Editorial/ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಗರ್ಭಿಣಿ ಹಸುವನ್ನು ಕೊಂದ ನಂತರ ಗೋವು ಕಳ್ಳಸಾಗಾಣಿಕೆಯ ಮಾತುಗಳು ಜೋರಾಗಿ ಕೇಳಿಬರುತ್ತಿವೆ.  ಹೊನ್ನಾವರ (Honnavar) ತಾಲೂಕಿನಲ್ಲಿ ಗರ್ಭಿಣಿ ಹಸುವನ್ನು ಕೊಂದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಸುಗಳ ಕಳ್ಳಸಾಗಾಣಿಕೆ ಮತ್ತು ಅಕ್ರಮ ದನ ಸಾಗಾಟವು ವ್ಯಾಪಕವಾಗಿದೆ ಎಂಬ ಆರೋಪಕ್ಕೆ ಇಂಬು ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜನವರಿ ೧೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದ ಕೊಂಡಕುಳಿಯಲ್ಲಿ ಗರ್ಭಿಣಿ ಹಸುವಿನ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ವಿರೂಪಗೊಳಿಸಿ ಮಾಂಸವನ್ನು ತೆಗೆದುಕೊಂಡು ಹೋಗಲಾಯಿತು. ಈ ಕ್ರೌರ್ಯಕ್ಕೆ ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.  ಕಾಂಗ್ರೆಸ್ (Congress) ಮತ್ತು ಭಾರತೀಯ ಜನತಾ ಪಕ್ಷದ (BJP) ಸ್ಥಳೀಯ ನಾಯಕರು ಪೈಪೋಟಿಗಿಳಿದಂತೆ ಹೇಳಿಕೆಗಳನ್ನು ನೀಡಿದರು.  ಅಪರಾಧಿಗಳನ್ನು ಹಿಡಿಯಲು ದಿನಪತ್ರಿಕೆಗಳ ಮೂಲಕ ನಗದು ಪುರಸ್ಕಾರದ ಜಾಹೀರಾತು ನೀಡಿ ಪ್ರಕರಣದಲ್ಲಿ ಪೊಲೀಸರು ಪ್ರಯತ್ನ ನಡೆಸಿದರು.

ಇದನ್ನೂ ಓದಿ : Honour/ ಕೋಟಖಂಡದಲ್ಲಿ ನಿವೃತ್ತ ಅಧಿಕಾರಿಗೆ ಸನ್ಮಾನ

ಕ್ರೂರತೆಯಿಂದ ಕೂಡಿದ್ದ ಸಾಲ್ಕೋಡ ಘಟನೆ ನಂತರ ಜಿಲ್ಲೆಯಾದ್ಯಂತ ಗೋವುಗಳ ಕಳ್ಳತನ ವ್ಯಾಪಕವಾಗಿದೆ ಎಂಬುದಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕಾರಣಿಗಳಲ್ಲಿ ಒಮ್ಮತವಿದೆ.  ಪ್ರತಿಯೊಬ್ಬರೂ ಪಕ್ಷಾತೀತವಾಗಿ ಘಟನೆ ಖಂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಉತ್ತರ ಕನ್ನಡದಲ್ಲಿ, ಕಳ್ಳತನದ ಪ್ರಕರಣಗಳು ದಾಖಲಾಗಿದ್ದು ತೀರಾ ಕಡಿಮೆ. ಹಾಗಂತ ಜಾನುವಾರು ಸಾಗಣೆ, ಮಾಂಸ ಸಾಗಣೆ ಪ್ರಕರಣಗಳು ಕಡಿಮೆಯಾಗಿಲ್ಲ.

