ಕಾರವಾರ (Karwar): ಉತ್ತರ ಕನ್ನಡ (Uttarakannada) ಜಿಲ್ಲೆಯಾದ್ಯಂತ ಗುರುವಾರ ಸುರಿದ ಮಳೆಗೆ ಜಿಲ್ಲಾ ಕೇಂದ್ರದಲ್ಲಿನ ವಿವಿಧ ಸರ್ಕಾರಿ ಕಚೇರಿಗಳಿಗೂ ನೀರು ನುಗ್ಗಿದ್ದು, ಅನೇಕರ ಮನೆಯ ಪೀಠೋಪಕರಣಗಳು ಹಾಳಾಗಿವೆ (Heavy rain in Karwar). ಸಾರ್ವಜನಿಕ ಓಡಾಟದ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು!

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ ಸೇರಿ ಕರಾವಳಿ ಪ್ರದೇಶದಲ್ಲಿ (coastal areas) ಜೂನ್ ೧೨ರಂದು ಗರಿಷ್ಠ ೬೫ ಮಿ.ಮೀ. ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಕರಾವಳಿ ಭಾಗದಲ್ಲಿ ಗರಿಷ್ಠ ೨೬೮ ಮಿ.ಮೀ. ಪ್ರಮಾಣದಲ್ಲಿ ಮಳೆ ಸುರಿಯಿತು. ಈ ಬಗ್ಗೆ ಮುನ್ನಚ್ಚರಿಕೆ ಸ್ವೀಕರಿಸಿದ್ದ ಜಿಲ್ಲಾಡಳಿತ ಮಧ್ಯರಾತ್ರಿ ತುರ್ತು ಆದೇಶ ಹೊರಡಿಸಿ ಕರಾವಳಿ ಭಾಗದ ಶಾಲೆಗಳಿಗೆ ರಜೆ ಘೋಷಿಸಿತ್ತು. ಪರಿಣಾಮ ಮಕ್ಕಳು ಶಾಲೆಗೆ ಬಂದು ಪರಿತಪಿಸುವುದು ತಪ್ಪಿತು. ಅದಾಗಿಯೂ, ಮನೆಯಿಂದ ಹೊರಗೆ ಬಂದ ಜನರು ಮಳೆಯಿಂದ ಸಂಕಷ್ಟ ಅನುಭವಿಸಿದರು.

ಇದನ್ನು ಓದಿ : Lightning/ ಭಟ್ಕಳದಲ್ಲಿ ಸಿಡಿಲು ಬಡಿದು ದನದ ಕೊಟ್ಟಿಗೆ ಭಸ್ಮ

ಕಾರವಾರದ ವೈಲವಾಡದಲ್ಲಿ ಗರಿಷ್ಠ ಪ್ರಮಾಣದ ಮಳೆ ಸುರಿದಿದೆ (heavy rain in Karwar). ಅಲ್ಲಿ ನಿರಂತರವಾಗಿ ೨೬೭ ಮಿ.ಮೀ. ಮಳೆಯಾಗಿದೆ. ಅದರೊಂದಿಗೆ ಕರಾವಳಿಯ ಎಲ್ಲ ತಾಲೂಕುಗಳಲ್ಲಿಯೂ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ನೂರಾರು ವಾಹನಗಳು ಮಳೆ ನೀರಿನಲ್ಲಿ ಸಿಲುಕಿ ಗ್ಯಾರೇಜಿಗೆ ಬಂದಿವೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ಜನರು ಕಂಗಾಲಾಗಿದ್ದಾರೆ. ಜಿಲ್ಲಾಸ್ಪತ್ರೆಯ ಆವರಣದೊಳಗೂ ಮಳೆ ನೀರು ನುಗ್ಗಿದ್ದು, ರೋಗಿಗಳು ಹಿಂಸೆ ಅನುಭವಿಸುತ್ತಿದ್ದಾರೆ. ನೀರು ಹೊರ ಹಾಕಲು ಸಿಬ್ಬಂದಿ ಸಾಹಸ ನಡೆಸಿದ್ದಾರೆ.

ಇದನ್ನು ಓದಿ: complaint/ ಭಟ್ಕಳದ ಹೋಟೆಲ್‌ ಬಳಿ ಹೊಡೆದಾಟ

ಕಾರವಾರದ ಸಾಯಿಕಟ್ಟಾ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಬ್ಬುವಾಡ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು ಹೋಗಲು ಸಾಧ್ಯವಿಲ್ಲ. ಬಿಣಗಾ ಹೆದ್ದಾರಿ ಸೇರಿ ಅನೇಕ ಕಡೆ ಬೈಕು-ಕಾರುಗಳು ನೀರಿನಲ್ಲಿ ಸಿಕ್ಕಿ ಬಿದ್ದಿವೆ. ಅಲ್ಲಲ್ಲಿ ಮನೆಗಳ ಮೇಲೆ ಮರ ಬಿದ್ದಿವೆ. ಅಪಾರ್ಟಮೆಂಟ್ ಪಾರ್ಕಿಂಗ್ ಪ್ರದೇಶಗಳು ಜಲಾವೃತಗೊಂಡಿವೆ.

ಇದನ್ನು ಓದಿ : landslide/ ಭಟ್ಕಳ ಬಂದರಿನಲ್ಲಿ ಭೂಕುಸಿತದ ಆತಂಕ

ಅಪಾರ್ಟಮೆಂಟಿನಲ್ಲಿರಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿವೆ. ಅದನ್ನು ಹೊರತೆಗೆಯುವ ಸಾಹಸ ಮುಂದುವರೆದಿದೆ. ನಾಲಾಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಸ್ತೆ ಪಕ್ಕದ ಅಂಗಡಿಗಳಿಗೂ ನೀರು ನುಗ್ಗಿದೆ. ಕಾರವಾರದ ಕೋಳಿ ಅಂಗಡಿಗೆ ನೀರು ನುಗ್ಗಿ ಕೋಳಿಗಳೆಲ್ಲವೂ ಸಾವನಪ್ಪಿವೆ. ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲ. ಪಂಪ್ ಮೂಲಕ ನೀರು ಹೊರಗೆ ಸಾಗಿಸುವ ಕೆಲಸ ನಡೆಯುತ್ತಿದೆ. ತಗ್ಗು ಪ್ರದೇಶದಲ್ಲಿನ ಜನ ಗಾಳಿ-ಮಳೆ-ಚಳಿಗೆ ನಲುಗಿದ್ದಾರೆ.

ಇದನ್ನು ಓದಿ : Duplicate Notes/ ಮುರ್ಡೇಶ್ವರದಲ್ಲಿ ಹುಬ್ಬಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ !