ಭಟ್ಕಳ: ತಾಲೂಕಿನ ಟ್ಯಾಕ್ಸಿ ಚಾಲಕರ (taxi drivers) ಸಮಸ್ಯೆಗಳ ಕುರಿತು ಡಿ ವೈ ಎಸ್ ಪಿ (DySP) ಕಚೇರಿಯಲ್ಲಿ ಪೊಲೀಸ್ (police), ಆರ್‌ಟಿಓ (RTO) ಹಾಗೂ ಐಆರ್‌ಬಿ (IRB) ಕಂಪನಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಭೆಯಲ್ಲಿ ಟ್ಯಾಕ್ಸಿ ಚಾಲಕರು (taxi drivers), ಅನಧಿಕೃತ ವಾಹನಗಳ ಹಾವಳಿಯನ್ನು ಗಂಭೀರವಾಗಿ ಉಲ್ಲೇಖಿಸಿದರು. ಹೊರ ರಾಜ್ಯಗಳಿಂದ ವೈಟ್ ಬೋರ್ಡ್ ಕಾರುಗಳನ್ನು ತರಿಸಿ ನಿಯಮಬಾಹಿರವಾಗಿ ಬಾಡಿಗೆಗೆ ಓಡಿಸುತ್ತಿರುವುದು ಹೆಚ್ಚಾಗಿದೆ. ಇದರಿಂದ ನಿಯಮಾನುಸಾರ ತೆರಿಗೆ ಪಾವತಿಸಿ ಸೇವೆ ನೀಡುತ್ತಿರುವ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಟೋಗಳು ತಮ್ಮ ವ್ಯಾಪ್ತಿಯನ್ನು ಮೀರಿ ದೂರದ ಸ್ಥಳಗಳಿಗೆ ಸಂಚರಿಸುತ್ತಿದ್ದು, ಪ್ರಶ್ನಿಸಿದರೆ ಜಗಳಕ್ಕೂ ಇಳಿಯುತ್ತಿರುವ ಘಟನೆಗಳು ನಡೆಯುತ್ತಿವೆ ಎಂದು ದೂರಿದರು.

Protest/ ಮುಖ್ಯ ಶಿಕ್ಷಕ ವರ್ಗಾವಣೆ ವಿರೋಧಿಸಿ ಶಿರಾಣಿಕೇರಿ ಶಾಲೆ ಮುಂದೆ ಧರಣಿ

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಗಿರೀಶ ಹಾಗೂ ಆರ್‌ಟಿಓ ಅಧಿಕಾರಿ ರವೀಂದ್ರ, ಅನಧಿಕೃತ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿ ಕಂಡುಬಂದರೆ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

Case filed/ ತೆಂಗಿನ ಮರದಿಂದ ಬಿದ್ದು ಗಾಯಗೊಂಡವ ಆತ್ಮಹತ್ಯೆ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ವಾಹನ ಪಾರ್ಕಿಂಗ್ ವಿಚಾರದಲ್ಲಿ ಚಾಲಕರು ಸಹಕರಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಮಳೆಗಾಲದೊಳಗೆ ಕಾಮಗಾರಿ ಮುಗಿಸಲು ಪೊಲೀಸ್ ಸಹಕಾರ ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಯಿತು.

PUC result/ ಮುರುಡೇಶ್ವರದ ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಸಾಧನೆ

ಗೋವು ಕಳ್ಳತನಕ್ಕೆ ಬಳಸುವ ವಾಹನಗಳ ಮೇಲೆ ಕಣ್ಣು: ಸಭೆಯಲ್ಲಿ ಸಿಪಿಐ ದಿವಾಕರ್ ಮಾತನಾಡಿ, ಬಾಡಿಗೆಗೆ ಪಡೆದ ಕಾರುಗಳನ್ನು ಗೋವು ಕಳ್ಳತನಕ್ಕೆ ಬಳಸುವ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಹೇಳಿದರು. ಇಂತಹ ಪ್ರಕರಣಗಳಲ್ಲಿ ವಾಹನ ಮಾಲಕರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಾಹನ ಬಾಡಿಗೆ ನೀಡುವ ಮೊದಲು ವ್ಯಕ್ತಿಗಳ ಪೂರ್ವಾಪರ ಪರಿಶೀಲನೆ ಮಾಡಬೇಕು. ವಾಹನ ಮಾರಾಟವಾದ ಬಳಿಕ ಮಾಲೀಕತ್ವ ಬದಲಾವಣೆ ಮಾಡದೆ ಹಳೆಯ ಹೆಸರಿನಲ್ಲೇ ವಾಹನ ಓಡಿಸುವುದು ಕಾನೂನು ಸಮಸ್ಯೆಗೆ ಕಾರಣವಾಗುತ್ತಿದೆ. ಹೊಸ ವಾಹನಗಳನ್ನು ಕೂಡ ಅಪರಾಧ ಚಟುವಟಿಕೆಗಳಿಗೆ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

Pallakki Utsava/ ಮುಂಡಳ್ಳಿ ಅಮ್ಮನವರ ಅಷ್ಟಬಂಧದಲ್ಲಿ ಸಾಂಗವಾಗಿ ನೆರವೇರಿದ ಪಲ್ಲಕ್ಕಿ ಉತ್ಸವ