ಭಟ್ಕಳ: ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಮತ್ತು ರಥೋತ್ಸವದ ಕಾರ್ಯಕ್ರಮ ಪ್ರಯುಕ್ತ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರು ಉದ್ಯಮಿ ಅಶೋಕ ಶಂಕರ ಭಟ್ಟ ಅವರಿಗೆ ಸಾಧಕ ಪ್ರಶಸ್ತಿ (Achievement Award) ನೀಡಿ ಗೌರವಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನಲ್ಲಿ (Bengaluru) ಬಿಸಿನೀರ್ ಇಂಡಿಯಾ ಕಂಪೆನಿ ಮುನ್ನೆಡೆಸುತ್ತಾ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಗಮನ ಸೆಳೆದಿರುವ ಅಶೋಕ ಭಟ್ಟ ಅವರನ್ನು ಕಿತ್ರೆ ದೇವಿಮನೆ ಆಡಳಿತ ಮಂಡಳಿ ಸಾಧಕ ಪ್ರಶಸ್ತಿಗೆ (Achievement Award) ಆಯ್ಕೆ ಮಾಡಿತ್ತು. ಅಶೋಕ ಭಟ್ಟರು ದೇವಸ್ಥಾನಗಳ ಜೀರ್ಣೋದ್ಧಾರ, ವಿದ್ಯಾ ಸಂಸ್ಥೆಗೆ, ಅನಾರೋಗ್ಯ ಪೀಡಿತರು ಸೇರಿದಂತೆ ಹಲವು ಕುಟುಂಬಗಳಿಗೆ ನೆರವಾಗಿದ್ದಾರೆ. ಇವರಿಗೆ ಬೆಂಗಳೂರಿನ “ಸಾಗರ ಸಂಗಮ” ಸಂಸ್ಥೆ, ವಿಶ್ವಹವ್ಯಕ ಸಮ್ಮೇಳನದಲ್ಲಿ “ಸ್ಪೂರ್ತಿರತ್ನ” ಪುರಸ್ಕಾರ, ಶ್ರೀರಾಮಚಂದ್ರಾಪುರಮಠ ಗೋಕರ್ಣದ (Gokarna) ಅಶೋಕೆಯಲ್ಲಿ “ಸಮಾಜ ಸೇವಾತಿಲಕ” ಪುರಸ್ಕಾರ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳು ಪುರಸ್ಕರಿಸಿದ್ದು, ಇದೀಗ ಕಿತ್ರೆ ದೇವಿಮನೆ ಆಡಳಿತ ಮಂಡಳಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಕುಸುಮಾ ಭಟ್ಟ, ದೇವಿಮನೆ ಆಡಳಿತ ಸಮಿತಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಬಾಲಚಂದ್ರ ಹೆಬ್ಬಾರ ಇದ್ದರು.

ಇದನ್ನು ಓದಿ: Symposium/ ಪತ್ರಕರ್ತರಿಗೆ ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರ