆಗೆ ಯಾವುದೇ ಕಟ್ಟಡ ಕಟ್ಟುವಲ್ಲಿ ಹಣದ ಅವಶ್ಯಕತೆ ಬಿದ್ದರೆ ನೀಡಲು ಸಿದ್ದ. ೧೬೦ ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಗೆ ಅಸಂಖ್ಯಾತ ಹಳೆಯ ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರೂ ಶಾಲೆಗಾಗಿ ಶಾಲೆಯ ಅಭಿವೃದ್ಧಿಗಾಗಿ ಕೈಜೋಡಿಸಬೇಕು ಎಂದರು.

ಇದನ್ನೂ ಓದಿ : Two arrested/ ಫೇಸ್‌ ಬುಕ್‌ನಲ್ಲಿ ಸಚಿವರ ಅವಹೇಳನ; ಇಬ್ಬರು ಪೊಲೀಸ್‌ ವಶಕ್ಕೆ

ಶಾಲೆಯ ಮುದ್ದು ವಿದ್ಯಾರ್ಥಿಗಳು ಸ್ವಾಗತ ನೃತ್ಯದ ಮೂಲಕ ಗಣ್ಯರನ್ನು ಸ್ವಾಗತಿಸಿದರು. ಮುಖ್ಯಾಧ್ಯಾಪಕ  ಜನಾರ್ಧನ ಮೊಗೇರ ನಿರೂಪಿಸಿದರು. ದಾನಿ ಶ್ರೀಧರ ಆಚಾರ್ಯ ಅವರನ್ನು ಎಸ್ ಡಿ.ಎಂ.ಸಿ. ಮತ್ತು ಮುಖ್ಯೋಪಾಧ್ಯಾಯರು ಗೌರವಪೂರ್ವಕವಾಗಿ ಸನ್ಮಾನಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ದೇವಾಡಿಗ, ಉಪಾಧ್ಯಕ್ಷ ಸುಶೀಲಾ ಮೊಗೇರ, ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಶಾಲೆಗೆ ಸ್ಮಾರ್ಟ್ ಕ್ಲಾಸ್ ದೇಣಿಗೆ ನೀಡಿದ ಕಿರಣ ಚಂದಾವರ, ಪಾಲಕ ಪೋಷಕ ಪ್ರತಿನಿಧಿಯಾಗಿ ದೇವೇಂದ್ರ ನಾಯ್ಕ, ಶಾಲೆಯ ಹಳೆ ವಿದ್ಯಾರ್ಥಿ ಪದ್ಮಾ ಭಟ್ಟ ಉಪಸ್ಥಿತರಿದ್ದರು.

ಇದನ್ನೂ ಓದಿ : birth anniversary celebration/ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