ಭಟ್ಕಳ ಡೈರಿ ವರದಿ
ಭಟ್ಕಳ: ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM) ನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH)–೨೦೨೬ರ ಆಂತರಿಕ ಸುತ್ತಿನ ಮೌಲ್ಯಮಾಪನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿ ನಾವೀನ್ಯಕಾರರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ತಾಂತ್ರಿಕ ಆಲೋಚನೆ ಹಾಗೂ ಯೋಜನೆಗಳನ್ನು ಪ್ರದರ್ಶಿಸಿದರು.
award/ ಜಿಲ್ಲಾ ಮಟ್ಟದ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿಗೆ ನಿನಾದ ಕಲ್ಚರಲ್ ಅಕಾಡೆಮಿ ಆಯ್ಕೆ
ಕಾರ್ಯಕ್ರಮದಲ್ಲಿ ಮಾತನಾಡಿದ AITM ಪ್ರಾಂಶುಪಾಲ ಡಾ ಕೆ ಫಜ್ಲೂರ್ ರೆಹಮಾನ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಾಂತ್ರಿಕ ನಾವೀನ್ಯತೆ ಹಾಗೂ ನೈಜ-ಜಗತ್ತಿನ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ರೂಪಿಸುವ ಕೌಶಲ ಬೆಳೆಸುವಲ್ಲಿ ಹ್ಯಾಕಥಾನ್ಗಳು (Hackathon) ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
felicitation/ ಕೆಡಿಸಿಸಿ ಬ್ಯಾಂಕ್ ನೌಕರರಿಂದ ಮಂಕಾಳ ವೈದ್ಯಗೆ ಸನ್ಮಾನ
ಆಂತರಿಕ ಸುತ್ತಿನಲ್ಲಿ ಶಾರ್ಟ್ಲಿಸ್ಟ್ಗೊಂಡ ೪೧ ತಂಡಗಳು ತೀವ್ರ ಸ್ಪರ್ಧಾತ್ಮಕ ವಾತಾವರಣದಲ್ಲಿ ತಮ್ಮ ಯೋಜನೆಗಳನ್ನು ಮಂಡಿಸಿದವು. ತಾಂತ್ರಿಕ ಮೂಲಮಾದರಿಗಳು, ಹಾರ್ಡ್ವೇರ್ ಆಧಾರಿತ ಪರಿಹಾರಗಳು ಹಾಗೂ ಸಾಫ್ಟ್ವೇರ್ ಎಂವಿಪಿಗಳನ್ನು (MVP) ತಜ್ಞರ ಮೌಲ್ಯಮಾಪನ ಸಮಿತಿ ಮತ್ತು ಬಾಹ್ಯ ತೀರ್ಪುಗಾರರ ಮುಂದೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
Power disruption/ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೆ ೨, ೩ರಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಗೊತ್ತಾ?
ಕಾರ್ಯಕ್ರಮದ ಸಂಪೂರ್ಣ ಸಂಯೋಜನೆಯನ್ನು ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ (SPOC) ಪ್ರೊ ರೆನಿಶಾ ಅವರು ಪ್ಲಾಟ್ಫಾರ್ಮ್ ಪಾಲುದಾರ Hack2skill ಸಹಯೋಗದೊಂದಿಗೆ ನಿರ್ವಹಿಸಿದರು. ಡಿಜಿಟಲ್ ನಿರ್ವಹಣೆ, ಮಾರ್ಗದರ್ಶಕರ ಹಂಚಿಕೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಈ ವ್ಯವಸ್ಥೆ ನೆರವಾಯಿತು.
MP Kageri/ ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಕಾಗೇರಿ
ಕಠಿಣ ಮೌಲ್ಯಮಾಪನದ ಬಳಿಕ ೩೬ ಅತ್ಯುತ್ತಮ ತಂಡಗಳನ್ನು ಆಯ್ಕೆ ಮಾಡಲಾಗಿದ್ದು, ಮುಂಬರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–೨೦೨೬ರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ AITM ಅನ್ನು ಪ್ರತಿನಿಧಿಸಲು ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದೆ. ವಿದ್ಯಾರ್ಥಿಗಳ ಸೃಜನಶೀಲತೆ, ತಾಂತ್ರಿಕ ಸಾಮರ್ಥ್ಯ ಹಾಗೂ ನವೀನ ಪರಿಹಾರಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಈ ಆಂತರಿಕ ಸುತ್ತು AITMನ ತಾಂತ್ರಿಕ ಶಿಕ್ಷಣ ಮತ್ತು ನವೋದ್ಯಮದ ಬದ್ಧತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
Aadhaar centre/ ಉತ್ತರ ಕನ್ನಡ ಮಧ್ಯಭಾಗದಲ್ಲಿ ಸುಸಜ್ಜಿತ ಆಧಾರ್ ಕಚೇರಿ ಸ್ಥಾಪನೆಗೆ ಆಗ್ರಹ
