ಭಟ್ಕಳ (Bhatkal) : ಕಳೆದ ಡಿಸೆಂಬರ್ ೨೪ರಂದು ಜಮ್ಮು ಕಾಶ್ಮೀರದ (Jammu Kashmir) ಪೂಂಚ್ ನಲ್ಲಿ ಕರ್ತವ್ಯದಲ್ಲಿದ್ದಾಗ ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ (martyred soldier) ಅನೂಪ್ ಪೂಜಾರಿಯವರ ಕುಟುಂಬಕ್ಕೆ ಭಟ್ಕಳದ ಮಾಜಿ ಸೈನಿಕರು ಮತ್ತು ಸೇವಾ ನಿರತ ಸೈನಿಕರಿಂದ ಧನಸಹಾಯ ಮಾಡಲಾಗಿದೆ (helping hand).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವೀರ ಯೋಧನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘದಿಂದ ಭಟ್ಕಳದ ಮಾಜಿ ಸೈನಿಕರು ಹಾಗೂ ಸೇವಾನಿರತ ಸೈನಿಕರ ಧನಸಹಾಯದ ಮೂಲಕ 60 ಸಾವಿರ ಹಣವನ್ನು ಸಂಗ್ರಹಿಲಾಗಿತ್ತು. ಭಟ್ಕಳದ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ಮಾಜಿ ಸೈನಿಕ ಸಂಘದ ಸದಸ್ಯರಾದ ಹನುಮಂತ ನಾಯ್ಕ, ಕೇಶವ ನಾಯ್ಕ ಹಾಗೂ ಊರಿನ ಪ್ರಮುಖರಾದ ಭವಾನಿಶಂಕರ ನಾಯ್ಕ ಅವರು ಕುಂದಾಪುರದ (Kundapur) ಬಿಜಾಡಿಯಲ್ಲಿನ ಹುತಾತ್ಮ ಸೈನಿಕ ಅನೂಪ ಪೂಜಾರಿಯವರ ಸ್ವಗೃಹಕ್ಕೆ ತೆರಳಿ ನೆರವು (helping hand) ನೀಡಿದ್ದಾರೆ.

ಇದನ್ನೂ ಓದಿ : CM Medal/ ಭಟ್ಕಳ ಮೂಲದ ಪಿಎಸೈಗೆ ಸಿಎಂ ಪದಕ

ಹುತಾತ್ಮ ಯೋಧನ ಧರ್ಮಪತ್ನಿ ಹಾಗೂ ಅವರ ತಾಯಿಯವರಿಗೆ ಸಾಂತ್ವನ ಹೇಳಿ, ತಲಾ ೩೦  ಸಾವಿರದಂತೆ (ಒಟ್ಟೂ ೬೦ ಸಾವಿರ) ಅವರ ಧರ್ಮಪತ್ನಿ ಹಾಗೂ ತಾಯಿಯವರಿಗೆ ಡಿ. ಡಿ. ಹಸ್ತಾಂತರಿಸಿದ್ದಾರೆ. ಇದೇ ಸಂದರ್ಭದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಮ್ ಡಿ ಪಕ್ಕಿ ಪೋನ್ ಕರೆ ಮೂಲಕ ಅನೂಪ್ ಪೂಜಾರಿಯವರ ಧರ್ಮಪತ್ನಿ ಹಾಗೂ ತಾಯಿಯವರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ : Eid ul Fitr/ ಭಟ್ಕಳದಲ್ಲಿ ಈದ್ ಉಲ್ ಫಿತ್ರ್ ಸಂಭ್ರಮದ ಆಚರಣೆ

ಅನೂಪ್ ಪೂಜಾರಿಯವರ ಧರ್ಮಪತ್ನಿ ಬಿಎಸ್ಸಿ ಪದವೀಧರರಾಗಿದ್ದು, ಚಿಕ್ಕ ಮಗಳನ್ನು ಹೊಂದಿದ್ದಾರೆ. ಅವರ ಮುಂದಿನ ಜೀವನ ನಿರ್ವಹಣೆಗಾಗಿ ಅನುಕಂಪದ ಆಧಾರದ ಮೇಲೆ ಕೇಂದ್ರ ಸರ್ಕಾರದ (Central Government) ಅಥವಾ ರಾಜ್ಯ ಸರ್ಕಾರದ (State Government) ಯಾವುದಾದರೂ ಇಲಾಖೆಯಲ್ಲಿ ಸರ್ಕಾರಿ ಹುದ್ದೆಗಾಗಿ (Government Job) ವಿವಿಧ ಹಂತದಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಶೀಘ್ರ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಶಿಪಾರಸ್ಸು ಮಾಡುವಂತೆ ಉಡುಪಿ (Udupi) ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ (Kota Srinivas Poojary)  ಭಟ್ಕಳದ ಮಾಜಿ ಸೈನಿಕರ ಸಂಘದ ವತಿಯಿಂದ ಮನವಿ ಪತ್ರ ನೀಡಲಾಗಿದೆ ಎಂದು ಶ್ರೀಕಾಂತ ನಾಯ್ಕ ತಿಳಿಸಿದ್ದಾರೆ.

ಇದನ್ನೂ ಓದಿ : High alert / ಭಟ್ಕಳದಲ್ಲಿ ಬಾಂಬ್‌ ನಿಷ್ಕ್ರಿಯ ದಳದಿಂದ ತಪಾಸಣೆ