ಭಟ್ಕಳ: ಹಿಂದೆ ನಾವು ಇಂತಹ ಶಿಬಿರಗಳು ಯಾವುದೋ ದೂರದ ಊರುಗಳಲ್ಲಿ ನಡೆಯುತ್ತಿರುವುದನ್ನು ಕೇಳುತ್ತಿದ್ದೆವು. ಆದರೆ ಈ ಚಿಣ್ಣರ ಮೇಳ (Chinnara Mela) ಎಂಬ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ನಮ್ಮ ಊರಿನಲ್ಲಿಯೇ ನಡೆಸುತ್ತಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ ಎಂದು ಭಟ್ಕಳ ಅರ್ಬನ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ, ನಿವೃತ್ತ ಯೋಧ ಶ್ರೀಕಾಂತ ನಾಯ್ಕ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳದ (Bhatkal) ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜಿನಲ್ಲಿ ಭಟ್ಕಳ ಎಜ್ಯುಕೇಶನ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದವರು ಆಯೋಜಿಸಿರುವ ಚಿಣ್ಣರ ಮೇಳ (Chinnara Mela)– ೩ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

Power Shutdown/ ಏ ೧೫ರಂದು ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜಿನ ಪ್ರಾಂಶುಪಾಲ ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದ ಅಧ್ಯಕ್ಷ ಡಾ ವಿರೇಂದ್ರ ವಿ ಶಾನಭಾಗ, ಈ ಚಿಣ್ಣರ ಮೇಳವು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತರುವುದರ ಜೊತೆಗೆ ನಿತ್ಯ ಮನೆಯಲ್ಲಿ ನೃತ್ಯ ಮತ್ತು ನಾಟಕದ ಜೊತೆಗೆ ಭಜನೆ ಮಾಡುವ, ಗುರು ಹಿರಿಯರಿಗೆ ಗೌರವಿಸುವ, ನಿತ್ಯ ತಂದೆ-ತಾಯಿಗೆ ನಮಸ್ಕರಿಸುವ, ಸಂಸ್ಕಾರವನ್ನು ಕಲಿಸಿ ಅಳವಡಿಸಿಕೊಡುವ ಒಳ್ಳೆಯ ವೇದಿಕೆಯಾಗಿದೆ ಎಂಬ ಮಾತನ್ನು ಹೇಳಿದರು.

taxi drivers/ ಭಟ್ಕಳ ಟ್ಯಾಕ್ಸಿ ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಡಿ ವೈ ಎಸ್ ಪಿ ಕಚೇರಿಯಲ್ಲಿ ಸಭೆ 

ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದ ಗೌರವಾಧ್ಯಕ್ಷ ಮತ್ತು ಅಳ್ವೇಕೋಡಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ, ಗೌರವ ಮಾರ್ಗದರ್ಶಕ ಮಾನಸುತ ಶಂಭು ಹೆಗಡೆ, ಹಿರಿಯ ಮಾರ್ಗದರ್ಶಕ ವಿಷ್ಣುದಾಸ ಪೈ, ಸಹ ಕಾರ್ಯದರ್ಶಿ ಗೀತಾ ಶಿರೂರು ಮಾತನಾಡಿದರು.

Protest/ ಮುಖ್ಯ ಶಿಕ್ಷಕ ವರ್ಗಾವಣೆ ವಿರೋಧಿಸಿ ಶಿರಾಣಿಕೇರಿ ಶಾಲೆ ಮುಂದೆ ಧರಣಿ

ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಶಿರಾಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತ್ರಾವತಿ ಪ್ರಾರ್ಥಿಸಿದರು, ಕಾವ್ಯಾ ಗೊಂಡ ವಂದಿಸಿದರು, ಸಂಕಲ್ಪ ನಿರೂಪಿಸಿದರು.

Case filed/ ತೆಂಗಿನ ಮರದಿಂದ ಬಿದ್ದು ಗಾಯಗೊಂಡವ ಆತ್ಮಹತ್ಯೆ

ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವನಾಥ ಮಹಾಲೆ, ರಘುರಾಮ ಮಡಿವಾಳ, ಉಪನ್ಯಾಸಕ ಜಗದೀಶ ಹರಿಕಾಂತ ಮತ್ತು ದಾಮೋದರ ಗೊಂಡ ನಾಟಕ, ಈಶ್ವರ ಹಕ್ರೆ ಭಜನೆಯನ್ನು, ಯೋಗರಾಜ ಮತ್ತು ತೇಜಸ್ವಿನಿ ನೃತ್ಯ ತರಬೇತಿ ನೀಡಲಿದ್ದು, ಉಪನ್ಯಾಸಕಿ ನಿಶ್ಚಿತಾ ಮತ್ತು ಉಪನ್ಯಾಸಕ ಗಣೇಶ ಗೊಂಡ ಶಿಬಿರದ ಉಸ್ತುವಾರಿ ನಿರ್ವಹಿಸಲಿದ್ದಾರೆ.