ಭಟ್ಕಳ (Bhatkal): ಹಿಂಸೆಗೆ ಪ್ರಚೋದನೆ ನೀಡಿದ ಮೀನುಗಾರಿಕೆ, ಬಂದರು, ಒಳನಾಡು ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ವಿರುದ್ಧ ಕ್ರಮಕ್ಕೆ ಎಸ್.ಡಿ.ಪಿ.ಐ. (SDPI) ಭಟ್ಕಳ ಘಟಕ ಒತ್ತಾಯಿಸಿದೆ. ಈ ಕುರಿತು ಭಟ್ಕಳ ಉಪವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಿ ರಾಜ್ಯಪಾಲರಲ್ಲಿ (Governor) ವಿನಂತಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಮಾಜದಲ್ಲಿ ಹಿಂಸೆಗೆ ಪ್ರಚೋದನೆ ನೀಡಿರುವ ಈ ಸಚಿವ ಮಂಕಾಳ ವೈದ್ಯ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡುವಂತೆ ಮುಖ್ಯಮಂತ್ರಿಗೆ (CM Siddaramaiah) ಸೂಚಿಸಬೇಕು ಮತ್ತು ಸಂವಿಧಾನ ಹಾಗೂ ಕಾನೂನು ಪಾಲನೆಯ ಬಗ್ಗೆ ಕಿಂಚಿತ್ತೂ ಗೌರವ, ನಂಬಿಕೆ ಇಲ್ಲದ ಇವರ ಶಾಸಕ ಸ್ಥಾನವನ್ನು ತಕ್ಷಣವೇ ರದ್ದು ಮಾಡಲು ಚುನಾವಣಾ ಆಯೋಗಕ್ಕೆ (Election commission) ಸೂಚಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : Bhatkal/ ಹೆಬಳೆಯಲ್ಲಿ ಪೊಲೀಸರ ಅತಿಥಿಯಾದ ಏಳು ಜನ
ಕರ್ನಾಟಕ ಸರ್ಕಾರದಲ್ಲಿ (Karnataka Government) ಸಚಿವರಾಗಿರುವ ಮಂಕಾಳ ವೈದ್ಯ ಅವರು ದನಗಳ ಕಳ್ಳತನ ಮತ್ತು ಹಸುಗಳಿಗೆ ಸಂಬಂಧಪಟ್ಟ ಇತರೆ ಕೃತ್ಯಗಳಲ್ಲಿ ಪಾಲ್ಗೊಳ್ಳುವವರನ್ನು ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹೊಡೆಯಬೇಕು ಎಂಬ ಹೇಳಿಕೆ ಕೊಟ್ಟಿದ್ದಾರೆ. ಈ ನೆಲದ ಕಾನೂನು, ಸಂವಿಧಾನ ರಕ್ಷಣೆ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರೇ ಜನರನ್ನು ಕೊಲ್ಲಲು ಪ್ರಚೋದನೆ ಮಾಡುವ ಮೂಲಕ ಅವರು ತಮ್ಮ ವಚನವನ್ನು ಮುರಿದಿದ್ದಾರೆ ಎಂದು ಎಸ್ಡಿಪಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Bike skid/ ಬೈಕ್ ಸ್ಕಿಡ್ ಆಗಿ ಮೂವರಿಗೆ ಗಾಯ
ಉತ್ತರ ಕನ್ನಡ ಜಿಲ್ಲಾ ಎಸ್.ಡಿ.ಪಿ.ಐ. (SDPI) ಅಧ್ಯಕ್ಷ ತೌಫಿಕ್ ಬ್ಯಾರಿ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಎರಡನೇ ಬಾರಿಗೆ ಗೆದ್ದು ಬಂದವರು. ಅವರೇನು ಹೊಸಬರಲ್ಲ. ಪದೇ ಪದೇ ಗೋ ಕಳ್ಳತನ ಮಾಡುವರನ್ನು ಗುಂಡಿಟ್ಟು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ. ನಿಮಗೆ ಮತ ಹಾಕಿದವರಿಗೆ ನೀವು ಹೊಡೆಯುತ್ತೀರಾ? ಪೊಲೀಸರು ತನಿಖೆ ಮಾಡಿದಂತಹ ಎಷ್ಟೋ ಪ್ರಕರಣಗಳಿವೆ. ಬಳಿಕ ಅವರೆಲ್ಲ ಅಮಾಯಕರೆಂದು ಹೊರಗೆ ಬರುತ್ತಾರೆ. ಅವರಿಗೆ ನೀವು ಶೂಟ್ ಮಾಡುತ್ತೀರಾ? ನೀವು ಶೂಟ್ ಮಾಡಲೆಂದೇ ಇಲ್ಲಿನ ಶಾಸಕರಾಗಿದ್ದೀರಾ? ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದೀರಾ? ಎಂದು ಮಂಕಾಳ ವೈದ್ಯರಿಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Vanadurga/ ಶ್ರೀ ವನದುರ್ಗಾ ವಾರ್ಷಿಕೋತ್ಸವ ಫೆ. ೧೦ರಂದು
ಕರ್ನಾಟಕದಲ್ಲಿ (Karnataka) ೯೨% ಮುಸ್ಲಿಮರು, ಕ್ರಿಸ್ತರು, ದಲಿತರು ಸೇರಿ ಬಲಿಷ್ಠ ಬಹುಮತದಿಂದ ನಿಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ. ಇಲ್ಲವಾದರೆ ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಈ ಹಿಂದೆ ಕಾಂಗ್ರೆಸ್ (Congress) – ಜೆಡಿಎಸ್ (JDS) ಸಮ್ಮಿಶ್ರ ಸರ್ಕಾರವಿದ್ದ ವೇಳೆ ನಿಮ್ಮ ೧೪ ಶಾಸಕರು ಬಿಜೆಪಿಗೆ (BJP) ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆ ವೇಳೆಯಲ್ಲಿ ಬಿಜೆಪಿ ಸರ್ಕಾರದ (BJP Government) ಯಾರು ಕೂಡ ಶೂಟ್ ಮಾಡುತ್ತೇನೆ ಎಂದು ಹೇಳಿಲ್ಲ. ಆದರೆ ಈಗ ಇಲ್ಲಿನ ಪೊಲೀಸರಿಗೆ, ಜಿಲ್ಲಾಡಳಿತಕ್ಕೆ ಯಾರಿಗೂ ಮಾತನಾಡಲು ಕೂಡಲು ಬಹಳ ಒತ್ತಡವಿದೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : Namadhari/ ಶ್ರೀ ವೆಂಕಟರಮಣ ದೇವರ ಅದ್ದೂರಿ ಪಲ್ಲಕ್ಕಿ ಮೆರವಣಿಗೆ
ಎಸ್ಪಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮುಂದೆ ಮಂಕಾಳ ವೈದ್ಯರು ಶೂಟ್ ಮಾಡುತ್ತೇನೆ ಎಂದು ಮಾತನಾಡುತ್ತಾರೆ. ಆ ವೇಳೆಯಲ್ಲಿ ಯಾರು ಕೂಡ ನಿಲ್ಲಿಸಿಲ್ಲ. ಹಾಗಾದರೆ ಸಂವಿಧಾನದ ರಕ್ಷಣೆ ಯಾರು ಮಾಡಬೇಕು? ನಾವು ಮಾಡಬೇಕಾ? ನಮ್ಮ ಪ್ರತಿಭಟನೆ ನಿಲ್ಲಿಸಲು ಬರುತ್ತೀರಾ? ಎಲ್ಲಿಯ ತನಕ ಎಸ್.ಡಿ.ಪಿ.ಐ. ಇದೆಯೋ ಅಲ್ಲಿಯ ತನಕ ನಮ್ಮ ಒಬ್ಬ ಸದಸ್ಯ ಇದ್ದರು ಕೂಡ ಇಂತಹ ಹೇಳಿಕೆ ನೀಡುವವರ ವಿರುದ್ಧ ಹೋರಾಟ ಮಾಡೇ ಮಾಡುತ್ತೇವೆ. ಇದು ಎಚ್ಚರಿಕೆ ನಿಮಗೆ . ನಿಮಗೆ ತಕ್ಕ ಪಾಠ ಕಲಿಹಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಮುಖ ತೆಗೆದುಕೊಂಡು ನಮ್ಮ ಮನೆಯ ಹತ್ತಿರ ಹಾಗೂ ನಮ್ಮ ಸಂಘಟನೆ ಮುಂದೆ ಬರುತ್ತಾರೆ ಎಂದು ನಾವು ನೋಡುತ್ತೇವೆ. ಬಿಜೆಪಿ ಸರ್ಕಾರದವಿದ್ದರೆ ಅಲ್ಪಸಂಖ್ಯಾತರಿಗೆ, ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು ಎಂದು ತೌಫಿಕ್ ಬ್ಯಾರಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : overturned/ ಭಟ್ಕಳಕ್ಕೆ ಬರುತ್ತಿದ್ದ ಲಾರಿ ಪಲ್ಟಿ