ಇದನ್ನೂ ಓದಿ : Varadhalli/ ವರದಳ್ಳಿಯಲ್ಲಿ ಕೇಸರಿ ಗಂಧ ಲೇಪನ ಅಲಂಕಾರ ಪೂಜೆ

ಗೃಹ ಇಲಾಖೆಯ (Home Department) ಅಂಕಿಅಂಶಗಳು ಹೇಳುವಂತೆ, ೨೦೨೩ ಮತ್ತು ೨೦೨೪ರಲ್ಲಿ ಉತ್ತರ ಕನ್ನಡದಲ್ಲಿ ಕೇವಲ ಐದು ಹಸು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯದಲ್ಲೇ ಅತ್ಯಂತ ಕಡಿಮೆ. ೨೦೨೩ರಲ್ಲಿ ಬೀದರ (Bidar) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ೨೬, ರಾಯಚೂರು (Raichur) ೨೪ ಮತ್ತು ಬೆಂಗಳೂರು (Bengaluru) ನಗರದಲ್ಲಿ ೨೨ ಪ್ರಕರಣಗಳು ದಾಖಲಾಗಿವೆ. ೨೦೨೪ರಲ್ಲಿಯೂ ಬೀದರ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ೩೯, ನಂತರದ ಸ್ಥಾನದಲ್ಲಿ ಬೆಂಗಳೂರು ಜಿಲ್ಲೆ, ಬೆಂಗಳೂರು ನಗರ ಮತ್ತು ಕಲಬುರಗಿ (Kalaburagi) ಜಿಲ್ಲೆಯಲ್ಲಿ ತಲಾ ೨೯ ಪ್ರಕರಣಗಳಿವೆ. ಪೊಲೀಸ್ ಮಾಹಿತಿ ಪ್ರಕಾರ, ೨೦೧೦ರಿಂದ ೨೦೨೪ರ ನಡುವಿನ ೧೫ ವರ್ಷಗಳಲ್ಲಿ ಇಡೀ ಜಿಲ್ಲೆಯಲ್ಲಿ ೭೪ ದನಗಳ ಕಳ್ಳತನದ ೬೧ ಪ್ರಕರಣಗಳು ದಾಖಲಾಗಿದ್ದು, ೯೦ ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ : Rathotsava/ ಸೋನಾರಕೇರಿಯಲ್ಲಿ ಬೆಳ್ಳಿ ರಥೋತ್ಸವ ಫೆ. ೧೭ರಂದು

ಉತ್ತರ ಕನ್ನಡ ಪೊಲೀಸರು ಕಳೆದ ಐದು ವರ್ಷಗಳಲ್ಲಿ ದಾಖಲಾದ ಅಕ್ರಮ ಗೋ ಸಾಗಾಟ ಮತ್ತು ಜಾನುವಾರು ಕಳ್ಳತನದ ಅಂಕಿ-ಅಂಶಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಅವಧಿಯಲ್ಲಿ ೧೩೮ ಅಕ್ರಮ ಹಸು ಸಾಗಾಟದ ಪ್ರಕರಣಗಳು ದಾಖಲಾಗಿವೆ ಮತ್ತು ೮೬೬ ಹಸುಗಳನ್ನು ರಕ್ಷಿಸಲಾಗಿದೆ. ಒಟ್ಟು ೪೬೭ ಜನರನ್ನು ಬಂಧಿಸಲಾಗಿದೆ. ಇಂತಹ ಘಟನೆಗಳನ್ನು ತಡೆಯಲು ಪೊಲೀಸರು ಗಸ್ತು ಮತ್ತು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Editorial/ ಪ್ರವಾಸೋದ್ಯಮಿಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

ಜಾನುವಾರುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ, ಉತ್ತರ ಕನ್ನಡದಲ್ಲಿ ೨೦೨೩ರಲ್ಲಿ ೩೯ ಮತ್ತು ೨೦೨೪ರಲ್ಲಿ ೪೩ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.  ೨೦೨೩ರಲ್ಲಿ ಹಾಸನ ಮತ್ತು ತುಮಕೂರು (Tumkur) ಜಿಲ್ಲೆಗಳು ಎರಡು ಮತ್ತು ತೃತೀಯ ಸ್ಥಾನಗಳನ್ನು ಪಡೆದರೆ, ೨೦೨೪ರಲ್ಲಿ ಶಿವಮೊಗ್ಗ (Shivamogga) ಮತ್ತು ಹಾಸನ (Hassan) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ೨೦೧೦ ಮತ್ತು ೨೦೨೪ರ ನಡುವೆ ೮೮ ಪ್ರಕರಣಗಳಿಗೆ ಸಂಬಂಧಿಸಿದಂತೆ ೧೮೬೩೮ ಕೆಜಿ (ಚರ್ಮ ಮತ್ತು ಮೂಳೆಗಳು ಸೇರಿದಂತೆ) ತೂಕದ ಜಾನುವಾರು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಂಕಿಅಂಶಗಳು ತೋರಿಸುತ್ತವೆ.

ಇದನ್ನೂ ಓದಿ : Sukri Gowda/ ಹಾಡು ನಿಲ್ಲಿಸಿದ ಜಾನಪದ ಕೋಗಿಲೆ

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯ (Mankal Vaidya) ಅವರು, ಪೊಲೀಸರು ತಪ್ಪಿತಸ್ಥರನ್ನು ಬೀದಿಯಲ್ಲಿ ಶೂಟ್ ಮಾಡುತ್ತಾರೆ ಎಂದು ಹೇಳಿದ್ದರು. “ಇದು ಅನ್ಯಾಯ. ನಾವು ಹಸುಗಳನ್ನು ಮತ್ತು ಹಿರಿ ಹಸುಗಳನ್ನು ಬಹಳ ಪ್ರೀತಿಯಿಂದ ಪೂಜಿಸುತ್ತೇವೆ. ಅದರ ಹಾಲು ಕುಡಿದು ಬೆಳೆದಿದ್ದೇವೆ. ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಇಲಾಖೆಗೆ ಸ್ಪಷ್ಟವಾಗಿ ಹೇಳಿದ್ದೇನೆ. ಅವರನ್ನು ಬಂಧಿಸುವಂತೆ ಹೇಳಿದ್ದೇನೆ. ಇದು ಮುಂದುವರಿದರೆ,  ಅವರನ್ನು ರಸ್ತೆಯ ಮಧ್ಯದಲ್ಲಿ ಅಥವಾ ವೃತ್ತದಲ್ಲಿ ಶೂಟ್ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ಸಹಿತ ಹಿಂದು ಪರ ಸಂಘಟನೆಗಳು ಸ್ವಾಗತಿಸಿದರೆ, ಕಾಂಗ್ರೆಸ್‌ ಮೌನವಹಿಸಿದೆ. ಇನ್ನೂ, ಎಸ್‌ಡಿಪಿಐ(SDPI),  ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಮತ್ತಿತರ ಸಂಘಟನೆಗಳು ಖಂಡಿಸಿವೆ. ಸಚಿವರ ರಾಜೀನಾಮೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : German Bakery / ಜರ್ಮನ್ ಬೇಕರಿ ಸ್ಫೋಟಕ್ಕೆ ೧೫ ವರ್ಷ

ಕೃಷ್ಣ ಆಚಾರಿ ಎಂಬುವರಿಗೆ ಸೇರಿದ ಗರ್ಭಿಣಿ ಹಸುವನ್ನು ಜನವರಿ ೧೮ರಂದು ಕೊಲ್ಲಲಾಯಿತು. ಮೃತದೇಹದಿಂದ ಕತ್ತರಿಸಿದ ಮಾಂಸವನ್ನು ಮದುವೆಯ ಹಬ್ಬದಲ್ಲಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಪೊಲೀಸ್ ವರಿಷ್ಠಾಧಿಕಾರಿ (Police Superintendent) ಎಂ ನಾರಾಯಣ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಆರೋಪಿಗಳನ್ನು ಹಿಡಿಯುವುದಾಗಿ ಭರವಸೆ ನೀಡಿದ್ದರು. “ಮನುಷ್ಯನ ಹತ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸುತ್ತೇವೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಮ್ಮಿಂದ ಮಾಹಿತಿ ಪಡೆದು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗೋಮಾಂಸ ತಿನ್ನುವ ಸಮುದಾಯದ ಸಂಘಟನೆಗಳಿಗೆ ಆರೋಪಿಗಳನ್ನು ಹಿಡಿಯಲು ನಮಗೆ ಸಹಾಯ ಮಾಡುವಂತೆ ಹೇಳಿದ್ದೇವೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ : Cyber crime/ ಭಟ್ಕಳದಲ್ಲಿ ಬ್ಯಾಂಕ್ ಖಾತೆಗೆ ಕನ್ನ

ಸಾಲ್ಕೋಡ್‌ ಘಟನೆ ನಂತರ ಜಿಲ್ಲಾ ಪೊಲೀಸರು ಕೈಗೊಂಡ ಕ್ರಮಗಳು ಸಮಾಧಾನಕರವಾಗಿವೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ನಾನಾ ವಿಧದಲ್ಲಿ ಪ್ರಯತ್ನಿಸುತ್ತಿದ್ದಾರೆ.  ಕೋಮು ಸೌಹಾರ್ದತೆಗೆ (communal harmony) ಧಕ್ಕೆಯಾಗದಂತೆ ಪೊಲೀಸರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆರೋಪಿಗಳನ್ನು ಹಿಡಿಯಲು ಆರು ತಂಡಗಳನ್ನು ರಚಿಸಲಾಗಿತ್ತು. ಪೊಲೀಸರು ಇದುವರೆಗೆ ಒಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪರಾರಿಯಾಗಿರುವ ಶಂಕಿತ ಆರೋಪಿಗಳಾದ ಭಟ್ಕಳದ ಮುಜಾಮಿಲ್ ಮತ್ತು ವಾಸಿಂ ಸುಲೈಮಾನ್ ಮಿರಾಜಿಕರ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ  ೫೦ ಸಾ.ರೂಪಾಯಿ ನಗದು ಬಹುಮಾನವನ್ನು ಜನವರಿ ೨೮ರಂದು ಎಸ್ಪಿ ಘೋಷಿಸಿದ್ದಾರೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೋಲೀಸ್ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿನ ಪತ್ರಿಕೆಗಳಲ್ಲಿ ನಗದು ಬಹುಮಾನವನ್ನು ಘೋಷಿಸುವ ಜಾಹೀರಾತುಗಳನ್ನು ನೀಡಿತು. ಇಬ್ಬರ ವಿರುದ್ಧವೂ ಹಸು ಕಳ್ಳತನದ ಹಲವು ಪ್ರಕರಣಗಳಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಡಿಯೋ ಸಹಿತ ಇದನ್ನೂ ಓದಿ : hatchling/ ಹೊನ್ನಾವರದಲ್ಲಿ ಆಮೆ ಮರಿಗಳ ಜನನ

ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಕೆಲವು ಮುಸ್ಲಿಂ ಸಂಘಟನೆಗಳು ಸಹ ಮಧ್ಯಪ್ರವೇಶಿಸಿವೆ. ಭಟ್ಕಳದ (Bhatkal) ನವಾಯತಿ ಸಮುದಾಯದ ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ (Tanzeem) ಸಂಘಟನೆಯು ಗೋಹತ್ಯೆಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದೆ.  ಸಂಘಟನೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, “ನಾವು ಹಸುವನ್ನು ಕೊಂದು ಅದರ ಮಾಂಸವನ್ನು ಕದಿಯುವುದನ್ನು ಖಂಡಿಸುತ್ತೇವೆ. ಕಳ್ಳತನ ನಮಗೆ ಹರಾಮ್ ಆಗಿದೆ. ನಾವು ಗೋಮಾಂಸವನ್ನು ತಿನ್ನುತ್ತೇವೆ, ಆದರೆ ನಾವು ಕದ್ದ ಮಾಂಸವನ್ನು ತಿನ್ನುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ : Bhatkal Gang/ ಕಾಡುಕೋಣ ಬೇಟೆಯಾಡಿದ ಭಟ್ಕಳ ಗ್ಯಾಂಗ್‌ ಸೆರೆ

ಒಟ್ಟಿನಲ್ಲಿ, ಗೋ ಕಳ್ಳತನ, ಹತ್ಯೆ, ಅಕ್ರಮ ಸಾಗಾಟ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಕ್ಕೊರಲ ಧ್ವನಿ ಎದ್ದಿದೆ. ಆದರೆ, ಇದು ನಿರಂತರವಾಗಿರಬೇಕು. ಜೊತೆಗೆ ಸರ್ಕಾರ ಕೂಡ ಕಠಿಣ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ತೋರಿಸಬೇಕು. ಅಕ್ರಮ ತಡೆಗೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯ ಹದ್ದಿನ ಕಣ್ಣು ನೆಟ್ಟಿರಬೇಕು. ಗೋ ಹತ್ಯೆ ನಿಷೇಧ (KPSPC) ಕಾಯ್ದೆ-೨೦೨೦ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಆಗ ಮಾತ್ರ ಗೋ ಹತ್ಯೆ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯ.

(Editorial)

ಇದನ್ನೂ ಓದಿ : Editorial/ ಗೋವುಗಳ ರಕ್ಷಣೆ ಆದ್ಯ ಕರ್ತವ್ಯವಾಗಲಿ