ಭಟ್ಕಳ (Bhatkal) : ಜೀವ ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ (court) ಅನುಮತಿ ಪಡೆದು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (Case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಕೆ.ಎಚ್.ಬಿ. ಕಾಲೋನಿ ನಿವಾಸಿ ಮೊಹಿದ್ದೀನ್ ಇರ್ಷಾದ್ ಅಲಿಯಾಸ್ ತುಕಡಾ ಇರ್ಷಾದ್ ಆರೋಪಿ. ಹನುಮಾನ ನಗರದ ನಿವಾಸಿ ಕುಮಾರ ಮಂಜಪ್ಪ ನಾಯ್ಕ (೪೦) ದೂರು ದಾಖಲಿಸಿದವರು. ಭಟ್ಕಳದ ಮಣ್ಕುಳಿಯ ಸಿರಿ ಹೋಟೆಲ್ನಲ್ಲಿ ಕುಮಾರ ನಾಯ್ಕ ಊಟ ಮಾಡುತ್ತಿರುವಾಗ, ಅಲ್ಲಿಗೆ ಆಗಮಿಸಿದ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಅರಣ್ಯ ಇಲಾಖೆಯವರು ದಾಖಲಿಸಿದ ಪ್ರಕರಣದಲ್ಲಿ ಸಾಕ್ಷಿ ಹಾಕಿದ್ದಕ್ಕೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Janaspandana/ ಭಟ್ಕಳದಲ್ಲಿ ಸಚಿವರ ಜನಸ್ಪಂದನ ಕಾರ್ಯಕ್ರಮ
ಮಾ.೨೯ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಕುರಿತು ದೂರು ಅರ್ಜಿ ಸ್ವೀಕರಿಸಿದ ಪೊಲೀಸರು, ಅರ್ಜಿಯಲ್ಲಿ ಅಂಶವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಪಿರ್ಯಾದಿಗೆ ಹಿಂಬರಹ ನೀಡಿದ್ದರು. ಇದನ್ನು ಖಂಡಿಸಿ ನ್ಯಾಯಾಲಯಕ್ಕೆ ಹಾಜರಾದ ಪಿರ್ಯಾದಿ ಕುಮಾರ ನಾಯ್ಕ, ನ್ಯಾಯಾಲಯದಿಂದ ಅನುಮತಿ ಪಡೆದು (court permission) ಮೇ ೧೭ರಂದು ರಾತ್ರಿ ೧೧ ಗಂಟೆ ಸುಮಾರರಿಗೆ ಪ್ರಕರಣ ದಾಖಲಿಸಿದ್ದಾರೆ (Case registered).
ಇದನ್ನೂ ಓದಿ : Mankal Vaidya/ ಮಂಕಾಳ ವೈದ್ಯ ವಿರುದ್ಧ ಸಿಬಿಐ ತನಿಖೆಗೆ ರಾಜ್ಯಪಾಲರಿಗೆ ಒತ್ತಾಯ